Don't Miss!
- News ಸಿದ್ದರಾಮಯ್ಯರು ಸಿಎಂ ಆದಾಗ ವಿಜೃಂಭಿಸುವ ದೇಶದ್ರೋಹಿಗಳು: ಶೋಭಾ ಕರಂದ್ಲಾಜೆ ಹೇಳಿದ್ದೇನು?
- Finance Zero Shadow Day: ಬೆಂಗಳೂರಿನಲ್ಲಿ ಇಂದು ಪ್ರಕೃತಿಯ ಅಚ್ಚರಿ
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂಪರ್ ಸ್ಪೀಡ್ ಆಗಿ ಸಾಗುತ್ತಿದೆ 'ಮಗಳು ಜಾನಕಿ' ಸೀರಿಯಲ್ ಕಥೆ
Recommended Video
ಟಿ.ಎನ್.ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಶುರು ಆಗಿ ಮೂರು ದಿನಗಳು ಕಳೆದಿವೆ ಅಷ್ಟೇ. ಮೂರು ದಿನಗಳಲ್ಲಿ 'ಮಗಳು ಜಾನಕಿ'ಯ ಕಥೆ ಸೂಪರ್ ಸ್ಪೀಡ್ ಆಗಿ ಸಾಗಿದೆ.
ಅದಾಗಲೇ ಧಾರಾವಾಹಿಯಲ್ಲಿರುವ ಎಲ್ಲಾ ಪಾತ್ರಗಳ ಪರಿಚಯವೂ ಮುಗಿದು, ಜಾನಕಿಯ ಪ್ರೇಮ ಕಥೆಗೆ ಇನ್ನೇನು ಅಧಿಕೃತ ಮುದ್ರೆ ಬೀಳಬೇಕು ಎನ್ನುವಷ್ಟರಲ್ಲಿ ಜಾನಕಿಯ ಸಾಕು ತಂದೆ ಚಂದು ಬಾರ್ಗಿ ಅರೆಸ್ಟ್ ಆಗುವ ಮಟ್ಟಕ್ಕೆ ಬಂದಿದೆ.
ಜಂಗಮದುರ್ಗದ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಚಂದು ಬಾರ್ಗಿ ಇನ್ನೂ ನಾಮಿನೇಷನ್ ಸಲ್ಲಿಸಿಲ್ಲ. ಹೀಗಿರುವಾಗಲೇ, ಜಂಗಮದುರ್ಗದ ತಮ್ಮ ಫ್ಯಾಕ್ಟರಿಯಲ್ಲಿ ಸತ್ತ ವ್ಯಕ್ತಿಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
'ಮಗಳು ಜಾನಕಿ': ಮೊದಲ ಸಂಚಿಕೆಯಲ್ಲೇ ವೀಕ್ಷಕರನ್ನು ಕಟ್ಟಿಹಾಕಿ ಕೂರಿಸಿದ ಟಿ.ಎನ್.ಎಸ್
ಫ್ಯಾಕ್ಟರಿಯಲ್ಲಿ ಸತ್ತ ವ್ಯಕ್ತಿಗೂ ಚಂದು ಬಾರ್ಗಿಗೂ ಹಳೇ ದ್ವೇಷ ಇರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ, ತಡ ಮಾಡದೆ ಅರೆಸ್ಟ್ ವಾರೆಂಟ್ ಹಿಡಿದು ಚಂದು ಬಾರ್ಗಿಯನ್ನ ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ.
ಎದುರಾಗಿರುವ ಆಪತ್ತಿನಿಂದ ತಪ್ಪಿಸಿಕೊಳ್ಳಲು ಚಂದು ಬಾರ್ಗಿಗೆ ಮುಖ್ಯಮಂತ್ರಿಗಳೂ ಸೇರಿದಂತೆ ಯಾರೂ ದೂರವಾಣಿ ಕರೆಗೆ ಸಿಗಲಿಲ್ಲ. ಹೀಗಾಗಿ ಬಂಧನ ಭೀತಿ ಚಂದು ಬಾರ್ಗಿಗೆ ಕಾಡುತ್ತಿದೆ.
ಇತ್ತ ಮದುವೆ ಮಾತುಕತೆ ನಡೆಸಲು ಬಂದಿದ್ದ ಜಾನಕಿ, ಸಹೋದರಿ ಚಂಚಲ ಹಾಗೂ ತಾಯಿ ರಶ್ಮಿಗೂ ಚಂದು ಬಾರ್ಗಿ ಅರೆಸ್ಟ್ ಆಗುತ್ತಿರುವ ಸಂಗತಿ ಆಘಾತ ನೀಡಿದೆ.
'ಮಗಳು ಜಾನಕಿ' ಸೀರಿಯಲ್ ಹೋಗುತ್ತಿರುವ ಸ್ಪೀಡ್ ನೋಡಿದ್ರೆ, ಮುಂದಿನ ವಾರದ ಹೊತ್ತಿಗೆ ಕೋರ್ಟ್ ಕಟಕಟೆಯ ಮುಂದೆ ಕರಿ ಕೋಟು ಧರಿಸಿ ಸಿ.ಎಸ್.ಪಿ ವಾದ ಮಾಡಲು ಶುರು ಮಾಡಿದರೂ ಅಚ್ಚರಿ ಇಲ್ಲ.