twitter
    For Quick Alerts
    ALLOW NOTIFICATIONS  
    For Daily Alerts

    ಕೆಬಿಸಿ ಶೋಗೆ ಸಿದ್ಧವಾಗಿರುವ ಬಿಗ್ ಬಿ ಹೇಳಿದ್ದೇನು?

    |

    ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡಲಿರುವ ಟಿವಿ ಗೇಮ್ ಶೋ 'ಕೌನ್ ಬನೇಗಾ ಕರೋಡಪತಿ- ಸೀಸನ್ 6' ಬರುವ ತಿಂಗಳು, 07 ಸೆಪ್ಟಂಬರ್ 2012 ರಾತ್ರಿ 8-30ಕ್ಕೆ ಪ್ರಾರಂಭವಾಗಲಿರುವುದು ಎಲ್ಲರಿಗೂ ಗೊತ್ತಿದೆ. ಈ ಕಾರ್ಯಕ್ರಮದ ಕಳೆದ ಐದೂ ಸೀಸನ್ ಯಶಸ್ವಿಯಾಗಿದ್ದು ಇದೀಗ ಆರನೇ ಸೀಸನ್ ಪ್ರಾರಂಭವಾಗಲಿದೆ. ಈ ಮೊದಲಿನ ಸೀಸನ್ ಗಳನ್ನು ನೋಡಿರುವ ಜಗತ್ತಿನ ಕೋಟ್ಯಾಂತರ ಮಂದಿ ಅಮಿತಾಬ್ ಕೆಬಿಸಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

    ಈ ಸಂಬಂಧ ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತಾಬ್ "ನಮ್ಮ ಭಾರತದಲ್ಲಿ ಈಗಲೂ ಸಾಕಷ್ಟು ಮಂದಿ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಇದು ಸರ್ಕಾರಕ್ಕೂ ಗೊತ್ತಿರುವ ವಿಷಯವೇ. ಆದರೆ ಇಂಥ ವಿದ್ಯಾವಂತರು, ನಿರುದ್ಯೋಗಿಗಳು ನಾವು ಮಾಡುತ್ತಿರುವ ಈ ಕೆಬಿಸಿಯಲ್ಲಿ ಭಾಗವಹಿಸಬೇಕು. ಒಮ್ಮೆ ಅವರು ಸೆಲೆಕ್ಟ್ ಆದರೆ, ನಂತರ ಅವರು ತಮ್ಮ ಪ್ರತಿಭೆ ಹಾಗೂ ಅದೃಷ್ಟದ ಬಲದಿಂದ ಇಲ್ಲಿ ಹಣ ಗಳಿಸಬಹುದು.

    ಮುಂದುವರಿದ ಅಮಿತಾಬ್, ನಿರುದ್ಯೋಗ ಮುಂತಾದ ಸಮಸ್ಯೆಗಳಿಗೆ ಕೇವಲ ಸರ್ಕಾರದ ಕಡೆಯಿಂದ ಮಾತ್ರ ಸಹಾಯ, ಪರಿಹಾರ ಅಪೇಕ್ಷಿಸಲಾಗದು. ಅದಕ್ಕೆ ಭಾರತದಲ್ಲಿರುವ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳೂ ಕೈಜೋಡಿಸಬೇಕು. ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಕೆಬಿಸಿ ಯಿಂದಲೇ ಪರಿಹಾರ ಸಿಗಬೇಕು ಎಂದು ನಿರೀಕ್ಷಿಸುವುದು ತಪ್ಪು. ಸರ್ಕಾರ ಹಾಗೂ ಕಾರ್ಪೋರೇಟ್ ಈ ಕೆಲಸ ಮಾಡುತ್ತಿವೆ, ಅದಿನ್ನೂ ಹೆಚ್ಚಾಗಿ ಮುಂದುವರಿಯಬೇಕಿದೆ ಎಂದಿದ್ದಾರೆ.

    "ನನ್ನ ಮುಂದೆ ಸ್ಪರ್ಧಿ ಕುಳಿತಿರುವಾಗ ನಾನು ಅವರ ವೈಯಕ್ತಿಕ ಜೀವನದ ಹೋರಾಟದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುತ್ತೇನೆ. ನನಗೆ ಅವರ ಚಿಂತಾಕ್ರಾಂರ ಹಾಗೂ ಹೋರಾಟದ ಬದುಕಿನ ಕಥೆ ಕೇಳಿ ಸಾಕಷ್ಟು ತಳಮಳವಾಗುತ್ತದೆ. ಆದರೂ ಅದನ್ನು ಕ್ಯಾಮರಾ ಮುಂದೆ ತೋರಗೊಡದೇ ಹೃದಯದಲ್ಲೇ ಬಚ್ಚಿಟ್ಟುಕೊಳ್ಳುತ್ತೇನೆ. ಮೊಬೈಲ್ ಫೋನ್ ಕಾಣದ ಊರುಗಳಿಂದಲೂ ಜನರು ಈ ಶೋದಲ್ಲಿ ಭಾಗವಹಿಸಲು ಬರುತ್ತಾರೆಂಬ ಸಂಗತಿ ಸುಲಭವಾಗಿ ನಂಬಲಾಗದ ಸತ್ಯ" ಎಂದಿದ್ದಾರೆ ಬಿಗ್ ಬಿ. (ಏಜೆನ್ಸೀಸ್)

    English summary
    Actor-turned-game show host Amitabh Bachchan is set to rock the TV viewers with KBC season 6, says that Kaun Banega Crorepati cannot solve all problems.
 
    Friday, August 31, 2012, 10:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X