Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಭ್-ವಿಕ್ರಂ ಜೋಡಿಯಿಂದ ವಾಸವದತ್ತಾ ಪ್ರೇಮಕಥೆ
ಏನೆಂದರೆ ಕರೋಡ್ ಪತಿಯಾದರೆ ಹೀರೊ ಆಗಿ ಅಮಿತಾಭ್ ಎಂಬ ಮೇರುಪರ್ವತವನ್ನು ಹಾಕಿಕೊಂಡು ಅದ್ಭುತ ಕನ್ನಡಾ ಸಿನಿಮಾ ಮಾಡಬೇಕು ಎಂಬುದು ವಿಕ್ರಂ ಅವರ ಕನಸಾಗಿತ್ತಂತೆ. ಅದಕ್ಕೆ ಕಾರ್ಯಕ್ರಮದ ಮಧ್ಯೆ ಅಮಿತಾಭ್ ಸ್ಪಂದಿಸಿದ ರೀತಿ ಗಮನಿಸಿದಾಗ ಅಮಿತಾಭ್ ಹಿಮಾಲಯದ ಎತ್ತರಕ್ಕೆ ಏರಿರುವುದು ಶೃತಪಡುತ್ತದೆ.
ಈ ಇಳಿವಯಸ್ಸಿನಲ್ಲೂ ನಟನೆಯಲ್ಲಿ ಒಂದೇ ಒಂದು ಚಾನ್ಸ್ ಗಾಗಿ ನಿರ್ಮಾಪಕ/ನಿರ್ದೇಶಕರ ಮನೆ ಬಾಗಿಲು ಬಡಿಯುವ ಅಪ್ಪಟ ಕಲಾವಿದ ತಾನು ಎಂಬುದನ್ನು ಅವರು ತೋರಿಸಿಕೊಟ್ಟರು. ಇದನ್ನು ನೋಡಿದಾಗ ಒಂದೆರಡು ಸಿನಿಮಾಗಳು ಕ್ಲಿಕ್ ಆಗುತ್ತಿದ್ದಂತೆ ಆಕಾಶದಲ್ಲಿ ಹಾರಾಡುವ ಇಂದಿನ ಕಲಾವಿದರು ಎಷ್ಟೊಂದು ಕುಬ್ಜರಾಗುತ್ತಿದ್ದಾರೆ ಎನಿಸುತ್ತದೆ.
ವಿಕ್ರಂ ತಮ್ಮ ಮನವಿಯನ್ನು rather ಕನಸನ್ನು ಅಮಿತಾಭ್ ಮುಂದೆ ಹರವಿಕೊಂಡಾಗ 'ಚಿತ್ರರಂಗದಲ್ಲಿ ನನಗೆ 40 ವರ್ಷಗಳ ಅನುಭವವಷ್ಟೇ ಇರುವುದು. ಈ ಕಲಾವಿದನನ್ನು ನಿನ್ನ ಸೇವೆಗೆ ಮುಡಿಪಾಗಿಡುತ್ತೇನೆ. ಹೇಗೆ ಬೇಕಾದರೂ ಬಳಸಿಕೋ. ವಿಳಾಸ ಕೊಟ್ಟರೆ ನಾನೇ ನಿನ್ನ ಮನೆ ಬಾಗಿಲಿಗೆ ಬರುವೆ' ಎಂದು ವಿಕ್ರಂಗೆ ವಿನಮ್ರವಾಗಿ ಉತ್ತರಿಸಿದರು.
ಸರಿ, ಇಷ್ಟಕ್ಕೂ ವಿಕ್ರಂ ಹೇಳಿದ ಕಥೆ ಯಾವುದು ಎಂದು ಕೇಳಿದಿರಾ. ಅದೇ ಅದ್ಭುತ ಕಥೆ. ಸಂಸ್ಕೃತ ನಾಟಕ ವಾಸವದತ್ತಾ ಪ್ರೇಮ ಕಥೆ. ವಿಕ್ರಂ ತಮ್ಮ ಈ ಚಿತ್ರದ ಕಲ್ಪನೆಯಲ್ಲಿ ಅಮಿತಾಭರನ್ನು ಚಿತ್ರಸೇನಾ ಪಾತ್ರಧಾರಿಯನ್ನಾಗಿ ಕಂಡಿದ್ದಾರಂತೆ! ಮುಂದೊಂದು ದಿನ ವಿಕ್ರಂಗೆ ಇದೂ ಕೈಗೂಡಲಿ ಎಂದು ಹಾರೈಸುತ್ತಾ...