Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಇಂತೂ 'ಮಗಳು ಜಾನಕಿ'ಯ ಮದುವೆ ನಡೆದೇ ಹೋಯ್ತು.!
Recommended Video
ಯಾವುದು ಆಗಬಾರದು ಅಂತ ವೀಕ್ಷಕರು ಅಂದುಕೊಂಡಿದ್ರೋ, ಅದು 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಡೆದೇ ಹೋಯ್ತು. ಮುಗ್ಧ ಹುಡುಗಿ ಜಾನಕಿಗೆ ಮೋಸ ಆಗಬಾರದು ಅಂತ ವೀಕ್ಷಕರು ಬಯಸುತ್ತಿದ್ದರು. ಆದ್ರೆ, ಕಡೆಗೂ ಮೋಸದ ಮದುವೆಗೆ ಜಾನಕಿ ಕೊರಳೊಡ್ಡಿದಳು.
ಕಡೆ ಕ್ಷಣದಲ್ಲಿ ಜಾನಕಿ-ನಿರಂಜನ್ ಮದುವೆಯನ್ನ ಆನಂದ್ ಬೆಳಗೂರು ನಿಲ್ಲಿಸಬಹುದು ಎಂಬ ನಿರೀಕ್ಷೆ ವೀಕ್ಷಕರಲ್ಲಿ ಇತ್ತು. ಆದ್ರೆ, ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಚಂದು ಭಾರ್ಗಿ ಪ್ಲಾನ್ ಪ್ರಕಾರ ಜಾನಕಿ-ನಿರಂಜನ್ ಮದುವೆ ಸರಾಗವಾಗಿ ನೆರವೇರಿದೆ.
ಮದುವೆ ನಡೆಯುತ್ತಿದ್ದ ಜಾಗಕ್ಕೆ ಆನಂದ್ ಬೆಳಗೂರು ಬಂದರೂ, ಮದುವೆ ನಿಲ್ಲಿಸಲಿಲ್ಲ. ಇತ್ತ ಸತ್ಯವನ್ನ ತಿಳಿದುಕೊಳ್ಳದೇ, ಅಪ್ಪ-ಅಮ್ಮನ ಮಾತು ನಂಬಿಕೊಂಡು ನಿರಂಜನ್ ನ ಜಾನಕಿ ಮದುವೆ ಆಗಿದ್ದಾಳೆ.
ನಿರಂಜನ್ ಐಎಎಸ್ ಆಫೀಸರ್ ಅಂತ ಜಾನಕಿ ಇನ್ನೂ ನಂಬಿಕೊಂಡಿದ್ದಾಳೆ. ನಿರಂಜನ್ ಬಗ್ಗೆ ಸತ್ಯ ಗೊತ್ತಿದ್ದರೂ, ಅದನ್ನ ಮಗಳಿಗೆ ಹೇಳುವ ಧೈರ್ಯವನ್ನ ತಾಯಿ ರಶ್ಮಿ ಮಾಡಲಿಲ್ಲ. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬಂತೆ' ಬರೀ ಸುಳ್ಳುಗಳಿಂದಲೇ ಜಾನಕಿ ಮದುವೆ ಮುಗಿದಿದೆ. ಮುಂದೆ ಓದಿರಿ...
ಸರಳವಾಗಿ ನಡೆದ ಜಾನಕಿ ಮದುವೆ
ಎಲ್ಲರಿಗೂ ಆಹ್ವಾನ ಕೊಟ್ಟು ಧಾಂ ಧೂಂ ಅಂತ ಮದುವೆ ಮಾಡಿದರೆ, ನಿರಂಜನ್ ಅಸಲಿಯತ್ತು ಯಾರ ಮುಂದಾದರೂ ಬಯಲಾಗಬಹುದು ಎಂಬ ಆತಂಕದಿಂದ ಮನೆಯಲ್ಲಿಯೇ ಜಾನಕಿ-ನಿರಂಜನ್ ಮದುವೆಯನ್ನ ಸರಳವಾಗಿ ಮಾಡಿ ಮುಗಿಸಿಬಿಟ್ಟರು ಚಂದು ಭಾರ್ಗಿ.
