ಒಂದು ಕೋಟಿ ಗೆಲ್ಲಲು ಅಡ್ಡಗೋಡೆಯಾದ ಪ್ರಶ್ನೆ ಇದು: ನಿಮಗೆ ಗೊತ್ತೆ ಉತ್ತರ?
ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ಪತಿ ಶೋ ಹಲವರು ಭಾಗ್ಯವನ್ನು ಈವರೆಗೆ ಬದಲಿಸಿದೆ.
ದೇಶದ ಮೂಲೆ-ಮೂಲೆಗಳಿಂದ ಬಂದ ಜನ ಅಮಿತಾಬ್ ಎದುರು 'ಹಾಟ್ ಸೀಟ್'ನಲ್ಲಿ ಕೂತು, ತಮ್ಮ ಸಾಮಾನ್ಯ ಜ್ಞಾನವನ್ನು ಪಣಕ್ಕಿಟ್ಟು ಹಣ ಗೆಲ್ಲುತ್ತಾರೆ, ಆಸೆ ಪೂರೈಸಿಕೊಳ್ಳುತ್ತಾರೆ.
ನಿನ್ನೆ ಪ್ರಸಾರವಾದ ಶೋ ನಲ್ಲಿ ಅಮಿತಾಬ್ ಎದುರಿಗೆ ಕೂತಿದ್ದ ಸ್ಪರ್ಧಿ ಅದ್ಭುತ ಆಡಿದ್ದು ಮಾತ್ರವಲ್ಲದೆ ಶೋ ನೋಡಿದ ಎಷ್ಟೋ ಮಂದಿಗೆ ಸ್ಪೂರ್ತಿಯನ್ನು ನೀಡಿದ್ದಾರೆ. ಸ್ಪರ್ಧಿಯ ಹೆಸರು ತೇಜ್ ಬಹುದ್ದೂರ್ ಸಿಂಗ್.

ಬಡ ರೈತ ಕುಟುಂಬದಿಂದ ಬಂದ ತೇಜ್ ಬಹದ್ದೂರ್ ಸಿಂಗ್, ಐಎಎಸ್ ಮುಗಿಸಿ, ದೊಡ್ಡ ಹುದ್ದೆಗೆ ಏರಬೇಕೆಂಬ ಕನಸು ಇಟ್ಟುಕೊಂಡವರು. ಶೋ ನಡೆಯುವಾಗ ಭಾವುಕಗೊಂಡ ತೇಜ್ ಬಹದ್ದೂರ್, 'ನನ್ನ ತಾಯಿ ನನ್ನೊಂದಿಗೆ ಈ ಶೋಗೆ ಬರಬೇಕೆಂಬ ಆಸೆಯಿಂದ ಟಿಕೆಟ್ ಗೆ ಹಣ ಹೊಂದಿಸಲು ತನ್ನ ಒಡವೆಯನ್ನು ಗಿರವಿ ಇಟ್ಟಿದ್ದಾಳೆ, ಈಗ ಆಕೆ ಧರಿಸಿರುವ ಒಡವೆ ಆಕೆಯದ್ದಲ್ಲ' ಎಂದು ಕಣ್ಣೀರು ಹಾಕಿದರು.
ತೋಟದಲ್ಲಿ ದುಡಿಯುವ ತೇಜ್ ಬಹದ್ದೂರ್ ಅವರ ಪ್ರತಿಭೆ ಅವರಿಗೆ ಮೋಸ ಮಾಡಲಿಲ್ಲ, ಅದ್ಭುತವಾಗಿ ಆಡಿದರು ತೇಜ್. ಶೋ ನಲ್ಲಿ ಒಂದು ಕೋಟಿ ಪ್ರಶ್ನೆಯವರೆಗೆ ಹೋದರು. ಆದರೆ ಒಂದು ಕೋಟಿ ಪ್ರಶ್ನೆ ತೇಜ್ ಬಹದ್ದೂರ್ಗೆ ಕೈಕೊಟ್ಟಿತು. 50 ಲಕ್ಷ ಹಣದೊಂದಿಗೆ ಶೋ ಕ್ವಿಟ್ ಮಾಡಿದರು.
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾದಲ್ಲಿ ಮುಖ್ಯಪಾತ್ರವಹಿಸಿದ್ದ ಮಂಗಲ್ ಪಾಂಡೆ ಯಾವ ರೆಜಿಮೆಂಟಿಗೆ ಸೇರಿದ್ದವರಾಗಿದ್ದರು?
a) 5th ಲೈಟ್ ಇನ್ಫ್ಯಾಂಟ್ರಿ
b) 20th ಬೆಂಗಾಲ್ ನೇವಿ ಇನ್ಫ್ಯಾಂಟ್ರಿ
c) ಪೂನಾ ಹಾರ್ಸ್
d) 34th ಬೆಂಗಾಲ್ ನೇವಿ ಇನ್ಫ್ಯಾಂಟ್ರಿ
ಸರಿ ಉತ್ತರ: d) 34th ಬೆಂಗಾಲ್ ನೇವಿ ಇನ್ಫ್ಯಾಂಟ್ರಿ


Click it and Unblock the Notifications











