Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಸತ್ಯ ಹೊರ ಕಕ್ಕಿದ ನಿರಂಜನ್: ಚಂದು ಭಾರ್ಗಿ ಇನ್ ಡೇಂಜರ್.!
Recommended Video
ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿರುವ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.
'ಮಗಳು ಜಾನಕಿ' ಬಾಳು ನಾಶ ಆಗಲು.. ಜಾನಕಿ ಗಂಡ ಸುಳ್ಳು ಹೇಳಲು ಚಂದು ಭಾರ್ಗಿ ನೇರ ಕಾರಣ ಅಂತ ಎಲ್ಲರ ಮುಂದೆ ನಿರಂಜನ್ ಸತ್ಯ ಹೊರ ಕಕ್ಕಿದ್ದಾರೆ. ನಿರಂಜನ್ ಬಿಚ್ಚಿಟ್ಟ ಸತ್ಯವನ್ನು ಕೇಳಿ ಜಾನಕಿ, ಚಂಚಲ ಮತ್ತು ತಾಯಿ ರಶ್ಮಿ ಆಘಾತಗೊಂಡಿದ್ದಾರೆ.
ನಿರಂಜನ್ ಸತ್ಯ ಹೇಳಬಾರದು.. ನಿರಂಜನ್ ಬಾಯಿ ಬಿಡುವ ಮುನ್ನ ಆತನ ಕಿಡ್ನ್ಯಾಪ್ ಆಗಬೇಕು ಅಂತ ಚಂದು ಭಾರ್ಗಿ ಎಷ್ಟೋ ಪ್ರಯತ್ನ ಪಟ್ಟರು. ಆದ್ರೆ, ಅದು ಸಾಧ್ಯವಾಗಲೇ ಇಲ್ಲ. ಅಂದುಕೊಂಡಿದ್ದನ್ನ ಜಾನಕಿ ಮುಂದೆ ಹೇಳುವಲ್ಲಿ ನಿರಂಜನ್ ಯಶಸ್ವಿ ಆದರು. ಸದ್ಯ ಚಂದು ಭಾರ್ಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಓದಿರಿ...
ಮುಚ್ಚಿಟ್ಟ ಸತ್ಯ ಬಟಾಬಯಲು.!
ಇಷ್ಟು ದಿನ ಚಂದು ಭಾರ್ಗಿ ಮುಚ್ಚಿಟ್ಟಿದ್ದ ಜಾನಕಿ ಮದುವೆ ರಹಸ್ಯ ಬಟಾ ಬಯಲಾಗಿದೆ. ಜಾನಕಿ ಜೊತೆ ಮದುವೆ ಆಗಲು ಚಂದು ಭಾರ್ಗಿ ಬ್ಲಾಕ್ ಮೇಲ್ ಮಾಡಿದ್ದರು... ಇದಕ್ಕಾಗಿ ಹಣ ಕೂಡ ನೀಡಿದ್ದರು ಎಂದು ನಿರಂಜನ್ ಹೇಳಿಬಿಟ್ಟರು.
'ಮಗಳು ಜಾನಕಿ'ಗೆ ಆದ ಮೋಸ ಸಿ.ಎಸ್.ಪಿ ಮುಂದೆ ಬಯಲು.!
ನಿರಂಜನ್ ಹೇಳಿದ್ದೆಲ್ಲಾ ಸುಳ್ಳು.!
ಸತ್ಯವನ್ನೆಲ್ಲಾ ನಿರಂಜನ್ ಹೇಳಿದ್ಮೇಲೆ, ''ಎಲ್ಲವೂ ಸುಳ್ಳು'' ಎಂದು ಚಂದು ಭಾರ್ಗಿ ವಾದಿಸಿದರು. ಸಾಲದಕ್ಕೆ, ನಿರಂಜನ್ ಕಪಾಳಕ್ಕೆ ಬಾರಿಸಿದರು. ಅಲ್ಲದೇ, ಜಾನಕಿಗೆ ನಿರಂಜನ್ ನ ನಂಬದಿರಲು ಚಂದು ಭಾರ್ಗಿ ಸೂಚಿಸಿದರು.
ಸತ್ಯ ಗೊತ್ತಿದ್ದರೂ ಮುಚ್ಚಿಟ್ಟ ತಾಯಿ: ನೊಂದ 'ಮಗಳು ಜಾನಕಿ'!
ಗೊಂದಲದಲ್ಲಿ ಜಾನಕಿ
ನಿರಂಜನ್ ಹೇಳಿದನ್ನ ನಂಬಬೇಕೋ, ಬೇಡ್ವೋ ಎಂಬ ಗೊಂದಲದಲ್ಲಿ ಸದ್ಯ ಜಾನಕಿ ಇದ್ದಾರೆ. ತಂದೆ ಮೇಲೆ ಕೋಪವಿದ್ದರೂ, ಚಂದು ಭಾರ್ಗಿ ಬ್ಲಾಕ್ ಮೇಲ್ ಮಾಡ್ತಾರಾ ಎಂಬ ಅನುಮಾನ ಜಾನಕಿಗೆ ಕಾಡುತ್ತಿದೆ.
ನಿರಂಜನ್ ಬಂಡವಾಳ ಬಯಲಾಯಿತು: 'ಮಗಳು ಜಾನಕಿ'ಗೆ ಘೋರ ಸತ್ಯ ತಿಳಿಯಿತು!
ನಂಬಲು ರಶ್ಮಿ ತಯಾರಿಲ್ಲ.!
ಚಂದು ಭಾರ್ಗಿ ವಿರುದ್ಧ ಆರೋಪ ಮಾಡಿರುವ ನಿರಂಜನ್ ನ ನಂಬಲು ರಶ್ಮಿ ರೆಡಿ ಇಲ್ಲ. ಯಾಕಂದ್ರೆ, ಮದುವೆಗೂ ಮುನ್ನವೇ ತಾನು ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯವನ್ನ ರಶ್ಮಿಗೆ ನಿರಂಜನ್ ತಿಳಿಸಿದ್ದರು. ಆದ್ರೆ, ಇದರ ಹಿಂದೆ ಚಂದು ಭಾರ್ಗಿ ಇದ್ದಾರೆ ಅಂತ ಅಂದು ನಿರಂಜನ್ ಹೇಳಿರಲಿಲ್ಲ. ಹೀಗಾಗಿ, ನಿರಂಜನ್ ನ ನಂಬಲು ರಶ್ಮಿ ರೆಡಿ ಇಲ್ಲ.
ಸತ್ಯ ಬಿಚ್ಚಿಡುತ್ತಾರಾ ನಿರಂಜನ್.? ಚಂದು ಭಾರ್ಗಿ ಬಂಡವಾಳ ಬಯಲಾಗುತ್ತಾ.?
ಮುಂದೇನಾಗುತ್ತೋ.?
ಒಂದ್ಕಡೆ, ನಿರಂಜನ್ ಗೆ ಚಂದು ಭಾರ್ಗಿ ದುಡ್ಡು ಕೊಟ್ಟಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಇನ್ನೊಂದ್ಕಡೆ, ನಿರಂಜನ್ ತಂದೆ ನಾಪತ್ತೆ ಆಗಿದ್ದಾರೆ. ಅತ್ತ ಸಿ.ಎಸ್.ಪಿ ಇದ್ಯಾವುದೇ ವಿಚಾರ ಗೊತ್ತಿಲ್ಲ. ಗೊತ್ತಾದರೆ, ಮುಂದೇನಾಗುತ್ತೋ.?