ಚಂದು ಭಾರ್ಗಿ ಮಾಡಿದ ಕುತಂತ್ರ ಬಯಲಾಯಿತು.!
ತಾಳಿ ಕಟ್ಟುವ ವೇಳೆ ಬಂದ ಆನಂದ್
ಜಾನಕಿ ಕೊರಳಿಗೆ ನಿರಂಜನ್ ತಾಳಿ ಕಟ್ಟುವ ವೇಳೆಗೆ ಕರೆಕ್ಟಾಗಿ ಆನಂದ್ ಬೆಳಗೂರು ಎಂಟ್ರಿಕೊಟ್ಟರೂ, ಮದುವೆ ನಿಲ್ಲಿಸಲಿಲ್ಲ. ಸೆಕ್ಯೂರಿಟಿ ಕೂಡ ಟೈಟ್ ಆಗಿದ್ರಿಂದ ಆನಂದ್ ಗೆ ಮದುವೆ ಮನೆಯೊಳಗೆ ಪ್ರವೇಶ ಸಿಗಲಿಲ್ಲ.
'ಮಗಳು ಜಾನಕಿ'ಯ ಕಥೆ ಮುಂದುವರೆಸಿ, ಟಿ.ಎನ್.ಎಸ್ ಕಡೆಯಿಂದ ಸಂಭಾವನೆ ಪಡೆಯಿರಿ.!
ಅಂದುಕೊಂಡಿದ್ದನ್ನ ಸಾಧಿಸಿದ ಚಂದು ಭಾರ್ಗಿ
ಜಾನಕಿ-ನಿರಂಜನ್ ಮದುವೆ ನಡೆಯಬೇಕು ಅನ್ನೋದು ಚಂದು ಭಾರ್ಗಿ ಪ್ಲಾನ್ ಆಗಿತ್ತು. ಅದನ್ನ ಚಂದು ಭಾರ್ಗಿ ಸಾಧಿಸಿಯೇಬಿಟ್ಟರು. ''ಜಾನಕಿ ಹಾಗೂ ನಿರಂಜನ್ ನನ್ನ ಎರಡು ಅಸ್ತ್ರಗಳು'' ಅಂತ ಚಂದು ಭಾರ್ಗಿ ಹೇಳಿದ್ದಾರೆ. ಈ ಅಸ್ತ್ರಗಳನ್ನ ಸಿ.ಎಸ್.ಪಿ ವಿರುದ್ಧ ಚಂದು ಭಾರ್ಗಿ ಹೇಗೆ ಪ್ರಯೋಗಿಸುತ್ತಾರೋ, ನೋಡಬೇಕು.
ಮಗಳ ಮದುವೆ ನಡೆಯಲಿಲ್ಲ: ಜಾನಕಿ ಕಣ್ಣೀರು ಹಾಕಲಿಲ್ಲ.!
ಜಾನಕಿಗೆ ಸತ್ಯ ಗೊತ್ತಾದರೆ.?
ನಿರಂಜನ್ ಐಎಎಸ್ ಆಫೀಸರ್ ಅಲ್ಲ... ಕೇವಲ ಪದವೀಧರ ಮಾತ್ರ ಅನ್ನೋದು ಜಾನಕಿಗೆ ಗೊತ್ತಾದರೆ ಆಕೆಯ ಪ್ರತಿಕ್ರಿಯೆ ಹೇಗಿರಬಹುದು.? ಚಂದು ಭಾರ್ಗಿಯ ಮಾಸ್ಟರ್ ಪ್ಲಾನ್ ಅರಿವಿಗೆ ಬಂದರೆ ಜಾನಕಿ ಏನು ಮಾಡಬಹುದು.? ಎಂಬುದೇ ಸದ್ಯದ ಕುತೂಹಲ.