Don't Miss!
- News ಪಟ್ಟು ಬಿಡದೆ ನಾಮಪತ್ರ ಸಲ್ಲಿಸಿದ ಕೆಎಸ್ ಈಶ್ವರಪ್ಪಗೆ ಏಪ್ರಿಲ್ 22 ಡೆಡ್ ಲೈನ್!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಮೋಸದ ಮದುವೆ ಮುರಿದು ಬೀಳುತ್ತಾ.?
ಟಿ.ಎನ್.ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯ ಕಥೆಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಲಭಿಸಿದೆ.
ಸ್ನೇಹಿತೆ ಕಾತ್ಯಾಯಿನಿ ಮೆನನ್ ಆತ್ಮಹತ್ಯೆ ಕೇಸ್ ನಲ್ಲಿ ತಗಲಾಕೊಂಡು, ಚಂದು ಭಾರ್ಗಿ ಒತ್ತಡದ ಮೇರೆಗೆ ಪೊಲೀಸರ ವಶದಲ್ಲಿದ್ದ ಆನಂದ್ ಬೆಳಗೂರು ಇದೀಗ ಬಿಡುಗಡೆ ಆಗಿದ್ದಾರೆ.
''ಕಾತ್ಯಾಯಿನಿ ಹಾಗೂ ನನ್ನ ನಡುವೆ ಫ್ರೆಂಡ್ ಶಿಪ್ ಬಿಟ್ಟರೆ ಬೇರೆ ಯಾವುದೇ ಸಂಬಂಧ ಇರಲಿಲ್ಲ. ಡೆತ್ ನೋಟ್ ನಲ್ಲಿ ನನ್ನ ಹೆಸರು ಉಲ್ಲೇಖ ಆಗಿರುವುದೇ ಬೇರೆ ಕಾರಣಕ್ಕೆ'' ಎಂಬ ಸತ್ಯವನ್ನ ಜಾನಕಿಗೆ ತಿಳಿಸುವ ಪ್ರಯತ್ನವನ್ನ ಮಾಡಿದ್ದಾರೆ ಆನಂದ್ ಬೆಳಗೂರು.
ಕ್ರಿಮಿನಲ್ ಲಾಯರ್ ಸಿ.ಎಸ್.ಪಿ ತಲೆಯಲ್ಲಿ ಅನುಮಾನದ ಹುಳ ಹೊಕ್ಕಿದೆ.!
ಅಲ್ಲದೇ, ಸುಖಾಸುಮ್ಮನೆ ಕಂಬಿ ಎಣಿಸುವ ಹಾಗೆ ಮಾಡಿದ್ದು ಚಂದು ಭಾರ್ಗಿಯೇ ಎಂಬ ಅನುಮಾನ ಕೂಡ ಆನಂದ್ ಗಿದೆ. ಹೀಗಾಗಿ, ಜಾನಕಿಯ ಸ್ನೇಹಿತೆಗೆ ಇರುವ ಸತ್ಯವನ್ನೆಲ್ಲಾ ಆನಂದ್ ಹೇಳಿದ್ದಾರೆ.
ಜಾನಕಿಗೆ ಆಕೆಯ ಸ್ನೇಹಿತೆ ಫೋನ್ ಮಾಡಿ 'ಸತ್ಯ' ಹೇಳಲು ಮುಂದಾಗಿದ್ದಾಳೆ. ಸಾಕ್ಷಿ ಸಮೇತ ಆನಂದ್ ಆಡಿರುವ ಮಾತುಗಳನ್ನ ಜಾನಕಿ ನಂಬುತ್ತಾಳಾ.? ನಕಲಿ ಐಪಿಎಸ್ ಅಧಿಕಾರಿ ನಿರಂಜನ್ ಜೊತೆಗಿನ ಜಾನಕಿ ಮದುವೆ ಮುರಿದು ಬೀಳುತ್ತಾ.? ಎಂಬುದೇ ಸದ್ಯದ ಕುತೂಹಲ.
ಪ್ರೀತಿಯಲ್ಲಿ ಬಿರುಕು: 'ಮಗಳು ಜಾನಕಿ'ಯ ಹೃದಯ ಚೂರು ಚೂರು.!
ಈ ನಡುವೆ ಸಿ.ಎಸ್.ಪಿಗೆ ಕಾಡುತ್ತಿದ್ದ ಡೌಟ್ ಗಳನ್ನ ಸುಳ್ಳು ಹೇಳಿ ನಿರಂಜನ್ ಕ್ಲಿಯರ್ ಮಾಡಿದ್ದಾರೆ. ಆದ್ರೆ, ಎಷ್ಟು ದಿನ ತಾನೇ ಸುಳ್ಳನ್ನ ಬಚ್ಚಿಡಲು ಸಾಧ್ಯ.? ಚಂದು ಭಾರ್ಗಿ ನಿಶ್ಚಯ ಮಾಡಿರುವ ಮೋಸದ ಮದುವೆಗೆ ಮುಹೂರ್ತ ಎಂದು.? ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.