twitter
    For Quick Alerts
    ALLOW NOTIFICATIONS  
    For Daily Alerts

    ಈ ಬಾರಿಯೂ 'ವೀಕೆಂಡ್' ಕಾರ್ಯಕ್ರಮಕ್ಕೆ ಇವರೆಲ್ಲ ಬರಲೇ ಇಲ್ಲ

    |

    Recommended Video

    Weekend with Ramesh Season 4: ಈ ಬಾರಿ ಕೂಡ ವೀಕೆಂಡ್ ಕಾರ್ಯಕ್ರಮಕ್ಕೆ ಈ ಸಾಧಕರು ಬರಲೇ ಇಲ್ಲ

    'ವೀಕೆಂಡ್ ವಿತ್ ರಮೇಶ್' ನಾಲ್ಕನೇ ಆವೃತ್ತಿ ಮುಗಿದಿದೆ. ಒಬ್ಬರೇ ಅತಿಥಿಯನ್ನು ಕರೆಸದೆ, ವಿನೂತನವಾಗಿ ಕೊನೆಯ ಸಂಚಿಕೆಗೆ ವಾಹಿನಿ ವಿದಾಯ ಹೇಳಿದೆ. ಮುಂದಿನ ಸೀಸನ್ ಬರುವವರೆಗೆ ರಮೇಶ್ ಅಂಡ್ ಟೀಮ್ ಸಣ್ಣ ಬ್ರೇಕ್ ತೆಗೆದುಕೊಂಡಿದೆ.

    ಪ್ರತಿ ಬಾರಿ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕೆಲವು ಅತಿಥಿಗಳು ಬರಬೇಕು ಎನ್ನುವ ಆಸೆ ವೀಕ್ಷಕರಲ್ಲಿ ಇರುತ್ತದೆ. ಅದೇ ರೀತಿ ಈ ಬಾರಿಯೂ ಅಂತಹ ಕೆಲವು ಅತಿಥಿಗಳು ಕಾರ್ಯಕ್ರಮಕ್ಕೆ ಬರಬೇಕು ಎನ್ನುವ ಅಪೇಕ್ಷೆ ಜನರಲ್ಲಿ ಇತ್ತು.

    ವೀಕೆಂಡ್ ವಿತ್ ರಮೇಶ್ ಫಿನಾಲೆಯಲ್ಲಿ ಅಣ್ಣಾಮಲೈ ಮತ್ತು ವಿಲಾಸ್ ನಾಯಕ್.! ವೀಕೆಂಡ್ ವಿತ್ ರಮೇಶ್ ಫಿನಾಲೆಯಲ್ಲಿ ಅಣ್ಣಾಮಲೈ ಮತ್ತು ವಿಲಾಸ್ ನಾಯಕ್.!

    ವೀರೇಂದ್ರ ಹೆಗ್ಗಡೆ, ಇನ್ಫೋಸಿಸ್ ನಾರಾಯಣ ಮೂರ್ತಿ ಹೀಗೆ ಕೆಲವು ಸಾಧಕರನ್ನು ಕರೆಸುವ ಮೂಲಕ ವಾಹಿನಿ ವೀಕ್ಷಕರ ಕನಸನ್ನು ಈಡೇರಿಸಿದೆ. ಆದರೆ, ಇನ್ನಷ್ಟು ಬೇರೆ ಬೇರೆ ಅತಿಥಿಗಳ ಬರುವಿಕೆಯಲ್ಲಿ ಇದ್ದ ವೀಕ್ಷಕರಿಗೆ ನಿರಾಸೆಯಾಗಿದೆ.

    ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್

    ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್

    ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡುವ ಆಸೆ ಎಲ್ಲರಿಗೂ ಇದೆ. ಆದರೆ, ಅದು ಈವರೆಗೆ ಈಡೇರಿಲ್ಲ. ಈ ಬಾರಿ ಜೀ ವಾಹಿನಿಯೂ ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಿತ್ತು. ಆದರೆ, ಅದು ಸಹಕಾರ ಆಗಲಿಲ್ಲ.

