Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಪಾಟೀಲ್ ಪ್ರಶ್ನೆಗೆ ವಿಕ್ರಂ ತಿಣುಕಾಡಿದ್ದು ಅಕ್ಷಮ್ಯ
ಹಾಗೆಂದ ತಕ್ಷಣ ಕನ್ನಡನಾಡಿನ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಎಲ್ಲರೂ ತಿಳಿದುಕೊಂಡಿರಬೇಕು ಎಂದಲ್ಲ. ಆದರೂ ಯಾಕೋ... ಬೇಜಾರಾಗುತ್ತದೆ. ಕರ್ನಾಟಕದ ಇಂದಿನ ಲೋಕಾಯುಕ್ತ ಯಾರು ಎಂದು ಕೇಳಿದ್ದ ಪ್ರಶ್ನೆ ಅದು. ದೌರ್ಭಾಗ್ಯವೆಂದರೆ, ವಿಕ್ರಂ ಅವರ ಫೋನ್ ಎ ಫ್ರೆಂಡ್ ವಿ. ಮಂಜುನಾಥ್ ಸಹ ಇದಕ್ಕೆ ಸರಿಯಾದ ಉತ್ತರ ನೀಡಲಿಲ್ಲ. ಕೊನೆಗೆ ತಮ್ಮ ಅಂತಃಸತ್ವವನ್ನು ಬಡಿದೆಬ್ಬಿಸುವ ರೀತಿಯಲ್ಲಿ ಸ್ವತಃ ವಿಕ್ರಂ ಅವರೇ ಶಿವರಾಜ್ ವಿ ಪಾಟೀಲ್ ಎಂದು ಹೇಳಿ, ಸಮಾಧಾನದ ಉತ್ತರ ನೀಡಿದರು.
ಓಕೆ! ಲವ್ ಅಂಡ್ ವಾರಿನಲ್ಲಿ ಎಲ್ಲವೂ ನಡೆಯುತ್ತದೆ. ಭದ್ರವಾತಿಯಲ್ಲಿ ಹುಟ್ಟಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಿಕ್ರಂ ಕನ್ನಡಿಗರ ಬಗ್ಗೆ ಕೇಳಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿಲ್ಲವೆಂದು ಅವರನ್ನು ಹೀಗೆಳೆಯುವ ಹಾಗಿಲ್ಲ. ಏಕೆಂದರೆ ಅವರದು ನಿಜಕ್ಕೂ ಅದ್ಭುತ ಸಾಧನೆಯೇ. ಅಮಿತಾಭ್ ಎದುರಿಗೆ ಹಾಟ್ ಸೀಟಿನಲ್ಲಿ ವಿರಾಜಮಾನರಾಗಬೇಕು ಎಂಬುದು ಕೋಟಿ ಕೋಟಿ ಜನರ ಕನಸು. ಅಂಥಾದ್ದರಲ್ಲಿ ಈ ವಿಕ್ರಮ ...
ಎಷ್ಟೂ ಕಠಿಣ ಪ್ರಶ್ನೆಗಳು ಬುದ್ಧಿವಂತ ವಿಕ್ರಂಗೆ ನೀರು ಕುಡಿದಷ್ಟು ಸುಲಭವಾಗಿದ್ದವು. 5 ಕೋಟಿ ರೂಪಾಯಿ ಬಹುಮಾನದ ಕೆಬಿಸಿ ಕ್ವಿಜ್ ಕಾರ್ಯಕ್ರಮದಲ್ಲಿ ಒಟ್ಟು 13 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರಲ್ಲಿ ವಿಕ್ರಂ 11 ಪ್ರಶ್ನೆಗಳಿಗೆ ಸರಿಯಾದ ಉತ್ತರ ಲಾಕ್ ಮಾಡಿ ಜಯಭೇರಿ ಬಾರಿಸಿದರು. ವಿಕ್ರಂ ಅವರ ಕಂಪ್ಯಾನಿಯನ್ ಆಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅವರಪ್ಪ ಲಕ್ಷೀಕಾಂತ ಕುಳಿತಲ್ಲಿಯೇ ಆನಂದಭಾಷ್ಪ ಸುರಿಸಿದರು. ಪುತ್ರನ ಯಶಸ್ಸು ಕಂಡು ಅವರ ಬಾಯಿಂದ ಶಬ್ದಗಳೇ ಹೊರಡಲಿಲ್ಲ... ಬರೀ ಆನಂದಭಾಷ್ಪ.
ಪುರೋಹಿತರಾಗಿದ್ದುಕೊಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬಹುದು ಎಂಬ ಎಣಿಕೆ ಎಲ್ಲೋ ತಪ್ಪುತ್ತಿದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಜವಾಬ್ದಾರಿಯುತ ತಂದೆಯಾಗಿ ಎಸ್ ಟಿಡಿ ಬೂತೊಂದನ್ನು ತೆರೆದು ಮಗನ ವ್ಯಾಸಂಗವೇ ತನ್ನ ಜೀವನದ ಪರಮೋಚ್ಛ ಗುರಿ ಎಂದವರು ಲಕ್ಷ್ಮಿಕಾಂತ. ಕಷ್ಟಪಟ್ಟು ಮಗನನ್ನು ಇಂಜಿನಿಯರನ್ನಾಗಿ ಮಾಡಿಸಿದರು. ಅದೂ ಎಂಥಾ ಕಂಪನಿಯಲ್ಲಿ ಎನ್ನುತ್ತೀರಿ? ಮೈಕ್ರೋಸಾಫ್ಟ್ ಎಂಬ ದೈತ್ಯ ಕಂಪನಿಯಲ್ಲಿ. ಹೆಮ್ಮೆಯ ಪುತ್ರ ವಿಕ್ರಂ 2011ನೇ ಸಾಲಿನಲ್ಲಿ ಕೆಬಿಸಿ-5ನಲ್ಲಿ 50 ಲಕ್ಷ ಗೆದ್ದಿದ್ದಕ್ಕೆ ಕನ್ನಡಿಗರ ಹೃದಯಪೂರ್ವಕ ಅಭಿನಂದನೆಗಳು.