Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಮೋಸದ ಮದುವೆ ಮುರಿದು ಬೀಳುತ್ತಾ.?
ಟಿ.ಎನ್.ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯ ಕಥೆಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಲಭಿಸಿದೆ.
ಸ್ನೇಹಿತೆ ಕಾತ್ಯಾಯಿನಿ ಮೆನನ್ ಆತ್ಮಹತ್ಯೆ ಕೇಸ್ ನಲ್ಲಿ ತಗಲಾಕೊಂಡು, ಚಂದು ಭಾರ್ಗಿ ಒತ್ತಡದ ಮೇರೆಗೆ ಪೊಲೀಸರ ವಶದಲ್ಲಿದ್ದ ಆನಂದ್ ಬೆಳಗೂರು ಇದೀಗ ಬಿಡುಗಡೆ ಆಗಿದ್ದಾರೆ.
''ಕಾತ್ಯಾಯಿನಿ ಹಾಗೂ ನನ್ನ ನಡುವೆ ಫ್ರೆಂಡ್ ಶಿಪ್ ಬಿಟ್ಟರೆ ಬೇರೆ ಯಾವುದೇ ಸಂಬಂಧ ಇರಲಿಲ್ಲ. ಡೆತ್ ನೋಟ್ ನಲ್ಲಿ ನನ್ನ ಹೆಸರು ಉಲ್ಲೇಖ ಆಗಿರುವುದೇ ಬೇರೆ ಕಾರಣಕ್ಕೆ'' ಎಂಬ ಸತ್ಯವನ್ನ ಜಾನಕಿಗೆ ತಿಳಿಸುವ ಪ್ರಯತ್ನವನ್ನ ಮಾಡಿದ್ದಾರೆ ಆನಂದ್ ಬೆಳಗೂರು.
ಕ್ರಿಮಿನಲ್ ಲಾಯರ್ ಸಿ.ಎಸ್.ಪಿ ತಲೆಯಲ್ಲಿ ಅನುಮಾನದ ಹುಳ ಹೊಕ್ಕಿದೆ.!
ಅಲ್ಲದೇ, ಸುಖಾಸುಮ್ಮನೆ ಕಂಬಿ ಎಣಿಸುವ ಹಾಗೆ ಮಾಡಿದ್ದು ಚಂದು ಭಾರ್ಗಿಯೇ ಎಂಬ ಅನುಮಾನ ಕೂಡ ಆನಂದ್ ಗಿದೆ. ಹೀಗಾಗಿ, ಜಾನಕಿಯ ಸ್ನೇಹಿತೆಗೆ ಇರುವ ಸತ್ಯವನ್ನೆಲ್ಲಾ ಆನಂದ್ ಹೇಳಿದ್ದಾರೆ.
ಜಾನಕಿಗೆ ಆಕೆಯ ಸ್ನೇಹಿತೆ ಫೋನ್ ಮಾಡಿ 'ಸತ್ಯ' ಹೇಳಲು ಮುಂದಾಗಿದ್ದಾಳೆ. ಸಾಕ್ಷಿ ಸಮೇತ ಆನಂದ್ ಆಡಿರುವ ಮಾತುಗಳನ್ನ ಜಾನಕಿ ನಂಬುತ್ತಾಳಾ.? ನಕಲಿ ಐಪಿಎಸ್ ಅಧಿಕಾರಿ ನಿರಂಜನ್ ಜೊತೆಗಿನ ಜಾನಕಿ ಮದುವೆ ಮುರಿದು ಬೀಳುತ್ತಾ.? ಎಂಬುದೇ ಸದ್ಯದ ಕುತೂಹಲ.
ಪ್ರೀತಿಯಲ್ಲಿ ಬಿರುಕು: 'ಮಗಳು ಜಾನಕಿ'ಯ ಹೃದಯ ಚೂರು ಚೂರು.!
ಈ ನಡುವೆ ಸಿ.ಎಸ್.ಪಿಗೆ ಕಾಡುತ್ತಿದ್ದ ಡೌಟ್ ಗಳನ್ನ ಸುಳ್ಳು ಹೇಳಿ ನಿರಂಜನ್ ಕ್ಲಿಯರ್ ಮಾಡಿದ್ದಾರೆ. ಆದ್ರೆ, ಎಷ್ಟು ದಿನ ತಾನೇ ಸುಳ್ಳನ್ನ ಬಚ್ಚಿಡಲು ಸಾಧ್ಯ.? ಚಂದು ಭಾರ್ಗಿ ನಿಶ್ಚಯ ಮಾಡಿರುವ ಮೋಸದ ಮದುವೆಗೆ ಮುಹೂರ್ತ ಎಂದು.? ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.