Don't Miss!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿ.ಎಸ್.ಪಿ ಮುಂದೆ ನಿರಂಜನ್: ಇಷ್ಟು ದಿನ ಬಚ್ಚಿಟ್ಟ ಸತ್ಯ ಈಗ ಬಯಲು.?
ಲಾಯರ್ ಸಿ.ಎಸ್.ಪಿ ಸಹೋದರಿ ಶ್ಯಾಮಲ ಮನೆಯಲ್ಲಿ ಬಾಡಿಗೆಗೆ ಇದ್ದ ನಿರಂಜನ್, ಮದುವೆ ಆದ್ಮೇಲೆ ಅತ್ತ ಕಡೆ ತಲೆ ಹಾಕಿಯೂ ಮಲಗಿಲ್ಲ. ಇತ್ತ 'ಮಗಳು' ಜಾನಕಿ ಮದುವೆ ಆಗಿರುವ ಹುಡುಗನ ಹೆಸರು ನಿರಂಜನ್ ಧಾವಳಿ ಅಂತ ಸಿ.ಎಸ್.ಪಿಗೆ ಗೊತ್ತು. ಆದ್ರೆ, ಆ ನಿರಂಜನ್.. ಈ ನಿರಂಜನ್ ಇಬ್ಬರೂ ಒಬ್ಬರೇ ಎಂಬ ಸತ್ಯ ಮಾತ್ರ ಸಿ.ಎಸ್.ಪಿಗೆ ತಿಳಿದಿಲ್ಲ.
ಇನ್ನೂ ಸಿ.ಎಸ್.ಪಿಗೂ ನಿರಂಜನ್ ಗೂ ಪರಿಚಯ ಇದೆ ಎಂಬುದು ಇಲ್ಲಿಯವರೆಗೂ ಜಾನಕಿ ಅರಿವಿಗೆ ಬಂದಿಲ್ಲ.
ಇಷ್ಟು ದಿನ ಜಾನಕಿ ಮತ್ತು ಸಿ.ಎಸ್.ಪಿಯಿಂದ ನಿರಂಜನ್ ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದರು. ಆ ಸತ್ಯ ಬಟಾ ಬಯಲಾಗುವ ಸಮಯ ಹತ್ತಿರಕ್ಕೆ ಬಂದಿದೆ. ಭಯ ಪಟ್ಟುಕೊಂಡು ಜೀವನ ಸಾಗಿಸುವ ಬದಲು ಸಿ.ಎಸ್.ಪಿ ಮುಂದೆ ಎಲ್ಲಾ ಸತ್ಯ ಬಾಯಿಬಿಡಲು ನಿರಂಜನ್ ಮನಸ್ಸು ಮಾಡಿದ್ದಾರೆ. ಮುಂದೆ ಓದಿರಿ...
ತನಿಖೆ ಚಾಲ್ತಿಯಲ್ಲಿದೆ
ಮದುವೆ ಆಗುವಾಗ ನಿರಂಜನ್ ಸುಳ್ಳು ಹೇಳಿ ಜಾನಕಿಗೆ ಮೋಸ ಮಾಡಿದ್ದಾರೆ ಎಂಬ ಅನಾಮಿಕ ಕಂಪ್ಲೇಂಟ್ ಸಿ.ಎಂ ಕಛೇರಿ ತಲುಪಿತ್ತು. ಪರಿಣಾಮ, ತನಿಖೆ ನಡೆಸಲು ಸಿ.ಎಂ ಸಾಹೇಬ್ರು, ಆನಂದ್ ಬೆಳಗೂರು ರನ್ನ ನೇಮಿಸಿದ್ದರು. ಸದ್ಯ ತನಿಖೆ ಚಾಲ್ತಿಯಲ್ಲಿದ್ದು, ನಿರಂಜನ್ ಸುಳ್ಳು ಹೇಳಿರುವ ಬಗ್ಗೆ ಆನಂದ್ ಮುಂದೆ ಜಾನಕಿ ಒಪ್ಪಿಕೊಂಡಿದ್ದಾರೆ.
ಅಂತೂ ಸತ್ಯ ಹೊರ ಕಕ್ಕಿದ ನಿರಂಜನ್: ಚಂದು ಭಾರ್ಗಿ ಇನ್ ಡೇಂಜರ್.!
ಸಂಕಷ್ಟದಲ್ಲಿ ನಿರಂಜನ್
ನಿರಂಜನ್ ಮೋಸ ಮಾಡಿರುವ ಬಗ್ಗೆ ಪೊಲೀಸರ ಮುಂದೆ ಜಾನಕಿ ಹೇಳಿಕೆ ಕೊಟ್ಟಿರುವ ಕಾರಣ ನಿರಂಜನ್ ಗೆ ಬಂಧನ ಭೀತಿ ಎದುರಾಗಿದೆ. ಸಂಕಷ್ಟದಲ್ಲಿ ಇರುವ ನಿರಂಜನ್ ರನ್ನ ಬಚಾವ್ ಮಾಡಲು ಸಿ.ಎಸ್.ಪಿ ಮನೆಗೆ ಬರುವಂತೆ ಪತಿಗೆ ಜಾನಕಿ ಸೂಚಿಸಿದ್ದರು.
ಸತ್ಯ ಗೊತ್ತಿದ್ದರೂ ಮುಚ್ಚಿಟ್ಟ ತಾಯಿ: ನೊಂದ 'ಮಗಳು ಜಾನಕಿ'!
ಸಿ.ಎಸ್.ಪಿ ಮನೆಯಲ್ಲಿ ನಿರಂಜನ್
ಜಾನಕಿ ಬರುವ ಮೊದಲೇ ಸಿ.ಎಸ್.ಪಿ ಮನೆಯಲ್ಲಿ ನಿರಂಜನ್ ಪ್ರತ್ಯಕ್ಷವಾಗಿದ್ದಾರೆ. ಧೈರ್ಯ ಮಾಡಿ ಇರುವ ಸತ್ಯವನ್ನ ಸಿ.ಎಸ್.ಪಿ ಮುಂದೆ ನಿರಂಜನ್ ಹೇಳುತ್ತಾರಾ.? ಎಂಬುದೇ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ.
ಅಂತೂ ಇಂತೂ 'ಮಗಳು ಜಾನಕಿ'ಯ ಮದುವೆ ನಡೆದೇ ಹೋಯ್ತು.!
ಮುಂದೇನಾಗುತ್ತೆ.?
ಮೋಸದ ಮದುವೆ ಹಿಂದೆ ಚಂದು ಭಾರ್ಗಿ ಕೈವಾಡ ಇತ್ತು ಅಂತ ನಿರಂಜನ್ ಬಾಯ್ಬಿಟ್ಟರೆ, ಸಿ.ಎಸ್.ಪಿ ಸುಮ್ಮನೆ ಕೂರುತ್ತಾರೆಯೇ.? ಖಂಡಿತ ಇಲ್ಲ. ಮಗಳಿಗೆ ಮೋಸ ಮಾಡಿರುವವರ ವಿರುದ್ಧ ಸಿ.ಎಸ್.ಪಿ ಸಮರ ಸಾರುವುದು ಗ್ಯಾರೆಂಟಿ. ಒಟ್ನಲ್ಲಿ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಗೆ ಸದ್ಯ ದೊಡ್ಡ ತಿರುವು ಸಿಗುವುದು ಖಚಿತ.