ಕೆಂಡಸಂಪಿಗೆ ಧಾರಾವಾಹಿಯಿಂದ ಹೊರಬಂದ ಕಾವ್ಯ ಹೇಳಿದ್ದೇನು..?
ಕೆಂಡ ಸಂಪಿಗೆ ಧಾರವಾಹಿ ಕಲರ್ಸ್ ಕನ್ನಡದಲ್ಲಿ ಬಹಳ ಅದ್ಭುತವಾಗಿ ಪ್ರಸಾರ ಆಗಿತ್ತು. ಆದರೆ ಮಧ್ಯದಲ್ಲೇ ಹೀರೋಯಿನ್ ಸಡನ್ ಆಗಿ ಚೇಂಜ್ ಕೂಡ ಆಯಿತು. ಹೌದು, ಕೆಂಡಸಂಪಿಗೆಯಲ್ಲಿ ಕಾವ್ಯ ಶೈವ ಮೊದಲಿಗೆ ನಾಯಕಿ ಪಾತ್ರಧಾರಿಯಾಗಿ ಕಾಣಿಸಿಕೊಂಡರು. ಅನೇಕರು ಕಾವ್ಯ ಅಭಿನಯವನ್ನು ಬಹಳಷ್ಟು ಖುಷಿ ಪಟ್ಟಿದ್ದರು. ಆದರೆ ಕೆಂಡ ಸಂಪಿಗೆಯಿಂದ ಕಾವ್ಯ ಶೈವ ಹೊರಗಡೆ ಬಂದಿರುವುದನ್ನು ಕಂಡು ಹಲವಾರು ಜನ ಒಂದೊಂದಾಗಿಯೇ ಮಾತನಾಡಲು ಶುರು ಮಾಡಿದರು
ಹೀಗಾಗಿಯೇ ಸ್ಪಷ್ಟೀಕರಣ ನೀಡಿರುವ ಕಾವ್ಯ ನಾನು ಕೆಂಡಸಂಪಿಗೆ ಲಾಸ್ಟ್ ಶೂಟ್ ಮಾಡಿದ್ದು ಮೇ ತಿಂಗಳಲ್ಲಿ. ಡಿಕೆಡಿ ಶೂಟ್ ಇದ್ದಿದ್ದು ಜುಲೈ ನಲ್ಲಿ, ಕೆಂಡಸಂಪಿಗೆಯನ್ನು ಡಿಕೆಡಿ ಗಾಗಿ ಬಿಟ್ಟಿಲ್ಲ. ಮೆಂಟಲಿ ನಾನು ಕೊಂಚ ಡಿಸ್ಟರ್ಬ್ ಆಗಿದ್ದೆ ಬದಲಾವಣೆ ಬೇಕೆಂದು ಎಂಬ ಕಾರಣಕ್ಕಾಗಿ ನಾನು ಕೆಂಡಸಂಪಿಗೆ ಧಾರವಾಹಿಯಿಂದ ಆಚೆ ಬಂದೆ. ಡ್ಯಾನ್ಸ್ ಕ್ಲಾಸ್ ಗೆ ಹೋಗಬೇಕು ಅಂದುಕೊಂಡೆ, ಅದೇ ವೇಳೆ ಡಿಕೆಡಿಯಿಂದ ಆಫರ್ ಬಂತು ಎಂದು ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಕಾವ್ಯ ಶೈವ ಅವರು ಹೇಳಿದ್ದಾರೆ .

ಡಿಕೆಡಿ ಶೋನಲ್ಲಿ ಗೆಲುವಿನ ನಗೆ ಬೀರಿದ್ದ ಕಾವ್ಯ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ 'ಕೆಂಡಸಂಪಿಗೆ' ಧಾರಾವಾಹಿ ನಟಿ ಕಾವ್ಯ ಶೈವ ಅವರು ಭಾಗವಹಿ ಇದೀಗ ಗೆಲುವಿನ ನಗೆ ಬೀರಿದ್ದಾರೆ. ಡಿಕೆಡಿಯಲ್ಲಿ ವಿನ್ನರ್ ಆಗಿ ಈಗಾಗಲೇ ಒಳ್ಳೆಯ ಪರ್ಫಾಮೆನ್ಸ್ ಕೊಟ್ಟು ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಹಾಗೆಯೇ ಸಾಕಷ್ಟು ಬಾರಿ ಡಿಕೆಡಿ ಶೋ ನಲ್ಲಿ ಉತ್ತಮ ಕೆಲಸಗಳನ್ನು ಮಾಡಿ ಜನರ ಮನಸನ್ನು ಗೆದ್ದಿರುವುದು ಮಾತ್ರ ಸತ್ಯ. ನಟ ಶಿವರಾಜ್ ಕುಮಾರ್ ಅವರು ಕೂಡ ಕಾವ್ಯ ಮಾಡಿದ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾವ್ಯ ಗುಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಶಿವಣ್ಣ
ಮೊದಲಿಗೆ ಕಾವ್ಯ ಗೆ ಡಿಕೆಡಿ ಯಲ್ಲಿ ಭಾಗವಹಿಸಲು ಬಹಳಷ್ಟು ಕಷ್ಟ ಆಗಿತ್ತು. ಬಹಳ ಭಯ ಆಗಿತ್ತು ಆದರೆ ಬರು ಬರುತ್ತಾ ಉತ್ತಮ ಪರ್ಮೆನ್ಸ್ ಕೊಟ್ಟು ಅಭಿಮಾನಿಗಳಿಗೆ ಬಹಳಷ್ಟು ಹತ್ತಿರ ಆಗಿದ್ದಾರೆ. ಶಿವರಾಜ್ಕುಮಾರ್, ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ, ಚಿನ್ನಿ ಪ್ರಕಾಶ್ ಅವರು ಈ ಶೋನಲ್ಲಿ ತೀರ್ಪುಗಾರರಾಗಿದ್ದರು. ಕಾವ್ಯ ಶೈವ ಅವರು ಈಗಾಗಲೇ ಕೆಂಡಸಂಪಿಗೆ ಮೂಲಕ ಜನರಿಗೆ ಬಹಳಷ್ಟು ಹತ್ತಿರ ಆಗಿದ್ದರು. ಇದೀಗ ಮತ್ತೆ ಯಾವ ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications











