Lakshmibaramma: ವಿಚಿತ್ರವಾಗಿ ಆಡಲು ಶುರು ಮಾಡಿದ ಕೀರ್ತಿ; ನ್ಯಾಯಕ್ಕಾಗಿ ಪ್ರೇಕ್ಷಕರಿಂದ ಒತ್ತಾಯ
ಕೀರ್ತಿ ಹಾಗೂ ವೈಷ್ಣವ್ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರು ಮೇಡ್ ಫಾರ್ ಈಚ್ ಅದರ್ ಎಂಬಂತೆ ಬದುಕಿದವರು. ಪ್ರಪಂಚದಲ್ಲಿ ಇಂಥ ಪ್ರೇಮಿಗಳು ಇಲ್ಲವೇನೋ ಎಂಬಂತೆ ಪ್ರೀತಿಸಿದವರು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದವರು. ಆದರೆ ಇಬ್ಬರ ಪ್ರೀತಿ ಮೇಲೆ ಕಾವೇರಿಯ ಕಣ್ಣು ಬಿದ್ದ ಮೇಲೆ ಆ ಪ್ರೀತಿ ನೋವಿನಿಂದಲೇ ಮುಳುಗಿ ಹೋಯ್ತು.
ಕೀರ್ತಿ ಇನ್ನು ಭ್ರಮೆಯಲ್ಲಿಯೇ ಬದುಕುತ್ತಿದ್ದಾಳೆ. ವೈಷ್ಣವ್ ಇನ್ನು ಕೀರ್ತಿಯ ನೆನಪುಗಳು ಹೋಗಿಲ್ಲ. ಕೀರ್ತಿಯ ಪ್ರೀತಿ ಮಾಸಿಲ್ಲ. ಅದು ಕೀರ್ತಿಗೂ ಗೊತ್ತು. ಆದರೆ ವೈಷ್ಣವ್ ಅದೊಂದೆ ಕಾರಣದಿಂದ ಹೊರಗೆ ಬರುವುದಕ್ಕೆ ಸಾಧ್ಯವೂ ಇಲ್ಲ, ಲಕ್ಷ್ಮೀಯನ್ನು ದೂರ ಮಾಡುವುದಕ್ಕೂ ಸಾಧ್ಯವಿಲ್ಲ. ಕೀರ್ತಿ ತನ್ನಿಂದ ಎಷ್ಟು ಸಾಧ್ಯವೋ ಅಷ್ಟೆಲ್ಲಾ ಪ್ರಯತ್ನಗಳನ್ನು ಪಟ್ಟರು ವೈಷ್ಣವ್, ಲಕ್ಷ್ಮೀ ದೂರ ದೂರವಾಗದೆ ಮತ್ತೆ ಗಟ್ಟಿಯಾದರು.

ಟ್ರೋಫಿ ಹೊಡೆದಾಕಿದ ಕಾವೇರಿ
ಸೂಪರ್ ದಂಪತಿ ಕಾಂಪಿಟೇಷನ್ನಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ಸ್ಪರ್ಧೆ ಮಾಡಬಾರದೆಂದು ಕೀರ್ತಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಲಕ್ಷ್ಮೀಯನ್ನೇ ಕಿಡ್ನ್ಯಾಪ್ ಮಾಡಿಸಿದ್ದಳು. ಆದರೂ ವೈಷ್ಣವ್ ಮತ್ತು ಲಕ್ಷ್ಮೀ ಭಾಗವಹಿಸಿದರು. ಅದಷ್ಟೇ ಅಲ್ಲ ಕಾವೇರಿ ಹಾಗೂ ಕೃಷ್ಣ ಕೂಡ ಭಾಗವಹಿಸಿದ್ದರು. ಕಾವೇರಿ ತನಗೆ ಬಹುಮಾನ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದಳು. ಆದರೆ ಅದು ವೈಷ್ಣವ್ ಹಾಗೂ ಲಕ್ಷ್ಮೀಗೆ ಬಂತು. ಇದನ್ನು ಸಹಿಸಲಾಗದೆ ಕಾವೇರಿ ಟ್ರೋಫಿಯನ್ನೇ ಹೊಡೆದು ಹಾಕಿದ್ದಾಳೆ.
