Lakshmi Baramma: ಪ್ರೀತಿ ಹುಟ್ಟಿದೆ ಎಂಬ ಖುಷಿಯಲ್ಲಿರುವ ಲಕ್ಷ್ಮೀಗೆ ವೈಷ್ಣವ್ ಮಾತು ಆಘಾತ ತಂದಿದೆ..!
ವೈಷ್ಣವ್ಗೆ ಪ್ರೀತಿ ಹೋಯ್ತಲ್ಲ ಎಂಬ ನೋವು ಬಹಳ ಕಾಡುತ್ತಿತ್ತು. ಅದರಿಂದ ವಾಪಸ್ ಬಂದು ಲಕ್ಷ್ಮೀಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದ. ಆದರೆ, ಈ ಮಧ್ಯೆ ಕಳೆದುಹೋದ ಪ್ರೀತಿಯೇ ಮತ್ತೆ ಮತ್ತೆ ಕಾಡುತ್ತಿದೆ.
ಮಹಾಲಕ್ಷ್ಮಿ ಎಷ್ಟು ಒಳ್ಳೆಯ ಹುಡುಗಿ ಅನ್ನೋದು ವೈಷ್ಣವ್ಗೆ ಚೆನ್ನಾಗಿಯೇ ಗೊತ್ತು. ಯಾವತ್ತಿಗೂ ಮಹಾಲಕ್ಷ್ಮಿಗೆ ಮೋಸ ಮಾಡಬಾರದು ಎಂಬುದೇ ವೈಷ್ಣವ್ ತಲೆಯಲ್ಲಿ ಇರೋದು. ಅದಕ್ಕಾಗಿಯೇ ಆದಷ್ಟು ಖುಷಿಯಾಗಿಡಲು ಪ್ರಯತ್ನಿಸುತ್ತಾನೆ. ಆದರೆ, ಕೀರ್ತಿಯಿಂದಾಗಿ ಈಗ ವೈಷ್ಣವ್ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ.

