Lakshana: ನಕ್ಷತ್ರಳನ್ನು ಸೊಸೆ ಎಂದು ಒಪ್ಪಿಕೊಂಡ ಶಕುಂತಲಾ ದೇವಿ

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ಬಾಗಿಲಿನಲ್ಲೇ ನಿಂತುಕೊಂಡಿರುವ ಆರತಿ, ಚಂದ್ರಶೇಖರ್‌ ಹಾಗೂ ನಕ್ಷತ್ರ ‌ಶಕುಂತಲಾದೇವಿಗೆ ಇವಾಗ ಯಾರು ಗೆದ್ದರು ಎಂಬುದು ನಿಮಗೆ ಗೊತ್ತಾಗಿದೆ. ಬೆಳಗ್ಗೆ ಹೋಟೆಲ್‌ನಿಂದ ತಿಂಡಿ ಆರ್ಡರ್ ಮಾಡಿದಾಗಲೇ ಶ್ವೇತಾ‌ ಸೋತಿದ್ದಾಳೆ ಎಂದು ಸಿ.ಎಸ್ ಹೇಳುತ್ತಾನೆ. ಆಗ ಅಲ್ಲೇ ಇದ್ದ ಆರತಿ ಶಕುಂತಲಾ ದೇವಿ ಅವರೇ ನೀವು ಶ್ವೇತಾಳನ್ನು ಕೆಲವು ತಿಂಗಳುಗಳಿಂದ ನೋಡಿದ್ದೀರಿ ನಾವು 24‌ ವರ್ಷದಿಂದ ನೋಡಿದ್ದೇವೆ. ಅವಳಿಗೆ ಒಂದು ಕಾಫಿ ಮಾಡೋಕು ಬರಲ್ಲ, ಅಯ್ಯೋ‌ ಕಾಫಿ ಯಾಕೆ ಬೀಸಿ ನೀರು ಕಾಯಿಸೋಕು ಬರಲ್ಲ ಎಂದು ಆರತಿ ಹೇಳುತ್ತಾಳೆ.

ಈ ಕಡೆ ಶಕುಂತಲಾ ದೇವಿ ಶ್ವೇತ ಮೇಲೆ ಕೋಪ ಮಾಡಿಕೊಂಡು ಆ ಕಡೆ ಆರತಿ‌ ಸಿ.ಎಸ್.ಮಾತುಗಳನ್ನು ಕೇಳಿಕೊಂಡು ನಿಂತಿರುತ್ತಾರೆ. ಆದರೆ ನಕ್ಷತ್ರ ಗೆದ್ದಿದ್ದು ಮಯೂರಿಗೆ, ಭೂಪತಿಗೆ ಹಾಗೂ ಮನೆ ಕೆಲಸದವರಿಗೆ ಖುಷಿಕೊಡ್ತಾ ಇರುತ್ತದೆ. ಈ ಕಡೆ ಮಿಲ್ಲಿ ಇಷ್ಟೆಲ್ಲಾ ಆದ ಮೇಲೆ ಅವರಮ್ಮ ಡೆವಿಲ್‌ಗೆ ಫೋನ್ ಮಾಡಿ ಪ್ಲ್ಯಾನ್ ಎಲ್ಲಾ ಹಾಳು ಅಯ್ತು ಕೊನೆಯ ಕ್ಷಣದಲ್ಲಿ ನಕ್ಷತ್ರ ಅದೃಷ್ಟ ಖುಲಾಯಿಸಿತು‌ ಅಂತಾ‌ ಹೇಳಿ ಚನ್ನಾಗಿ ಬೈಸಿಕೊಳ್ತಾಳೆ. ನೀನು ನಿನ್ನ ತಾಯಿ ನಂಬಿಕೆ ಕಳೆದುಕೊಳ್ತಾ ಇದ್ದೀಯಾ ನಾನು ಸಿಎಸ್ ತವರು ಮನೆಗೆ ಮಗಳನ್ನು ಕರೆದುಕೊಂಡು ಬರ್ತಾನೆ ಅಂತಾ ಖುಷಿಯಿಂದ ಇದ್ದೆ ಎಂದು ಹೇಳಿ ಫೋನ್ ಕಟ್ ಮಾಡ್ತಾಳೆ ಡೆವಿಲ್.

