Don't Miss!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುಭಾಷಾ ಧಾರಾವಾಹಿ 'ಸ್ವರ್ಣ ಖಡ್ಗಂ'ನಲ್ಲಿ ಕನ್ನಡ ಕುವರ
ಕಾರವಾರ, ಜುಲೈ.06: ಬಹುಭಾಷೆಯಲ್ಲಿ ತಯಾರಾಗುತ್ತಿರುವ 'ಸ್ವರ್ಣ ಖಡ್ಗಂ' ಧಾರವಾಹಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಲಕ್ಷ್ಮೀಶ್ ಭಟ್ ಕಾಣಿಸಿಕೊಂಡಿದ್ದಾರೆ. ಬಹುತೇಕ ಕನ್ನಡದ ಕಲಾವಿದರೇ ಇರುವ ಈ ಧಾರವಾಹಿ ಸದ್ಯ ಈಟಿವಿ ತೆಲುಗು ವಾಹಿನಿಯಲ್ಲಿ ಇಂದಿನಿಂದ ಪ್ರಸಾರವಾಗಲಿದೆ. ಬಳಿಕ ನಾಲ್ಕೈದು ಭಾಷೆಗಳಿಗೆ ಭಾಷಾಂತರಗೊಂಡು ಪ್ರಸಾರಗೊಳ್ಳಲಿದೆ ಎನ್ನಲಾಗುತ್ತಿದೆ.
'ಬಾಹುಬಲಿ' ಸಿನಿಮಾದಲ್ಲಿ ಪ್ರಭಾಸ್ ಮಾಡಿದ್ದ ಮಹೇಂದ್ರ ಬಾಹುಬಲಿಯಂತಹ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಕಾಣಿಸಿಕೊಂಡಿದ್ದಾರೆ. ಈ ಧಾರವಾಹಿಯ ಪಾತ್ರಧಾರಿಗಳಿಗೆ 'ಬಾಹುಬಲಿ' ಸಿನಿಮಾ ಪಾತ್ರಧಾರಿಗಳಿಗೆ ಕೊಟ್ಟಂತೆ ಭರ್ಜರಿ ತರಬೇತಿ ಕೊಡಲಾಗಿದೆ.
'ಸ್ವರ್ಣ ಖಡ್ಗಂ' ಧಾರವಾಹಿಯಲ್ಲಿ ಹೊನ್ನಾವರದ ಹುಡುಗ
ಪ್ರಮುಖ ಪಾತ್ರ ನಿಭಾಯಿಸಿರುವ ಲಕ್ಷ್ಮೀಶ್ ಭಟ್ ಕುದುರೆ ಏರಿ, ಕತ್ತಿ ಹಿಡಿದು ಮಹಾರಾಜನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿಕ್ಕಾಪಟ್ಟೆ ತರಬೇತಿ ಪಡೆದು ಸಾಹಸಗಳನ್ನು ಮಾಡಿರುವ ಲಕ್ಷ್ಮೀಶ್ ಭಟ್ ಗೆ ನಾಯಕಿಯಾಗಿ ಸಂಜನಾ ಗಲ್ರಾನಿ ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ಮೇಘನಾ, ಸುರೇಶ್ ರೈ, ರಾಜಶ್ರೀ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಬಾಲಿವುಡ್ನ ಪೂನಂ ಕೌರ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.