Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರಂಜನ್ ಬಂಡವಾಳ ಬಯಲಾಯಿತು: 'ಮಗಳು ಜಾನಕಿ'ಗೆ ಘೋರ ಸತ್ಯ ತಿಳಿಯಿತು!
Recommended Video
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಅಪ್ಪ-ಅಮ್ಮನ ಮಾತನ್ನು ನಂಬಿ ನಿರಂಜನ್ ಧಾವಳಿ ಎಂಬ ಐಎಎಸ್ ಆಫೀಸರ್ ರನ್ನ ಮಗಳು ಜಾನಕಿ ಮದುವೆ ಆಗಿದ್ದರು.
ಮದುವೆ ಆದ ಕೆಲವೇ ದಿನಗಳಲ್ಲಿ ನಿರಂಜನ್ ಧಾವಳಿ ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯ ಜಾನಕಿಗೆ ಗೊತ್ತಾಗಿದೆ. ನಿರಂಜನ್ ಮಾಡಿದ ಮೋಸ ಜಾನಕಿ ಅರಿವಿಗೆ ಬಂದಿದೆ.
ಅತ್ತ ಮನೆಯಿಂದ ಹೊರಗೆ ನಡೆಯಲು ಪ್ಲಾನ್ ಮಾಡಿದ್ದ ಜಾನಕಿಗೆ ಇದೀಗ ದಿಕ್ಕು ತೋಚದಂತಾಗಿದೆ. ಹೀಗಾಗಿ, ರಾತ್ರೋರಾತ್ರಿ ಜಾನಕಿ ಮನೆಬಿಟ್ಟು ಹೋಗಿದ್ದಾರೆ. ಮನೆಯಲ್ಲಿ ಜಾನಕಿ ಇಲ್ಲದಿರುವುದಕ್ಕೆ ನಿರಂಜನ್ ಹಾಗೂ ತಾಯಿ ರಶ್ಮಿ ಗಾಬರಿ ಆಗಿದ್ದಾರೆ. ಮುಂದೆ ಓದಿರಿ...
ಮುಖ್ಯಮಂತ್ರಿ ಕಛೇರಿಯಲ್ಲಿ ಸತ್ಯ ಬಯಲು
ತವರು ಮನೆಯಲ್ಲಿ ಇರಲು ಇಷ್ಟಪಡದ ಜಾನಕಿ, ನಿರಂಜನ್ ಗೆ ವಾಷಿಂಗ್ಟನ್ ನಲ್ಲೇ ಪೋಸ್ಟ್ ಹಾಕಿಸಿಕೊಂಡು ಅಲ್ಲೇ ಸೆಟಲ್ ಆಗುವ ಪ್ಲಾನ್ ಮಾಡಿದ್ದರು. ಅದಕ್ಕಾಗಿ ಮುಖ್ಯಮಂತ್ರಿಗಳ ಕಛೇರಿಗೆ ಜಾನಕಿ ತೆರಳಿದ್ದರು. ಆದ್ರೆ, ಅಲ್ಲಿ ನಿರಂಜನ್ ಹೆಸರು ಐಎಎಸ್ ಆಫೀಸರ್ ಗಳ ಪಟ್ಟಿಯಲ್ಲಿ ಇಲ್ಲ ಎಂಬ ಸಂಗತಿ ಜಾನಕಿಗೆ ತಿಳಿದುಬಂತು.
ಅಂತೂ ಇಂತೂ 'ಮಗಳು ಜಾನಕಿ'ಯ ಮದುವೆ ನಡೆದೇ ಹೋಯ್ತು.!
ಪಾರ್ಕ್ ನಲ್ಲಿ ಬನ್ ತಿನ್ನುತ್ತಿರುವಾಗಲೇ ಡೌಟ್ ಬಂತು.!
ಅಂದು ಪಾರ್ಕ್ ನಲ್ಲಿ ಟೀ-ಬನ್ ತಿನ್ನುತ್ತಿರುವಾಗಲೇ, ನಿರಂಜನ್ ಮೇಲೆ ಜಾನಕಿಗೆ ಡೌಟ್ ಬಂದಿತ್ತು. ಅದೀಗ ನಿಜ ಆಯ್ತು. ನಿರಂಜನ್ ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯ ತಿಳಿದು ಜಾನಕಿ ಆಘಾತಗೊಂಡರು. ನಿರಂಜನ್ ಜೊತೆಗೆ ಬೇಸರದಿಂದ ಮಾತನಾಡಿದರು.
ಚಂದು ಭಾರ್ಗಿ ಮಾಡಿದ ಕುತಂತ್ರ ಬಯಲಾಯಿತು.!
ಮನೆ ಬಿಟ್ಟು ಹೋದ ಜಾನಕಿ
ತಂದೆ ಚಂದು ಭಾರ್ಗಿ ಬಗ್ಗೆ ಅದಾಗಲೇ ನೊಂದಿರುವ ಜಾನಕಿಗೆ ನಿರಂಜನ್ ಬಗ್ಗೆ ಸತ್ಯ ತಿಳಿದು ಶಾಕ್ ಆಗಿದ್ದಾರೆ. ಬೇರೆ ದಾರಿ ಕಾಣದೆ, ರಾತ್ರೋರಾತ್ರಿ ಜಾನಕಿ ಮನೆಯಿಂದ ಹೊರಗೆ ನಡೆದಿದ್ದಾರೆ. ನಾಪತ್ತೆ ಆಗಿರುವ ಜಾನಕಿಯನ್ನ ಹುಡುಕುವ ಪ್ರಯತ್ನ ನಡೆಯುತ್ತಿದೆ.
ಜಾನಕಿ ತಾಯಿ ರಶ್ಮಿ ಮುಂದೆ ಸತ್ಯ ಬಾಯ್ಬಿಟ್ಟ ನಿರಂಜನ್.!
ದೂರು ಕೊಡಲು ಹೋದ ಅತ್ತೆ-ಅಳಿಯ
ಜಾನಕಿ ಕಾಣೆಯಾಗಿರುವ ಬಗ್ಗೆ ದೂರು ಕೊಡಲು ರಶ್ಮಿ ಹಾಗೂ ನಿರಂಜನ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ದೂರು ಕೊಟ್ಟರೆ ತಮ್ಮ ಬಂಡವಾಳ ಬಯಲಿಗೆ ಬರುವುದು ಎಂದು ದೂರು ಕೊಡುವುದನ್ನು ತಪ್ಪಿಸಲು ಚಂದು ಭಾರ್ಗಿ ತೀರ್ಮಾನ ಮಾಡಿದ್ದಾರೆ. ಮುಂದೇನಾಗುತ್ತೋ, ನೋಡಬೇಕು.