ಈ ಕಡೆ ಶ್ವೇತಾಳನ್ನು ಎಳೆದುಕೊಂಡು ಹೋದ ಶಕುಂತಲಾ ದೇವಿ ಯಾಕೆ ಹೀಗೆ ಮಾಡಿದೆ ಶ್ವೇತಾ ನಿನ್ನ ನಂಬಿಕೊಂಡು ನಾನು ಈ ಕೆಲಸಕ್ಕೆ ಕೈಹಾಕಿದೆ ಆದರೆ ನೀನು ನನಗೆ ಮೋಸ ಮಾಡ್ಬಿಟ್ಟೆ ಎನ್ನುತ್ತಾರೆ ಅಷ್ಟರಲ್ಲಿ ಸಮಜಾಯಿಷಿ ಕೊಡಲು ಬಂದ ಶ್ವೇತ ಕಾಪಾಳಕ್ಕೆ ‌ಶಾಕುಂತಲ ದೇವಿ ಹೊಡೆಯುತ್ತಾರೆ. ನಂತರ ಹಾಲ್‌ಗೆ ಬರ್ತಾರೆ.

ಸಿ.ಎಸ್ ಮಾತಿಗೆ ದನಿಗೂಡಿಸಿದ ಆರತಿ

ಸಿ.ಎಸ್ ಮಾತಿಗೆ ದನಿಗೂಡಿಸಿದ ಆರತಿ

ನಕ್ಷತ್ರಳ ಬಹುದಿನಗಳ ಕನಸು ಈಡೇರಿದೆ ನಕ್ಷತ್ರ ಈ ಮನೆ ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ನಕ್ಷತ್ರ ಮನೆಯೊಳಗೆ ಹೋಗೋಕೆ ಹೋದಾಗ ಸಿ.ಎಸ್ ತಡೆಯುತ್ತಾರೆ. ಆಗ ಶಕುಂತಲಾ ದೇವಿ ಯಾಕೆ ಎಂದು ಪ್ರಶ್ನೆ ಮಾಡುತ್ತಾರೆ. ನನ್ನ ಮಗಳಿಗೆ ಶಾಸ್ತ್ರೋಕ್ತವಾಗಿ ಶಾಸ್ತ್ರ ಮದುವೆ ಆಗಿಲ್ಲ. ‌ಈಗ ಸೊಸೆಗೆ ಸಿಗಬೇಕಾದ ಗೌರವ ಸಿಗಬೇಕು ಎಂದು ಸಿ.ಎಸ್ ಹೇಳಿದಾಗ ಇದಕ್ಕೆ ಆರತಿ ಸಹ ಧ್ವನಿ ಗೂಡಿಸುತ್ತಾಳೆ.

ಶ್ವೇತಾಗೆ ಅಸಮಾಧಾನ

ಶ್ವೇತಾಗೆ ಅಸಮಾಧಾನ

ಶಕುಂತಲಾ ದೇವಿ ಇವಾಗ ನಿಮ್ಮ ಮಗಳನ್ನು ಸೊಸೆ ಎಂದು ಒಪ್ಪಿಕೊಂಡ ಮೇಲೆ ಶಾಸ್ತ್ರ ಮಾಡೋದು ಏನು ಮಹಾ ಮಾಡೋಣ ಎಂದು ಮಯೂರಿಗೆ ಶಾಸ್ತ್ರ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಹೇಳುತ್ತಾರೆ. ಮಯೂರಿ ಎಲ್ಲಾ ತಯಾರಿ ಮಾಡಿಕೊಳ್ತಾ ಇರಬೇಕಾದರೆ ಶ್ವೇತ ಮಾತ್ರ ಚೆನ್ನಾಗಿ ಉರಿದುಕೊಳ್ತಾ ಇರ್ತಾಳೆ. ಆದರೆ ಮಯೂರಿ ಖುಷಿ ಆಕಾಶಕ್ಕೆ ಮುಟ್ಟಿರುತ್ತದೆ ನಕ್ಷತ್ರ ಗೆಲುವನ್ನು ಸಂಭ್ರಮಿಸುತ್ತಾ ಆರತಿ ರೆಡಿ ಮಾಡ್ತಾಳೆ.

