Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಂಡಸಂಪಿಗೆ: ಮನೆಯಿಂದ ಹೊರಗೆ ಹೋಗ್ತಾಳ ಸುಮನಾ...?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಹಲವಾರು ಧಾರಾವಾಹಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಈ ಧಾರಾವಾಹಿ. ಕೌನ್ಸಿಲರ್ ತೀರ್ಥಂಕರ ಪ್ರಸಾದ್ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಯಾಗಿದ್ದ ರೌಡಿ ಬಾಯ್ಬಿಟ್ಟ ಸತ್ಯದ ಆಧಾರದಲ್ಲಿ ಕಾಶಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದರಿಂದಾಗಿ ಆತ ಬಾಯ್ಬಿಟ್ಟ ಸುಳ್ಳು ಸುಮನಾಳ ಜೀವನಕ್ಕೆ ಕುತ್ತಾಗಿ ಪರಿಣಮಿಸಿದೆ. ಕಾಶಿ ಸುಮನಾಳನ್ನು ಪ್ರೀತಿ ಮಾಡುತ್ತಿದ್ದೆ ಎಂದು ಹೇಳುವ ಮೂಲಕ ಕಥೆಗೊಂದು ತಿರುವು ಕೊಟ್ಟಿದ್ದಾನೆ. ಇದು ಮೀಡಿಯಾದಲ್ಲಿ ಪ್ರಸಾರವಾದ ಮೇಲೆ ಮನೆಯಲ್ಲಿರುವ ತೀರ್ಥನ ಅತ್ತಿಗೆ ಸಾಧನಾಳ ಕುತಂತ್ರದಿಂದ ಸುಮನಾ ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ಬಂದಿದೆ.
ಮಾಧ್ಯಮಗಳಲ್ಲಿ ಸುಮನಾ ಬಗ್ಗೆ ಕಟ್ಟದಾಗಿ ಬಂದ ಕಾರಣ ಸಾಧನಾ ಮನೆಯ ಯಜಮಾನ ದೊಡ್ಡಣ್ಣನ ತಲೆಗೆ ಇಲ್ಲದ್ದನ್ನು ತುಂಬಿದ್ದಾಳೆ. ಇದರಿಂದ ದುಡ್ಡು ಇಲ್ಲದ ಕಾಶಿ ಬಿಟ್ಟು ಸುಮನಾ ಕೌನ್ಸಿಲರ್ ತೀರ್ಥನನ್ನು ಮದುವೆಯಾಗಿದ್ದಾಳೆ ಎಂದು ಕಿವಿಯನ್ನು ಊದುವ ಮೂಲಕ ಮತ್ತೆ ಮನೆಯಿಂದ ಹೊರಗೆ ಹಾಕುವ ಪ್ಲ್ಯಾನ್ ಮಾಡಲಾಗಿದೆ.
ಇನ್ನೂ ಅತ್ತೆ ಮನೆಯಲ್ಲಿ ಇಲ್ಲದಾಗ ಸುಮನಾಳನ್ನು ಹೊರಗೆ ಹಾಕುವ ಕುತಂತ್ರ ನಡೆದಿದೆ. ಈ ಕುತಂತ್ರದಿಂದ ಹೇಗೆ ಪಾರಾಗುತ್ತಾಳೆ ಸುಮನಾ ಎಂಬುದನ್ನು ಕಾದು ನೋಡಬೇಕಾಗಿದೆ. ತೀರ್ಥ ಬಂಸು ಸುಮನಾಳನ್ನು ಕಾಪಾಡುತ್ತಾನಾ ಅಥವಾ ಅವಳೆ ಯಾವುದಾದರೊಂದು ದಾರಿಯನ್ನು ಹುಡುಕುತ್ತಾಳ ನೋಡಬೇಕಾಗಿದೆ.