ಜಾನಕಿ ಜೊತೆಗಿನ ಮದುವೆಗೆ ನಿರಂಜನ್ ಒಲ್ಲೆ.?
Recommended Video

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ.
ಸಿ.ಎಸ್.ಪಿ ಮೇಲೆ ದ್ವೇಷ ಸಾಧಿಸುತ್ತಿರುವ ಚಂದು ಭಾರ್ಗಿ, ಸಾಕು ಮಗಳು ಜಾನಕಿಯನ್ನ ನಕಲಿ ಐಎಎಸ್ ಅಧಿಕಾರಿ ನಿರಂಜನ್ ಧಾವಳಿಗೆ ಕೊಟ್ಟು ಮದುವೆ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.
ಸಿ.ಎಸ್.ಪಿ ಮಗಳಾಗಿರುವ ಜಾನಕಿಗೆ ಮಾನಸಿಕ ಹಿಂಸೆ ನೀಡುವ ಸಲುವಾಗಿ, ಜಾನಕಿ ಪ್ರೀತಿಸಿದ್ದ ಹುಡುಗನ (ಆನಂದ್ ಬೆಳಗೂರು) ಜೊತೆಗೆ ಚಂದು ಭಾರ್ಗಿ ಮದುವೆ ಮಾಡಿಸುತ್ತಿಲ್ಲ. ಆನಂದ್ ಬೆಳಗೂರು ಮೇಲೆ ಸುಳ್ಳು ಆಪಾದನೆ ಬರುವ ಹಾಗೆ ನೋಡಿಕೊಂಡು ನಿರಂಜನ್ ಧಾವಳಿಗೆ ಐಎಎಸ್ ಅಧಿಕಾರಿಯಂತೆ ನಾಟಕ ಆಡಲು ಸೂಚಿಸಿ ಮದುವೆ ಪ್ಲಾನ್ ಮಾಡಿದ್ದಾರೆ ಚಂದು ಭಾರ್ಗಿ.

ಜಾನಕಿಗೆ ಆನಂದ್ ಬೆಳಗೂರು ಮೇಲೆ ಮನಸ್ಸು. ನಿರಂಜನ್ ಕಂಡ್ರೆ ದೂರ ಸರಿಯುವ ಜಾನಕಿ ಕಂಡ್ರೆ ನಿರಂಜನ್ ಗೂ ಇರುಸು ಮುರಿಸು. ಸಾಲದಕ್ಕೆ, ಐಎಎಸ್ ನಾಟಕ ಬೇರೆ ಆಡ್ತಿರೋದ್ರಿಂದ, ಮುಂದೆ ಇದು ಕಂಟಕ ಆಗಬಹುದು ಎಂಬ ಕಾರಣಕ್ಕೆ ಮದುವೆಯಿಂದ ಹಿಂದೆ ಸರಿಯಲು ನಿರಂಜನ್ ಧಾವಳಿ ಮನಸ್ಸು ಮಾಡಿದ್ದಾರೆ.
''ನನಗೆ ಈ ಮದುವೆ ಶಿಕ್ಷೆ ಬೇಡ'' ಎಂದು ಚಂದು ಭಾರ್ಗಿ ಮುಂದೆ ನಿಂತು ನಿರಂಜನ್ ಧಾವಳಿ ಕಣ್ಣೀರು ಸುರಿಸಿದ್ದಾರೆ. ಮೋಸದ ಮದುವೆಗೆ ಸಾಥ್ ಕೊಡದೆ ನಿರಂಜನ್ ದೂರ ಸರಿಯುತ್ತಾರಾ.? ಜಾನಕಿ-ಆನಂದ್ ಮದುವೆ ಆಗ್ತಾರಾ.? ಇಂದಿನ ಸಂಚಿಕೆ ನೋಡಿ...


Click it and Unblock the Notifications