ತಂದೆಯನ್ನು ತಬ್ಬಿಕೊಂಡ ನಕ್ಷತ್ರ

ತಂದೆಯನ್ನು ತಬ್ಬಿಕೊಂಡ ನಕ್ಷತ್ರ

ಸಿ. ಎಸ್ ಹತ್ತಿರ ಶಾಕುಂತಲದೇವಿ ಕೊನೆಗೆ ನೀವೇ ಗೆದ್ರಿ ಚಂದ್ರಶೇಖರ್ ಅಂತಾ ಹೇಳುತ್ತಾಳೆ. ಇದಕ್ಕೆ ಚಂದ್ರಶೇಖರ್‌ಗೆ ತುಂಬಾ ಖುಷಿಯಾಗುತ್ತದೆ. ನಕ್ಷತ್ರ ನನ್ನ ಜೀವನದಲ್ಲಿ ದೇವರು ಒಂದು ದೊಡ್ಡ ಪವಾಡ ನಡೆಸಿ ಬಿಟ್ಟ ನನ್ನ ಕೈಬಿಡಲಿಲ್ಲ, ಕೊನೆಯಲ್ಲಿ ಕೈ ಹಿಡಿದುಕೊಂಡ ಎಂದು ಹೇಳಿ ತಂದೆಯನ್ನು ತಬ್ಬಿಕೊಳ್ಳುತ್ತಾಳೆ.

ಶಾಕುಂತಲದೇವಿ ಆರತಿ ಮಾಡೋಕೆ ಹೋದಾಗ ಭೂಪತಿ ಒಂದು ನಿಮಿಷ ಅಮ್ಮ ಎಂದು ಹೇಳಿ ನಕ್ಷತ್ರ ಪಕ್ಕದಲ್ಲಿ ಬಂದು ನಿಲ್ಲುತ್ತಾನೆ.

ಸೇರು ಒದ್ದು ಒಳಗೆ ಬಂದ ನಕ್ಷತ್ರ

ಸೇರು ಒದ್ದು ಒಳಗೆ ಬಂದ ನಕ್ಷತ್ರ

ಆರತಿ ಇಬ್ಬರಿಗೂ ಆರತಿ ಬೆಳಗಿ ಕುಂಕುಮವನ್ನು ಹಚ್ಚುತ್ತಾರೆ. ಈ ವೇಳೆ ನಕ್ಷತ್ರಗೆ ತುಂಬಾನೇ ಖುಷಿಯಾಗುತ್ತದೆ. ಸೇರು ಒದ್ದು ಒಳಗೆ ಹೋಗೋಕೆ ಅಣಿಯಾಗ್ತಾಳೆ. ಈ ಕಡೆ ಮಿಲ್ಲಿ ಮತ್ತೆ ಶ್ವೇತ ಇದೆಲ್ಲವನ್ನೂ ನೋಡಿ ತುಂಬಾನೇ ಬೇಜಾರ್ ಮಾಡಿಕೊಳ್ತಾ ಇರ್ತಾರೆ. ಈಗ ಶ್ಚೇತ ಮುಂದಿನ ಗತಿ ಎನು ಎಂಬುದೇ ಕುತೂಹಲಕಾರಿಯಾಗಿದೆ.

More from Filmibeat

English summary
Lakshana serial Written Update on January ,17th episode. Here is the details about nakshstra Back to bhupati home, all are happy but Milly sweetha unhappy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X