ಲಕ್ಷ್ಮೀಯ ಕಣ್ಣಲ್ಲಿ ನೀರು
ಜೋರಾಗಿ ಸೌಂಡ್ ಆದ ಕೂಡಲೇ ಮನೆಯವರೆಲ್ಲಾ ಓಡಿ ಬಂದರು. ಕಾವೇರಿ, ಕೈ ಜಾರಿ ಬಿತ್ತು ಎಂದು ಹೇಳಿ ಸುಮ್ಮನೆ ಆದಳು. ಆದರೆ ಲಕ್ಷ್ಮೀಗೆ ಅದು ಬಹಳ ಮುಖ್ಯವಾಗಿತ್ತು. ಹೊಡೆದ ಟ್ರೋಫಿ ಕಂಡು ಕಣ್ಣಲ್ಲಿ ನೀರು ತುಂಬಿತ್ತು. ಅಲ್ಲಿಂದ ಸುಮ್ಮನೆ ಹೊರಟು ಹೋದ ಲಕ್ಷ್ಮೀಗೆ ವೈಷ್ಣವ್ ಸರ್ಪೈಸ್ ಕೊಟ್ಟಿದ್ದ. ಆ ಟ್ರೋಫಿಯನ್ನ ಮತ್ತೆ ಅದೇ ರೀತಿ ಜೋಡಿಸಿ, ಲಕ್ಷ್ಮೀಗೆ ಖುಷಿ ಕೊಟ್ಟಿದ್ದ.ddd
ತಾನೂ ಲಕ್ಷ್ಮೀಯಂತೆ ಅಲಂಕಾರ
ಕೀರ್ತಿ ಇಂದಿಗೂ ವೈಷ್ಣವ್ನನ್ನು ಪಡೆಯುವ ಪ್ರಯತ್ನದಲ್ಲಿಯೇ ಇದ್ದಾಳೆ. ವೈಷ್ಣವ್ ಎಷ್ಟೋ ಸಲ ಹೇಳಿದರೂ ಅದನ್ನು ಕೇಳುವ ತಾಳ್ಮೆ ಅವಳಲ್ಲಿ ಇಲ್ಲ. ಆದರೆ ಈಗ ವೈಷ್ಣವ್ ಮತ್ತು ಲಕ್ಷ್ಮೀ ಸೂಪರ್ ದಂಪತಿಯಲ್ಲೂ ಗೆದ್ದಿದ್ದು, ಕೀರ್ತಿಗೆ ತಡೆಯಲು ಆಗಿಲ್ಲ. ಹುಚ್ಚಿಯಂತೆ ಆಡುತ್ತಿದ್ದಾಳೆ. ಲಕ್ಷ್ಮೀಯಂತೆ ರೆಡಿ ಆಗಿ ಬಂದಿದ್ದಾಳೆ. ನಾನು ಲಕ್ಷ್ಮೀಯಂತೆ ಕಾಣುತ್ತಾ ಇದ್ದೀನಿ ಅಲ್ವಾ, ಈಗ ಕಾವೇರಿ ಅತ್ತೆಯನ್ನ ನೋಡುವುದಕ್ಕೆ ಹೋಗೋಣ್ವಾ ಎಂದು ಕೇಳಿದ್ದಾಳೆ. ಇದು ಲಕ್ಷ್ಮೀಗೆ ಶಾಕ್ ಆಗಿದ್ರೆ, ಕಾರುಣ್ಯಗೆ ಆತಂಕ ಸೃಷ್ಟಿಸಿದೆ.

ಕೀರ್ತಿಯನ್ನು ಕಂಡು ಮರುಗಿದ ಪ್ರೇಕ್ಷಕರು
ಕೀರ್ತಿ ಜೆನ್ಯೂನ್ ಆಗಿ ಪ್ರೀತಿ ಮಾಡಿದ್ದಳು. ಆದರೆ ಕಾವೇರಿಯ ಮೋಸದ ಬಲೆಗೆ ಬಿದ್ದು ಜಗಳದ, ಮುನಿಸಿನ ನಾಟಕವಾಡಿದ್ದಳು. ಈಗಲೂ ವೈಷ್ಣವ್ನನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಆಗಾಗ ಹುಚ್ಚಿಯಂತೆ ಆಡುತ್ತಾಳೆ. ಇದು ಕಾರುಣ್ಯಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಬೇಸರ ಮೂಡಿಸಿದೆ. ಕೀರ್ತಿ ಹೀರೋಯಿನ್ ಸ್ಥಾನಕ್ಕೆ ಚೆನ್ನಾಗಿಯೇ ಮ್ಯಾಚ್ ಆಗುತ್ತಾರೆ. ಕೀರ್ತಿಗೆ ಮೊದಲು ನ್ಯಾಯ ಕೊಡಿ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