    ಅರುಂಧತಿ ನಾಗ್

    ಅರುಂಧತಿ ನಾಗ್

    ನಟ ಶಂಕರ್ ನಾಗ್ ಪತ್ನಿ, ನಟಿ ಹಾಗೂ ರಂಗಭೂಮಿಯಲ್ಲಿ ತಮ್ಮದೆ ಆದ ಸಾಧನೆ ಮಾಡಿರುವ ಅರುಂಧತಿ ನಾಗ್ ಕೂಡ ಈ ಬಾರಿಯ ಕಾರ್ಯಕ್ರಮದಲ್ಲಿ ಕಾರಣಲಿಲ್ಲ. ಜೀ ವಾಹಿನಿಯ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರುಂಧತಿ ನಾಗ್ 'ವೀಕೆಂಡ್ ವಿತ್ ರಮೇಶ್' ಗೆ ಬರುವ ಸೂಚನೆ ನೀಡಿದ್ದರು.

    ಕೊನೆಗೂ 'ವೀಕೆಂಡ್ ವಿತ್ ರಮೇಶ್-3'ಗೆ 'ಇವರೆಲ್ಲ' ಬರಲೇ ಇಲ್ಲ.! ಕೊನೆಗೂ 'ವೀಕೆಂಡ್ ವಿತ್ ರಮೇಶ್-3'ಗೆ 'ಇವರೆಲ್ಲ' ಬರಲೇ ಇಲ್ಲ.!

    ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ

    ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ

    ಈ ಬಾರಿ ನಟಿ ಸುಮಲತಾ, ಪ್ರೇಮಾ, ವಿನಯ ಪ್ರಸಾದ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿ ಮೇಲೆ ಕುಳಿತ್ತಿದ್ದರು. ಹಾಗಾಗಿ ಮಾಲಾಶ್ರೀ ಕೂಡ ಕಾರ್ಯಕ್ರಮಕ್ಕೆ ಬರಬಹುದು ಎಂಬ ಕುತೂಹಲ ಇತ್ತು. ಅಲ್ಲದೆ, ಲೇಡಿ ಸೂಪರ್ ಸ್ಟಾರ್ ಆಗಿರುವ ಅವರು ಸಾಧಕರ ಸೀಟ್ ಮೇಲೆ ಕೂರುವ ಅರ್ಹತೆ ಹೊಂದಿದ್ದರು. ಆದರೆ, ಕೊನೆಗೂ ಆ ಭಾಗ್ಯ ಸಿಗಲಿಲ್ಲ.

    ರಜನಿಕಾಂತ್ ಮತ್ತು ಐಶ್ವರ್ಯ ರೈ

    ರಜನಿಕಾಂತ್ ಮತ್ತು ಐಶ್ವರ್ಯ ರೈ

    'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ಸೀಸನ್ ಪ್ರಾರಂಭ ಆಗುವಾಗ ಪ್ರೆಸ್ ಮೀಟ್ ನಡೆದಿತ್ತು. ಅಲ್ಲಿ ಜೀ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಒಂದು ವಿಷಯ ಹಂಚಿಕೊಂಡಿದ್ದರು. ಈ ಬಾರಿ ಕಾರ್ಯಕ್ರಮಕ್ಕೆ ರಜನಿಕಾಂತ್ ಮತ್ತು ಐಶ್ವರ್ಯ ರೈ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದರು. ಆದರೆ, ಆ ಪ್ರಯತ್ನವೂ ವಿಫಲವಾಗಿವೆ.

    ಉಳಿದ ಹಿರಿಯ ಸಾಧಕರು

    ಉಳಿದ ಹಿರಿಯ ಸಾಧಕರು

    ಹಿರಿಯ ನಿರ್ದೇಶಕ ಭಗವಾನ್, ಭಾರ್ಗವ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ನಟ ಹೊನ್ನಾವಳಿ ಕೃಷ್ಣ, ದತ್ತಣ್ಣ ಸೇರಿದಂತೆ ಸಾಕಷ್ಟು ರಿಯಲ್ ಸಾಧಕರು ಕಾರ್ಯಕ್ರಮಕ್ಕೆ ಬರಬೇಕು ಎನ್ನುವ ಒತ್ತಾಯ ಹೆಚ್ಚಾಗಿತ್ತು. ಸಾಲು ಮರದ ತಿಮ್ಮಕ್ಕ ಸಾಧಕರ ಸೀಟ್ ಮೇಲೆ ಕೂರಬೇಕು ಎಂಬ ಕೂಗು ಇತ್ತು. ಆದರೆ, ಅದು ಯಾವುದೂ ಕಾರ್ಯ ರೂಪಕ್ಕೆ ಬರಲಿಲ್ಲ.

    English summary
    Zee Kannada Channel's popular show Weekend With Ramesh season 4 has ended. Here is the list of Achievers, whom viewers missed in the show. Take a look.
    Monday, July 15, 2019, 12:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X