Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೆಜಿಎಫ್'ಗೆ ಸಂಬಂಧಿಸಿದಂತೆ ಇಂದು ಎರಡು ಘಟನೆ ನಡೆಯಿತು
Recommended Video
ಕನ್ನಡ ಚಿತ್ರರಂಗವನ್ನು ದೇಶ ಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ್ದ ಸಿನಿಮಾ 'ಕೆಜಿಎಫ್'. ಈ ಬಂಗಾರದ ಸಿನಿಮಾದ ಎರಡನೇ ಅಧ್ಯಾಯದ ಮುಹೂರ್ತ ಇಂದು ನೆರವೇರಿದೆ.
'ಕೆಜಿಎಫ್' ಸಿನಿಮಾದ ಡೈಲಾಗ್ ನಲ್ಲಿ ಇರುವ ಹಾಗೇಯೇ ಈ ದಿನ ಎರಡು ಘಟನೆ ನಡೆದಿದೆ. ಒಂದು ಕಡೆ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಮಹೂರ್ತ ಕಾರ್ಯಕ್ರಮ ನಡೆದರೆ, ಇತ್ತ 'ಕೆಜಿಎಫ್ ಚಾಪ್ಟರ್ 1' ಸಿನಿಮಾದ ಟಿವಿ ಪ್ರಸಾರ ದಿನಾಂಕ ಹೊರ ಬಂದಿದೆ.
ಯಾವ ದೇವಸ್ಥಾನದಲ್ಲಿ ನಡೆಯಿತು 'ಕೆಜಿಎಫ್ ಚಾಪ್ಟರ್ 2' ಮುಹೂರ್ತ
ಕಲರ್ಸ್ ಕನ್ನಡ ವಾಹಿನಿ ಚಿತ್ರದ ಪ್ರಸಾರ ದಿನವನ್ನು ಬಹಿರಂಗ ಪಡಿಸಿದೆ. ಈಗಾಗಲೇ, ಹಿಂದಿಯಲ್ಲಿ ಚಿತ್ರ ಪ್ರಸಾರ ಆಗಿದ್ದು, ಕನ್ನಡದಲ್ಲಿ ಸಿನಿಮಾ ನೋಡುವ ಕಾಲ ಇದೀಗ ಬಂದಿದೆ. ಮುಂದೆ ಓದಿ...
ಮಾರ್ಚ್ 30 ರಂದು ಪ್ರಸಾರ
'ಕೆಜಿಎಫ್' ಮೊದಲ ಅಧ್ಯಾಯದ ಟಿವಿ ಪ್ರಸಾರ ಹಕ್ಕನ್ನು ಕಲರ್ಸ್ ಕನ್ನಡ ವಾಹಿನಿ ಪಡೆದುಕೊಂಡಿತ್ತು. ಇದೀಗ ಆ ಚಿತ್ರದ ಪ್ರಸಾರ ದಿನಾಂಕವನ್ನು ಅನೌನ್ಸ್ ಮಾಡಲಾಗಿದೆ. 'ಕೆಜಿಎಫ್' ಟಿವಿಯಲ್ಲಿ ಇದೇ ತಿಂಗಳ 30 ರಂದು ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ.
|
ದಿಗ್ಗಜರ ಹುಟ್ಟುಹಬ್ಬಕ್ಕೆ ಸಿನಿಮಾ
ವಿಶೇಷ ಏನೆಂದರೆ, 'ಕೆಜಿಎಫ್' ಸಿನಿಮಾ ಪ್ರಸಾರ ಆಗುವ ಆಸು ಪಾಸಿನಲ್ಲಿಯೇ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜ ನಟರ ಹುಟ್ಟುಹಬ್ಬ ಇದೆ. ನಟ ರವಿಚಂದ್ರನ್ ಹುಟ್ಟುಹಬ್ಬ ಮಾರ್ಚ್ 30 ರಂದು ಇದ್ದರೆ, ಮಾರ್ಚ್ 29 ರಂದು ನಟ ಅಂಬರೀಶ್ ಅವರ ಹುಟ್ಟುಹಬ್ಬದ ಸವಿ ನೆನಪು.
'ಕೆಜಿಎಫ್ ಚಾಪ್ಟರ್-2' ಚಿತ್ರಕ್ಕೆ ಬರ್ತಾರಂತೆ ಬಾಲಿವುಡ್ ಖ್ಯಾತ ನಟಿ.?
ಇಂದಿನಿಂದ ಚಾಪ್ಟರ್ 2 ಶುರು
'ಕೆಜಿಎಫ್ ಚಾಪ್ಟರ್ 2' ಸಿನಿಮಾ ಚಿತ್ರೀಕರಣ ಇಂದಿನಿಂದ ಶುರು ಆಗಿದೆ. ಇಂದು ಸಿನಿಮಾದ ಮುಹೂರ್ತ ವಿಜಯನಗರದ ಕೋದಂಡರಾಮ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಅಂದಹಾಗೆ, ನಟ ಯಶ್, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದರು, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾಟೋಗ್ರಾಫರ್ ಭುವನ್ ಗೌಡ ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
|
'ಕೆಜಿಎಫ್ 2' ಬಗ್ಗೆ ಯಶ್ ಟ್ವೀಟ್
'ಕೆಜಿಎಫ್ ಚಾಪ್ಟರ್ 2' ಬಗ್ಗೆ ನಟ ಯಶ್ ಟ್ವೀಟ್ ಮಾಡಿದ್ದಾರೆ. ''ಕೆಜಿಎಫ್ ಚಾಪ್ಟರ್ 1' ಸಿನಿಮಾ ನಿಮ್ಮೆರಲ್ಲ ಪ್ರೀತಿ ಪಡೆದ ನಂತರ, ಈಗ ಚಾಪ್ಟರ್ 2 ಡಬಲ್ ಧಮಾಕ ಮಾಡಲು ಸಜ್ಜಾಗಿದೆ. ಇದಕ್ಕೆ ನಿಮಗೆ ಆಶೀರ್ವಾದ ಮತ್ತು ಪ್ರೀತಿ ಬೇಕಿದೆ.'' ಎಂದು ಬರೆದುಕೊಂಡಿದ್ದಾರೆ.