Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಬಿಸಿ ಶೋಗೆ ಸಿದ್ಧವಾಗಿರುವ ಬಿಗ್ ಬಿ ಹೇಳಿದ್ದೇನು?
ಈ ಸಂಬಂಧ ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತಾಬ್ "ನಮ್ಮ ಭಾರತದಲ್ಲಿ ಈಗಲೂ ಸಾಕಷ್ಟು ಮಂದಿ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಇದು ಸರ್ಕಾರಕ್ಕೂ ಗೊತ್ತಿರುವ ವಿಷಯವೇ. ಆದರೆ ಇಂಥ ವಿದ್ಯಾವಂತರು, ನಿರುದ್ಯೋಗಿಗಳು ನಾವು ಮಾಡುತ್ತಿರುವ ಈ ಕೆಬಿಸಿಯಲ್ಲಿ ಭಾಗವಹಿಸಬೇಕು. ಒಮ್ಮೆ ಅವರು ಸೆಲೆಕ್ಟ್ ಆದರೆ, ನಂತರ ಅವರು ತಮ್ಮ ಪ್ರತಿಭೆ ಹಾಗೂ ಅದೃಷ್ಟದ ಬಲದಿಂದ ಇಲ್ಲಿ ಹಣ ಗಳಿಸಬಹುದು.
ಮುಂದುವರಿದ ಅಮಿತಾಬ್, ನಿರುದ್ಯೋಗ ಮುಂತಾದ ಸಮಸ್ಯೆಗಳಿಗೆ ಕೇವಲ ಸರ್ಕಾರದ ಕಡೆಯಿಂದ ಮಾತ್ರ ಸಹಾಯ, ಪರಿಹಾರ ಅಪೇಕ್ಷಿಸಲಾಗದು. ಅದಕ್ಕೆ ಭಾರತದಲ್ಲಿರುವ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳೂ ಕೈಜೋಡಿಸಬೇಕು. ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಕೆಬಿಸಿ ಯಿಂದಲೇ ಪರಿಹಾರ ಸಿಗಬೇಕು ಎಂದು ನಿರೀಕ್ಷಿಸುವುದು ತಪ್ಪು. ಸರ್ಕಾರ ಹಾಗೂ ಕಾರ್ಪೋರೇಟ್ ಈ ಕೆಲಸ ಮಾಡುತ್ತಿವೆ, ಅದಿನ್ನೂ ಹೆಚ್ಚಾಗಿ ಮುಂದುವರಿಯಬೇಕಿದೆ ಎಂದಿದ್ದಾರೆ.
"ನನ್ನ ಮುಂದೆ ಸ್ಪರ್ಧಿ ಕುಳಿತಿರುವಾಗ ನಾನು ಅವರ ವೈಯಕ್ತಿಕ ಜೀವನದ ಹೋರಾಟದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುತ್ತೇನೆ. ನನಗೆ ಅವರ ಚಿಂತಾಕ್ರಾಂರ ಹಾಗೂ ಹೋರಾಟದ ಬದುಕಿನ ಕಥೆ ಕೇಳಿ ಸಾಕಷ್ಟು ತಳಮಳವಾಗುತ್ತದೆ. ಆದರೂ ಅದನ್ನು ಕ್ಯಾಮರಾ ಮುಂದೆ ತೋರಗೊಡದೇ ಹೃದಯದಲ್ಲೇ ಬಚ್ಚಿಟ್ಟುಕೊಳ್ಳುತ್ತೇನೆ. ಮೊಬೈಲ್ ಫೋನ್ ಕಾಣದ ಊರುಗಳಿಂದಲೂ ಜನರು ಈ ಶೋದಲ್ಲಿ ಭಾಗವಹಿಸಲು ಬರುತ್ತಾರೆಂಬ ಸಂಗತಿ ಸುಲಭವಾಗಿ ನಂಬಲಾಗದ ಸತ್ಯ" ಎಂದಿದ್ದಾರೆ ಬಿಗ್ ಬಿ. (ಏಜೆನ್ಸೀಸ್)