Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆಯಲ್ಲಿ ಕವಿತಾ ಲಂಕೇಶ್ ಸೆಕೆಂಡ್ ಇನ್ನಿಂಗ್ಸ್
ಈ ಬಾರಿ ಅವರು ಸೆಂಟಿಮೆಂಟ್, ಎಮೋಷನಲ್ ಹಾಗೂ ಸಸ್ಪೆನ್ಸ್ ಅಂಶಗಳೊಂದಿಗೆ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ಅಕ್ಟೋಬರ್ 22ರಿಂದ ಸೋಮವಾರದಿಂದ ಶುಕ್ರವಾರದತನಕ ರಾತ್ರಿ 8ಗಂಟೆಗೆ ಕವಿತಾ ಅವರ ಧಾರಾವಾಹಿ ಮೂಡಿಬರಲಿದೆ.
ಮದುವೆಯಾಗದೆ ಉಳಿದಿರುವ ಅಕ್ಕ ರೇವತಿ ಹಾಗೂ ಅವಳ ಪ್ರೀತಿಯ ತಂಗಿ ಶ್ರೀಮತಿ ಈ ಧಾರಾವಾಹಿಯ ಪ್ರಮುಖ ಪಾತ್ರಗಳು. ಇವರಿಬ್ಬರ ಬಾಳಿನಲ್ಲಿ ಬಿರುಗಾಳಿಯಂತೆ ಪ್ರಭಾಕರ ಪ್ರವೇಶಿಸುತ್ತಾನೆ. ಆತನೊಬ್ಬ ಸ್ಯಾಡಿಸ್ಟ್.
ಇವರಿಬ್ಬರಲ್ಲಿ ತನ್ನ ಪ್ರೀತಿಯ ಶ್ರೀಮತಿಯಾಗಿ ಪ್ರಭಾಕರ ಯಾರನ್ನು ಆಯ್ಕೆ ಮಾಡುತ್ತಾನೆ ಎಂಬುದೇ ಕಥೆಯ ಸಾರಾಂಶ. ಹಾಗಾಗಿಯೇ ಧಾರಾವಾಹಿಗೆ "ನನ್ನ ಪ್ರೀತಿಯ ಶ್ರೀಮತಿ: ಎಂದು ಹೆಸರಿಡಲಾಗಿದೆ.
ಕಿರುತೆರೆ ಕಲಾವಿದರಾದ ಸ್ನೇಹಾ (ರೇವತಿ ಪಾತ್ರ), ಅನುಶ್ರೀ (ಶ್ರೀಮತಿ ಪಾತ್ರ), ಹರ್ಷವರ್ಧನ್ ಚಿತ್ರದ ನಾಯಕ ನಟ. ಇವರ ಜೊತೆಗೆ ಶೃಂಗೇರಿ ರಾಮಣ್ಣ, ಶೋಭಾ, ಬಿಎಲ್ ಮಂಜುಳಾ, ಅಕ್ಷಯ್, ಚಿಕ್ಕಣ್ಣ, ರಶ್ಮಿ, ಪ್ರಕೃತಿ ಸೇರಿದಂತೆ ಹೊಸ ಕಲಾವಿದರ ಬಳಗವೇ ಇದೆ.
ಈ ಧಾರಾವಾಹಿ ಮೂಲಕ ಜೀ ಕನ್ನಡದ ಟಿಆರ್ ಪಿಯನ್ನೂ ಹೆಚ್ಚಿಸುವ ಕೆಲಸಕ್ಕೆ ಕವಿತಾ ಲಂಕೇಶ್ ಮುಂದಾಗಿದ್ದಾರೆ. ಒಟ್ಟಿನಲ್ಲಿ ದೇವಿರಿ, ಪ್ರೀತಿ ಪ್ರೇಮ ಪ್ರಣಯ, ಅವ್ವ ಹಾಗೂ ಕ್ರೇಜಿಲೋಕದಂತಹ ಸದಭಿರುಚಿಯ ಚಿತ್ರಗಳನ್ನು ಕೊಟ್ಟಂತಹ ಕವಿತಾ ಅವರು ಕಿರುತೆರೆ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತಾರೆ ಎಂಬುದನ್ನು ಕಾದುನೋಡಬೇಕು. (ಒನ್ಇಂಡಿಯಾ ಕನ್ನಡ)