Lakshmibaramma: ಮೊದಲ ಬಾರಿಗೆ ಅಧಿಕಾರದ ಮಾತಾಡಿದ ಲಕ್ಷ್ಮೀ.. ಬಿತ್ತು ಪೂಜಾಳ ಕಪಾಳಕ್ಕೆ ಏಟು!

By ಎಸ್ ಸುಮಂತ್

ಲಕ್ಷ್ಮೀ ಯಾರಿಗೂ ಎದುರು ಮಾತಾಡಲ್ಲ. ಯಾರಿಗೂ ನೋವು ಮಾಡಲ್ಲ. ತನಗೆ ನೋವಾದರೂ ಅದನ್ನು ಅನುಭವಿಸಿ ಸುಮ್ಮನಾಗುತ್ತಾಳೆ. ಮನೆಯ ಜವಾಬ್ದಾರಿಯನ್ನೆಲ್ಲ ತನ್ನ ಮೇಲೆ ಹಾಕಿಕೊಂಡಿದ್ದಾಳೆ. ಮದುವೆಯಾದರೂ ತವರು ಮನೆಗಾಗಿ ದುಡಿಯುತ್ತಿದ್ದಾಳೆ. ಗಂಡನ ಮನೆಯಲ್ಲಿ ಕೆಲಸ ಮುಗಿಸಿಕೊಂಡು ಬಂದು ಮತ್ತೆ ತವರು ಮನೆಗಾಗಿ ಅಂಗಡಿಯಲ್ಲಿ ವ್ಯಾಪಾರ ಮಾಡ್ತಾ ಇದ್ಲು. ಆದರೆ ಈಗ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ.

ಪೂಜಾಳ ಓದಿಗಾಗಿ ಲಕ್ಷ್ಮೀ ತನ್ನ ಓದನ್ನು‌ ನಿಲ್ಲಿಸಿದ್ದಳು. ಇಬ್ಬರನ್ನು ಓದಿಸುವುದಕ್ಕೆ ಆಗಲ್ಲ ಎಂದಾಗ ಲಕ್ಷ್ಮೀ ತಾನೂ ಓದುವುದನ್ನು ನಿಲ್ಲಿಸಿ, ಪೂಜಾಳನ್ನು ಓದಿಸುವುದಕ್ಕೆ ಶುರು ಮಾಡಿದಳು. ಬುಕ್ಸ್, ಫೀಸ್, ಬಟ್ಟೆ ಎಲ್ಲವನ್ನು ಲಕ್ಷ್ಮೀಯೇ ತೆಗೆದುಕೊಡುತ್ತಿದ್ದಳು. ಈಗ ಪೂಜಾಳ ಮೋಸ ಬಟಾಬಯಲಾಗಿದೆ.

Lakshmibaramma serial Written Update on June 23rd episode

ಲಕ್ಷ್ಮೀಯ ಜೊತೆಗೆ ನಿಂತ ಕಾವೇರಿ

ಪೂಜಾ ಅದ್ಯಾವಾಗ ದೊಡ್ಡ ಮೊತ್ತದ ಮೊಬೈಲ್ ತಗೊಂಡಳೋ ಆಗಿನಿಂದ ಎಲ್ಲರ ಕಣ್ಣು ಪೂಜಾಳ ಮೇಲೆ ಬಿದ್ದಿದೆ. ಮನೆಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಯ್ತು. ಲಕ್ಷ್ಮೀಗೂ ಇದು ತಲೆ ನೋವಾಯ್ತು. ಕಾವೇರಿ ಈ ವಿಚಾರದಲ್ಲಿ ಲಕ್ಷ್ಮೀ ಪರವಾಗಿ ನಿಂತಳು. ಪೂಜಾಳ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಾಲೇಜಿಗೆ ಕರೆದುಕೊಂಡು ಹೋದಳು. ಅಲ್ಲಿ ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ. ಪೂಜಾ ಕಾಲೇಜಿಗೆ ಬರುತ್ತಿಲ್ಲ ಎಂದು ಗೊತ್ತಾದಾಗ ಲಕ್ಷ್ಮೀಗೆ ಅರಗಿಸಿಕೊಳ್ಳುವುದಕ್ಕೆ ಆಗಿಲ್ಲ.

ಸುಳ್ಳು ಹೇಳಿದ ಪೂಜಾಗೆ ಬಿತ್ತು ಏಟು

ಕಾಲೇಜಿಂದ ಮನೆಗೆ ಕಾವೇರಿ ಮತ್ತು ಲಕ್ಷ್ಮೀ ಮನೆಗೆ ಬಂದರು. ಪೂಜಾಳಿಗೆ ಮೊದಲಿಗೆ ಸತ್ಯ ಹೇಳದೆ, ಎಕ್ಸಾಂಗೆ ಫೀಸ್ ಎಷ್ಟು ಬೇಕು ಎಂದು ಕೇಳಿದಾಗ, ಪೂಜಾ ದುರಾಸೆ ಪಟ್ಟು, ಅದಕ್ಕೆ ಇದಕ್ಕೆ ಅಂತ ಹಣ ಬೇಕು ಎಂದಾಗ, ನೋಡುವ ತನಕ ನೋಡಿ ಲಕ್ಷ್ಮೀ ಕಪಾಳಕ್ಕೆ ಹೊಡೆದಿದ್ದಾಳೆ. ಕಾಲೇಜಿಗೆ ಹೋಗುತ್ತೀನಿ ಅಂತ ಸುಳ್ಳು ಹೇಳಿ ಎಲ್ಲಿಗೆ ಹೋಗುತ್ತಿದ್ದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾಳೆ.

