Don't Miss!
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Lifestyle ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಗಳು ಜಾನಕಿ'ಗೆ ಆದ ಮೋಸ ಸಿ.ಎಸ್.ಪಿ ಮುಂದೆ ಬಯಲು.!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.
ಗಂಡ ಐಎಎಸ್ ಆಫೀಸರ್ ಅಲ್ಲ, ಸುಳ್ಳು ಹೇಳಿ ಮದುವೆ ಮಾಡಿಕೊಂಡಿದ್ದಾನೆ ಎಂಬ ಸತ್ಯ ಜಾನಕಿಗೆ ಗೊತ್ತಾಗುತ್ತಿದ್ದಂತೆಯೇ, ಆಕೆ ಹೇಳದೇ ಕೇಳದೇ ರಾತ್ರೋರಾತ್ರಿ ಮನೆಯಿಂದ ಹೊರಗೆ ಬಂದಳು.
ಮನೆಯಿಂದ ಆಚೆ ಹೊರಟ ಜಾನಕಿಗೆ ತೋಚಿದ್ದು ಸಿ.ಎಸ್.ಪಿ ಮನೆಯ ದಾರಿ. ಮಧ್ಯರಾತ್ರಿ ಬಸ್ ಹತ್ತಿಕೊಂಡು ಜಂಗಮದುರ್ಗಕ್ಕೆ ಹೋದ ಜಾನಕಿ ಸದ್ಯ ಸಿ.ಎಸ್.ಪಿ ಮನೆಯಲ್ಲಿ ಇದ್ದಾಳೆ.
ಮಗಳು ಕಾಣೆಯಾಗಿರುವ ಬಗ್ಗೆ ಗಾಬರಿಗೊಂಡಿದ್ದ ಸಿ.ಎಸ್.ಪಿಗೆ ಜಾನಕಿಯನ್ನ ನೋಡಿ ಖುಷಿಯಾಗಿದೆ. ಈ ನಡುವೆ ಜಾನಕಿ ಬದುಕಿನಲ್ಲಿ ಆಗಿರುವ ಕಹಿ ಘಟನೆಗಳು ಸಿ.ಎಸ್.ಪಿಗೆ ಆಘಾತ ನೀಡಿದೆ. ಮುಂದೆ ಓದಿರಿ...
ಸಿ.ಎಸ್.ಪಿಗೆ ಸತ್ಯ ಹೇಳದ ಜಾನಕಿ
''ಮನೆ ಬಿಟ್ಟು ಬಂದಿದ್ದು ಯಾಕೆ.?'' ಅಂತ ಸಿ.ಎಸ್.ಪಿ ಎಷ್ಟೇ ಕೇಳಿದರೂ, ಅವರ ಮುಂದೆ ಜಾನಕಿ ಕಣ್ಣೀರು ಹಾಕಿದಳೇ ಹೊರತು ಸತ್ಯ ಮಾತ್ರ ಬಾಯಿ ಬಿಡಲಿಲ್ಲ. ಸಿ.ಎಸ್.ಪಿ ಮುಂದೆ ಹೇಳದ ಸತ್ಯವನ್ನ ಶ್ಯಾಮಲ ಮುಂದೆ ಜಾನಕಿ ಬಾಯ್ಬಿಟ್ಟಳು.
ಚಂದು ಭಾರ್ಗಿ ಮಾಡಿದ ಕುತಂತ್ರ ಬಯಲಾಯಿತು.!
ಶ್ಯಾಮಲ ಮುಂದೆ ಗುಟ್ಟು ರಟ್ಟು
ಚಂದು ಭಾರ್ಗಿ ದ್ವೇಷ ಸಾಧಿಸುತ್ತಿರುವುದು, ನಿರಂಜನ್ ಧಾವಳಿ ಐಎಎಸ್ ಆಫೀಸರ್ ಅಂತ ಸುಳ್ಳು ಹೇಳಿದ್ದು, ಮಾನಸಿಕವಾಗಿ ನೊಂದಿರುವುದೆಲ್ಲವನ್ನೂ ಜಾನಕಿ, ಶ್ಯಾಮಲ ಮುಂದೆ ಹೇಳಿಕೊಂಡಳು.
ಅಂತೂ ಇಂತೂ 'ಮಗಳು ಜಾನಕಿ'ಯ ಮದುವೆ ನಡೆದೇ ಹೋಯ್ತು.!
ಸಿ.ಎಸ್.ಪಿಗೆ ನಿಜ ಗೊತ್ತಾಯ್ತು.!
''ಜಾನಕಿಗೆ ಮೋಸ ಆಗಿದೆ. ನಿರಂಜನ್ ಧಾವಳಿ ಐಎಎಸ್ ಆಫೀಸರ್ ಅಲ್ಲ. ಸಿ.ಎಂ ಆಫೀಸ್ ನಲ್ಲಿ ಜಾನಕಿಗೆ ಸತ್ಯ ಗೊತ್ತಾಗಿದೆ'' ಅಂತ ಶ್ಯಾಮಲ, ಸಿ.ಎಸ್.ಪಿಗೆ ಹೇಳಿದರು. ಇದನ್ನ ಕೇಳಿ ಸಿ.ಎಸ್.ಪಿ ಆಘಾತಗೊಂಡರು.
ನಿರಂಜನ್ ಬಂಡವಾಳ ಬಯಲಾಯಿತು: 'ಮಗಳು ಜಾನಕಿ'ಗೆ ಘೋರ ಸತ್ಯ ತಿಳಿಯಿತು!
ಕಂಪ್ಲೇಂಟ್ ಕೊಡ್ತಾರಾ ಸಿ.ಎಸ್.ಪಿ.?
ನಿರಂಜನ್ ಧಾವಳಿ ವಿರುದ್ಧ ದೂರು ದಾಖಲಿಸಲು ಸಿ.ಎಸ್.ಪಿ ಮುಂದಾಗಿದ್ದಾರೆ. ಗಂಡನ ವಿರುದ್ಧ ಕಂಪ್ಲೇಂಟ್ ಕೊಡಲು ಜಾನಕಿ ಒಪ್ಪುತ್ತಾಳಾ.? ಚಂದು ಭಾರ್ಗಿ ಬಂಡವಾಳ ಈಗಲಾದರೂ ಬಯಲಾಗುತ್ತಾ.? ನೋಡೋಣ.