Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ರಹ್ಮಾಂಡ ತ್ರಿಕಾಲ ಜ್ಞಾನಿ ಆದ್ರೆ ನಾನು ಸಕಾಲ ಜ್ಞಾನಿ
ನಾನು ಇಲ್ಲಿಗೆ ಬರುವ ಮುಂಚೆಯೇ ಹೊರಗಡೆಯಿಂದಲೇ ಎಲ್ಲವನ್ನೂ ತಿಳಿದುಕೊಂಡು ಬಂದಿದ್ದೆ. ಯಾರ್ಯಾರು ದುಡ್ಡು ಕೊಟ್ಟು ಬಂದಿದ್ದಾರೆ. ಏನೇನು ಡೀಲ್ ಮಾಡಿಕೊಂಡು ಬಂದಿದ್ದಾರೆ ಎಂಬುದು ನನಗೆ ಗೊತ್ತು ಎಂದು ಹಾಸ್ಯ ಚಟಾಕಿಯನ್ನೂ ಸೀರಿಯಸ್ಸಾಗಿ ಹೇಳಿದರು ಯೋಗೀಶ್.
ಅನುಶ್ರೀ ಹಾಗೂ ಯೋಗೀಶ್ ಕನ್ಫೆಷನ್ ರೂಮಿಗೆ ಹೋಗಿ ಬಂದ ಮೇಲೆ ಎಲ್ಲರಿಗೂ ಇವರಿಬ್ಬರ ಮೇಲೆ ಅನುಮಾನ ಶುರುವಾಗಿದೆ. ಇವರಿಬ್ಬರಿಗೂ ಏನೋ ರಹಸ್ಯ ಟಾಸ್ಕ್ ಕೊಟ್ಟಿದ್ದಾರೆ ಎಂಬ ಗುಮಾನಿ ಎಲ್ಲ ಸದಸ್ಯರನ್ನೂ ಕಾಡುತ್ತಿದೆ.
ಇದೇ ವಿಚಾರಕ್ಕೆ ಅರುಣ್ ಸಾಗರ್ ಅವರು ಅನುಶ್ರೀ ಅವರನ್ನು ಕೆಣಕಿದರು. ಅದೂ ಕುರಿಗಳು ಸಾರ್ ಕುರಿಗಳು ಎಂದು ಹಾಡುತ್ತಾ ಮಾರ್ಮಿಕವಾಗಿ ಅನುಶ್ರೀ ಅವರನ್ನು ಕೆಣಕುತ್ತಿದ್ದರು. ಕಡೆಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅರುಣ್ ದಿಢೀರ್ ಎಂದು ತುಲಾಭಾರ ಸೇವೆಯಿಂದ ಕಳಚಿಕೊಂಡರು. ತಕ್ಕಡಿ ನೆಲ ತಾಗಿತು.
ಇದರಿಂದ ಮನೆಯ ಇತರೆ ಸದಸ್ಯರೂ ಅರುಣ್ ವಿರುದ್ಧ ಎಗರಾಡಿದರು. ನಾವು ಬೆಳಗ್ಗೆಯಿಂದ ಕಷ್ಟಪಟ್ಟು ಮಾಡಿದ್ದನ್ನು ಅರುಣ್ ಅಣ್ಣ ಒಂದೇ ಕ್ಷಣದಲ್ಲಿ ಹಾಳು ಮಾಡಿಬಿಟ್ಟರು ಎಂದು ಅನುಶ್ರೀ ಕಣ್ಣೀರಿಟ್ಟರು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತಾಯಿತಲ್ಲಾ ತಮ್ಮ ಪರಿಸ್ಥಿತಿ ಎಂದು ಅನುಶ್ರೀ ಪರಿತಪಿಸಿದರು.