ಸತ್ಯದ ಹಿಂದೆ ಹೊರಟ ವೈಷ್ಣವ್
ವೈಷ್ಣವ್ ಈ ಬಾರಿ ಕಾವೇರಿಯನ್ನು ಬೆಂಬಿಡದೆ ಕಾಡುತ್ತಿದ್ದಾನೆ. ಅಡಗಿರುವ ಸತ್ಯ ಹೊರ ಬರಲೇಬೇಕು ಎಂಬುದಾಗಿ, ಅಮ್ಮನನ್ನು ಪ್ರಶ್ನೆ ಮಾಡುತ್ತಿದ್ದಾನೆ. ಇಲ್ಲ ಸತ್ಯ ನೀವೇ ಹೇಳಿ, ಇಲ್ಲ ಕೀರ್ತಿ ಹತ್ತಿರ ಸತ್ಯ ತಿಳಿದುಕೊಳ್ಳುವುದಕ್ಕೆ ಹೋದರೂ, ನೀವೂ ಬಿಡ್ತಾ ಇಲ್ಲ. ಆ ಕಡೆ ಕೀರ್ತಿಯನ್ನು ಕೇಳಿದ್ರೆ ಯಾವಾಗ್ಲೂ ಆಂಟಿನಾ ಕೇಳು ಎನ್ನುತ್ತಾಳೆ. ಸತ್ಯ ಹೇಳದೆ ಹೋದರೆ, ಅದೇನು ಸತ್ಯ ಅಂತ ನಾನೇ ತಿಳಿದುಕೊಳ್ಳುತ್ತೀನಿ ಅಂತ ಹೊರಟಿದ್ದಾನೆ. ಇತ್ತ ಕಾವೇರಿಗೆ ಈ ಟೆನ್ಶನ್ ಜಾಸ್ತಿಯಾಗಿದೆ. ಸುಪ್ರೀತಾಗೆ ಇದು ಖುಷಿ ಕೊಟ್ಟಿದೆ. ನನ್ನೊಬ್ಬಳಿಗೆ ಇದ್ದ ಅನುಮಾನ ಈಗ ಮಗನಿಗೂ ಬಂದಿದೆ ಎಂಬ ಖುಷಿಯಲ್ಲಿದ್ದಾಳೆ.
ಸತ್ಯದ ಬಗ್ಗೆ ಭಯಗೊಂಡ ವೈಷ್ಣವ್
ಕೀರ್ತಿಯಿಂದ ಸತ್ಯ ತಿಳಿದುಕೊಳ್ಳಲು ವೈಷ್ಣವ್ ಹಿಂದೆ ಬಿದ್ದಿದ್ದಾನೆ. ಆದರೆ, ಆ ಸತ್ಯದ ಬಗ್ಗೆಯೇ ಈಗ ಆತಂಕಗೊಂಡಿದ್ದಾನೆ. ಒಂದು ವೇಳೆ ಸತ್ಯ ತಿಳಿದ ಮೇಲೆ ನಾನು ಬದಲಾದರೆ? ಆ ಸಮಸ್ಯೆಯನ್ನು ನಾನು ಸರಿ ಮಾಡಬಹುದಿತ್ತು ಎಂದುಕೊಂಡರೆ? ಅಮ್ಮನ ಯಾವುದಾದರೂ ಸತ್ಯ ಮುಚ್ಚಿಟ್ಟಿದ್ದರೆ ? ಎಂಬ ಪ್ರಶ್ನೆಗಳು ವೈಷ್ಣವ್ ತಲೆಯಲ್ಲಿ ಕೊರೆಯುತ್ತಾ ಇದೆ.
ವೈಷ್ಣವ್ ಪ್ರೀತಿ ಕಂಡು ಲಕ್ಷ್ಮೀ ಹ್ಯಾಪಿ
ಗಂಗಾ ಸದ್ಯಕ್ಕೆ ಲಕ್ಷ್ಮೀ ಸಂಸಾರವನ್ನು ಸರಿ ಮಾಡುವುದಕ್ಕೆ ಹೊರಟಿದ್ದಾಳೆ. ವೈಷ್ಣವ್ ಎಲ್ಲರ ಮುಂದೆ ನನ್ನ ಹೆಂಡತಿ ಅಂದಾಗಲೇ ತಿಳಿಬೇಕು, ಅದು ಕಾಳಜಿ ಅಲ್ಲ ಪ್ರೀತಿ ಅಂತ. ನಿಮಗೆ ಇದು ಅರ್ಥನೇ ಆಗ್ತಾ ಇಲ್ಲ. ಯಾಕೆ ನಿಮಗೆ ಲವ್ ಆಗಿಲ್ವಾ ಎಂದಾಗ, ವೈಷ್ಣವ್ ಮೇಲೆ ಆಗಿರುವ ಪ್ರೀತಿಯನ್ನು ಹೇಳಿಕೊಳ್ತಾ ಇದ್ದಾಳೆ. ಈ ಮಧ್ಯೆ ಲಕ್ಷೀ ಕೊಟ್ಟ ಪ್ರೀತಿಯ ಉಡುಗೊರೆ ಎಲೆಯನ್ನು ಇನ್ನು ಇಟ್ಟುಕೊಂಡಿದ್ದಾನೆ ಎಂದು ಗೊತ್ತಾದ ಮೇಲೆ ಲಕ್ಷ್ಮೀ ಇನ್ನಷ್ಟು ಖುಷಿಯಾಗಿದ್ದಾಳೆ. ಖುಷಿಯಲ್ಲಿ ತೇಲುತ್ತಿದ್ದ ಲಕ್ಷ್ಮೀ ಇದ್ದಕ್ಕಿದ್ದ ಹಾಗೇ ಮಂಕಾಗಿದ್ದನ್ನು ಕಂಡು, ಗಂಗಾಗೆ ಅನುಮಾನ ಬಂದಿದೆ. ಮತ್ತೆ ಒಂದಷ್ಟು ಬುದ್ದಿ ಹೇಳಿ, ನಮ್ಮ ಪ್ರೀತಿಯನ್ನು ನಾವೇ ಉಳಿಸಿಕೊಳ್ಳಬೇಕು. ಮೊದಲು ನೀವೆ ಪ್ರಯತ್ನ ಮಾಡಿ, ಅವರು ಹಳೆಯದ್ದನ್ನು ಮರೆಯುವುದಕ್ಕೆ ಅನುಕೂಲವಾಗುತ್ತೆ ಎಂದಿದ್ದಾಳೆ.

ಲಕ್ಷ್ಮೀಯನ್ನೇ ಕೀರ್ತಿ ಎಂದುಕೊಂಡ ವೈಷ್ಣವ್
ವೈಷ್ಣವ್ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದಾನೆ. ಸತ್ಯ ತಿಳಿದುಕೊಳ್ಳುವ ಭರದಲ್ಲಿ ತಲೆನೋವು ಬರಿಸಿಕೊಂಡಿದ್ದಾನೆ. ಲಕ್ಷ್ಮೀ ಊಟವನ್ನು ರೂಮಿಗೆ ತಂದಾಗ, ಹೇಳಿದ ಡೈಲಾಗ್ನಿಂದ ಕೀರ್ತಿಯ ನೆನೆಪಾಗಿದೆ. ಇಷ್ಟೊಂದು ಪ್ರೀತಿ ಇರುವವಳು ಒಂದು ಕಾರಣವೂ ಹೇಳದೆ, ಯಾಕೆ ಬಿಟ್ಟು ಹೋದೆ ಎಂದಾಗ ಲಕ್ಷ್ಮೀ ಶಾಕ್ ಆಗಿದ್ದಾಳೆ. ವೈಷ್ಣವ್ನನ್ನು ಎಚ್ಚರ ಮಾಡಿದ್ದಾಳೆ. ಅಲ್ಲಿಂದ ಹೋದ ವೈಷ್ಣವ್ ಮಾತುಗಳನ್ನು ನೆನೆದು ಲಕ್ಷ್ಮೀ ಕಣ್ಣೀರಾಗಿದ್ದಾಳೆ.


Click it and Unblock the Notifications











