'ಹೆಮ್ಮೆಯ ಕನ್ನಡಿಗ ಪ್ರಶಸ್ತಿ'ಯಲ್ಲಿ ಕೇಕೆ ಹಾಕಿದ 'ಕೆಜಿಎಫ್'
'ಕೆಜಿಎಫ್' ಕನ್ನಡ ಚಿತ್ರರಂಗದ ಘನತೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದ ಸಿನಿಮಾ. ಇಡೀ ಭಾರತ ಚಿತ್ರರಂಗ ಕನ್ನಡದ ಈ ಹೆಮ್ಮೆಯ ಸಿನಿಮಾವನ್ನು ಅಪ್ಪಿಕೊಂಡಿದೆ.
ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಈ ಸಿನಿಮಾಗೆ ಈಗ ಪ್ರಶಸ್ತಿಗಳು ಬರಲು ಶುರು ಆಗಿದೆ. ಜೀ ಕನ್ನಡ ವಾಹಿನಿಯ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಕಾರ್ಯಕ್ರಮದಲ್ಲಿ 'ಕೆಜಿಎಫ್' ಕೇಕೆ ಹಾಕಿದೆ.

ಅತ್ಯುತ್ತಮ ಸಿನಿಮಾ : ಕೆಜಿಎಫ್
ಅತ್ಯುತ್ತಮ ನಟ : ಯಶ್
ಅತ್ಯುತ್ತಮ ನಿರ್ದೇಶಕ : ಪ್ರಶಾಂತ್ ನೀಲ್
ಅತ್ಯುತ್ತಮ ಸಂಗೀತ : ರವಿ ಬಸ್ರೂರ್
ಅತ್ಯುತ್ತಮ ಖಳನಟ : ರಾಮ್
ಅತ್ಯುತ್ತಮ ಗೀತರಚನೆ : ವಿ ನಾಗೇಂದ್ರ ಪ್ರಸಾದ್
ಅತ್ಯುತ್ತಮ ಛಾಯಾಗ್ರಹಣ : ಭುವನ್ ಗೌಡ
ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬರೋಬ್ಬರಿ ಏಳು ಪ್ರಶಸ್ತಿಗಳು 'ಕೆಜಿಎಫ್' ಪಾಲಾಗಿವೆ. ರಾಕಿ ಬಾಯ್ ಅತ್ಯುತ್ತಮ ನಟನಾಗಿದ್ದಾರೆ.
ಜೀ ಕನ್ನಡ ವಾಹಿನಿಯ ಈ ಅದ್ದೂರಿ ಕಾರ್ಯಕ್ರಮ ಕಳೆದ ಶನಿವಾರ ನಡೆದಿದೆ. ಸದ್ಯದಲ್ಲಿಯೇ ಟಿವಿಯಲ್ಲಿ ನೀವು ಈ ಕಾರ್ಯಕ್ರವನ್ನು ವೀಕ್ಷಿಸಬಹುದಾಗಿದೆ. ಇನ್ಫೋಸಿಸ್ ಸುಧಾಮೂರ್ತಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Click it and Unblock the Notifications











