Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಣೆಯಾಗಿದ್ದ ಯೋಗೀಶ್ ಮನೆಯಲ್ಲಿ ಮತ್ತೆ ಪ್ರತ್ಯಕ್ಷ
ತಾಳಿಕಟ್ಟಿದ ಮೇಲೆ ರಾತ್ರೋರಾತ್ರಿ ನಾಪತ್ತೆಯಾಗಿದ್ದ ಮದುವೆ ಗಂಡು ಬಿಗ್ ಬಾಸ್ ಮನೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದರು. ಯೋಗೀಶ್ ಆಗಮನದಿಂದ ಎಲ್ಲರೂ ಖುಷಿಯಾದರು. ರಾತ್ರೋರಾತ್ರಿ ತಾವೇಕೆ ಓಡಿಹೋದಿರಿ ಅಳಿಯಂದಿರೇ ಎಂದು ಯೋಗೀಶ್ ಅವರನು ಸುದೀಪ್ ಕೇಳಿದರು.
ಅಯ್ಯೋ ಕತ್ತಲಾಗಿತ್ತು ಅಲ್ವಾ ಇನ್ನೇನಾದರೂ ಹೆಚ್ಚುಕಡಿಮೆಯಾದರೆ ಏನಪ್ಪಾ ಗತಿ ಎಂದು ಲುಂಗಿ ಸಮೇತ ಓಡಿದೆ ಎಂದರು. ಅದು ಸರಿ ಇಬ್ಬರನ್ನೂ ಮದುವೆಯಾಗ್ತೀನಿ ಎಂದ್ರಲ್ಲಾ ಯಾಕೆ? ಇಬ್ಬರನ್ನೂ ಮದುವೆಯಾದರೆ ಹಾಟ್ ಅಂಡ್ ಸ್ಪೈಸಿಯಾಗಿರುತ್ತದೆ ಎಂದರು. ಲೂಸ್ ಮಾದನ ಉತ್ತರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.
ಆದರೆ ನಿಕಿತಾ ನಾಮಿನೇಟ್ ನೀವು ನಾಮಿನೇಟ್ ಆಗ್ತೀರಾ. ಅವರು ಮನೆಯಿಂದ ಹೊರಹೋದರೆ ನೀವು ಔಟ್. ಆದರೆ ಮನೆಯ ಸದಸ್ಯರು ಯಾರು ಯೋಗೀಶ್ ಅವರನ್ನು ನಾಮಿನೇಟ್ ಮಾಡುವಂತಿಲ್ಲ ಎಂದು ಸುದೀಪ್ ವಿವರಿಸಿದರು. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ. ನಿಕಿತಾಗೆ ಒಳ್ಳೆಯ ಗೆಳೆಯ ಸಿಕ್ಕಂತಾಗಿದೆ.
ಮಂಗಳೂರಿನ ಸುಗುಣ ಎಂಬುವವರು ಈ ಸಲದ ಕಾಲರ್ ಆಫ್ ದ ವೀಕ್. ಅವರು ರಿಷಿಕಾ ಸಿಂಗ್ ಜೊತೆ ಮಾತನಾಡಿದರು. ರಿಷಿಕಾ ಅವರೇ ನೀವು ಯಕ್ಷಗಾನ ಪದ್ಯಗಳನ್ನು ಡಬ್ಬಾ ಎಂದದ್ದು ನಮಗೆಲ್ಲಾ ಬೇಸರತರಿಸಿದೆ. ಕಲಾವಿದರ ಕುಟುಂಬದಿಂದ ಬಂದಂತಹ ತಾವು ಈ ರೀತಿ ಮಾತನಾಡಬಹುದೇ? ನೀವು ಎಲ್ಲರ ಕ್ಷಮೆ ಕೇಳಬೇಕು ಎಂದರು?