ಅಧಿಕಾರದ ಮಾತನಾಡಿದ ಲಕ್ಷ್ಮೀ

ಲಕ್ಷ್ಮೀಯ ಮಾತಿಗೆ ಮತ್ತೆ ಎದುರಾಡಿದ್ದಾಳೆ ಪೂಜಾ. ನೀನು ದುಡಿದ್ದೆಲ್ಲವನ್ನು ಎಲ್ಲಿಗೋ ಕೊಟ್ಟಿದ್ದಕ್ಕೆ ನಾವೂ ಈ ರೀತಿಯ ಪರಿಸ್ಥಿತಿಗೆ ಬಂದಿದ್ದೀವಿ. "ನೀನು ಹಣ ಕೊಟ್ಟಿದ್ರೆ ನಾನು ಚೆನ್ನಾಗಿರುವ ಬಟ್ಟೆ ಎಲ್ಲಾ ಹಾಕೊಂಡು, ಕಾಲೇಜಿಗೆ ಹೋಗುತ್ತಿದ್ದೆ. ನೀನೇ ಮಾಡಿದ ತಪ್ಪು. ನಂಗೆ ಹೊಡೆಯುವುದಕ್ಕೆ ಏನು ಅಧಿಕಾರ" ಎಂದು ಕೇಳಿದಾಗ, "ನಾನು ಓದುವುದನ್ನು ಬಿಟ್ಟು ನಿನಗೆ ಓದಿಸಿದ್ದೀನಿ ಅಷ್ಟು ಸಾಲದ ಅಧಿಕಾರ. ನಮಗೆ ಸುಳ್ಳು ಹೇಳಿದ್ದೀಯಾ" ಎಂದು ಕೇಳಿದ್ದಾಳೆ.

Lakshmibaramma serial Written Update on June 23rd episode

ಸುನಂದಾ ಕಡೆಯಿಂದಾನು ಬಿತ್ತು ಏಟು

ಲಕ್ಷ್ಮೀಯನ್ನು ಕಂಡರೆ ಮೊದಲೇ ಸುನಂದಾಗೆ ಆಗಲ್ಲ. ಪೂಜಾಳನ್ನು ಮುದ್ದು ಮಾಡಿ‌ ಮಾಡಿ ಇಟ್ಟಿದ್ದಾಳೆ. ಪೂಜಾ ಏನು ಮಾಡುತ್ತಿದ್ದಾಳೆ ಅಂತಾನೂ ಕೇಳಲ್ಲ. ಪೂಜಾ ಹೇಳಿದ ಕಟ್ಟು ಕಥೆಯನ್ನೇ ನಂಬಿದ್ದಾರೆ. ಲಕ್ಷ್ಮೀ ಕೂಡ ಅದನ್ನೆ ನಂಬಿದ್ದಳು. ಕಾವೇರಿಯಿಂದ ಎಲ್ಲಾ ಸತ್ಯ ಗೊತ್ತಾಯ್ತು. ಸುನಂದಾ, ಲಕ್ಷ್ಮೀಯನ್ನು ಕಂಟ್ರೋಲ್ ಮಾಡುವುದಕ್ಕೆ ನೋಡಿದಾಗ, ಇರುವ ಸತ್ಯವನ್ನು ಹೇಳಿದಳು. ಕಾಲೇಜಿಗೆ ಫೀಸ್ ಬೇಕು ಅಂತ ಕೇಳ್ತಾ ಇದ್ದಾಳೆ. ಆದರೆ ಕಾಲೇಜಿಗೆ ಹೋಗಿ ಒಂದೂವರೆ ತಿಂಗಳಾಗಿದೆ. ಎಕ್ಸಾಂ ಎಲ್ಲಾ‌ ಮುಗಿದಿದೆ. ಹನ್ನೊಂದು ಸಬ್ಜೆಕ್ಟ್ ಬಾಕಿ ಉಳಿಸಿಕೊಂಡಿದ್ದಾಳೆ ಎಂದಾಗ ಸುನಂದಾಗೆ ಶಾಕ್ ಆಗಿದೆ. ಪೂಜಾ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಾಗ ಅಮ್ಮ ಕೂಡ ಕಪಾಳಕ್ಕೆ ಬಾರಿಸಿದ್ದಾಳೆ. ಇಬ್ಬರಿಂದ ಒದೆ ತಿಂದ ಮೇಲೆ ಪೂಜಾ ರೈಸ್ ಆಗಿದ್ದಾಳೆ. ಫೇಲ್ ಆಗಿದ್ದೀನಿ ಏನಿವಾಗ ಎಂದು ಎದುರಾಡಿದ್ದಾಳೆ.

More from Filmibeat

English summary
Colors Kannada Lakshmibaramma serial Written Update on June 23rd episode. Here is the details lakshmi slapped Pooja,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X