Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕವಿತಾ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದ ಅಕ್ಷತಾ.!
Recommended Video
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿದು ವಾರಗಳೇ ಉರುಳಿದರೂ, ಅದರ ಸುತ್ತಲಿನ ವಿವಾದ ಮಾತ್ರ ಇನ್ನೂ ಕಮ್ಮಿ ಆಗಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಕವಿತಾ ಗೌಡ ಬೇಸರಗೊಂಡಿದ್ದಾರೆ, ಗರಂ ಆಗಿದ್ದಾರೆ. ಹೀಗಾಗಿ ಆಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ.
''ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೂ ಆಂಡಿ ಕಿರುಕುಳ ನೀಡುತ್ತಿದ್ದಾರೆ'' ಎನ್ನುವುದು ಕವಿತಾ ಗೌಡ ಆರೋಪ. ಆದ್ರೆ, ಆಂಡಿ ಹೀಗೆಲ್ಲ ಮಾಡುವವನಲ್ಲ ಅಂತ ಮುರಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಅಕ್ಷತಾ ಪಾಂಡವಪುರ ಕೂಡ ಆಂಡ್ರ್ಯೂ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.
''ಕವಿತಾ ಹೊರಗೆ ಬಂದ್ಮೇಲೆ ಕಪಾಳೆ ಹೊಡೆಯುವೆ'' ಅಂತ ಹಿಂದೊಮ್ಮೆ ಅಕ್ಷತಾ ಪಾಂಡವಪುರ ಗುಡುಗಿದ್ದರು. ಕಾರಣ, ಅಕ್ಷತಾ-ರಾಕೇಶ್ ಬಗ್ಗೆ ಗಾಸಿಪ್ ಶುರು ಮಾಡಿದ್ದೇ ಕವಿತಾ.! ಇದೀಗ ಅದೇ ಕವಿತಾ ವಿರುದ್ಧ ಅಕ್ಷತಾ ಸಿಡಿಮಿಡಿಗೊಂಡಿದ್ದಾರೆ. ಮುಂದೆ ಓದಿರಿ....
ಕವಿತಾ ಆಕ್ಟ್ ಮೇಲೆ ಡೌಟ್.!
''ಕವಿತಾ ಕೊಟ್ಟಿರುವ ದೂರಿನ ಪ್ರಕಾರ ಆಂಡಿ ಮಾಡಿದ್ದರೆ ಅದು ತಪ್ಪು. ಆದರೆ ಆಂಡಿ ಹಾಗೆ ಮಾಡಿಲ್ಲ ಎಂಬ ನಂಬಿಕೆ ನನಗೆ ಇದೆ. ಯಾಕಂದ್ರೆ, ಕವಿತಾ ಆಕ್ಟ್ ಮೇಲೂ ನನಗೆ ಡೌಟ್ ಇದೆ'' ಅಂತಾರೆ ಅಕ್ಷತಾ ಪಾಂಡವಪುರ.
'ಬಿಗ್ ಬಾಸ್' ಮುಗಿದ್ಮೇಲೂ ತೊಂದರೆ ತಪ್ಪಿಲ್ಲ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ದೂರು.!
ಕವಿತಾ ಸ್ವಾರ್ಥಿ
''ಕವಿತಾ ತುಂಬಾ ಸ್ವಾರ್ಥಿ. ನಾನು ಹೊರಗೆ ಬಂದ್ಮೇಲೆ ಕವಿತಾ ಮಾಡಿರುವ ಗಾಸಿಪ್ ನೋಡಿದ್ದೇನೆ. ಹಾಗ್ನೋಡಿದ್ರೆ, ನಾನು ಕೂಡ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು. ಆದರೆ ನಾನು ಹಾಕಲಿಲ್ಲ. ಯಾಕಂದ್ರೆ, ಅಲ್ಲಿ ಎಲ್ಲರೂ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಅಣ್ತಮ್ಮ ಅನ್ನೋರೇ ಬೆನ್ನ ಹಿಂದೆ ಚೂರಿ ಹಾಕುತ್ತಾರೆ'' - ಅಕ್ಷತಾ ಪಾಂಡವಪುರ
ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.?
ಆಂಡಿ ಮೃಗ ಅಲ್ಲ.!
''ಬಿಗ್ ಬಾಸ್ ಮುಗಿದ್ಮೇಲೆ ಆಂಡಿ ತುಂಬಾ ಕೆಲಸ ಮಾಡುತ್ತಿದ್ದಾನೆ. ಇದರ ಮಧ್ಯೆ ಆತ ಎಲ್ಲಿ ಕವಿತಾಗೆ ತೊಂದರೆ ಕೊಡುತ್ತಾನೆ.? ಕವಿತಾ ಗಂಭೀರ ಆರೋಪ ಮಾಡಿದ್ದಾರೆ. ಖಂಡಿತ ಆಂಡಿ ಹಾಗೆ ಮಾಡಿರಲು ಸಾಧ್ಯವೇ ಇಲ್ಲ. ತಾನು ತಿಂದು ಬೇರೆಯವರ ಮೂತಿಗೆ ಒರೆಸುವ ಕ್ಯಾರೆಕ್ಟರ್ ಕವಿತಾ ರದ್ದು. ಅದು ನಮಗೆ ಗೊತ್ತಾಗಿದೆ. ಆಂಡಿ ಆಟ ಆಡಿದ್ದಾನೆ ನಿಜ. ಆದ್ರೆ, ಆತ ಮನುಷ್ಯ. ಮೃಗ ಅಲ್ಲ'' - ಅಕ್ಷತಾ ಪಾಂಡವಪುರ
''ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮುರಳಿ.!
ಇದು ಸೃಷ್ಟಿ
''ಇದು ನಿಜವಾಗಿಯೂ ಸೃಷ್ಟಿ. ಚಾನೆಲ್ ನವರ ಮೇಲೆಯೂ ಕವಿತಾ ಕಂಪ್ಲೇಂಟ್ ಕೊಟ್ಟಿದ್ದಾಳೆ. ಬಹುಶಃ ಅವಳಿಗೆ ಏನು ಆಗಬೇಕಿತ್ತೋ, ಅದು ಆಗಿಲ್ಲ. ಅದಕ್ಕೆ ಇದೆಲ್ಲ ಅನ್ಸುತ್ತೆ. ಕೆಲಸ ಇಲ್ಲದಿರುವಾಗಲೇ ಹೀಗೆಲ್ಲಾ ಆಗೋದು'' ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ ಅಕ್ಷತಾ ಪಾಂಡವಪುರ. (ಕೃಪೆ - ಫಸ್ಟ್ ನ್ಯೂಸ್)
ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಗುಡುಗಿದ ಅಕ್ಷತಾ.! ಯಾಕೆ.?