Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾನಕಿ ಜೊತೆಗಿನ ಮದುವೆಗೆ ನಿರಂಜನ್ ಒಲ್ಲೆ.?
Recommended Video
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ.
ಸಿ.ಎಸ್.ಪಿ ಮೇಲೆ ದ್ವೇಷ ಸಾಧಿಸುತ್ತಿರುವ ಚಂದು ಭಾರ್ಗಿ, ಸಾಕು ಮಗಳು ಜಾನಕಿಯನ್ನ ನಕಲಿ ಐಎಎಸ್ ಅಧಿಕಾರಿ ನಿರಂಜನ್ ಧಾವಳಿಗೆ ಕೊಟ್ಟು ಮದುವೆ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.
ಸಿ.ಎಸ್.ಪಿ ಮಗಳಾಗಿರುವ ಜಾನಕಿಗೆ ಮಾನಸಿಕ ಹಿಂಸೆ ನೀಡುವ ಸಲುವಾಗಿ, ಜಾನಕಿ ಪ್ರೀತಿಸಿದ್ದ ಹುಡುಗನ (ಆನಂದ್ ಬೆಳಗೂರು) ಜೊತೆಗೆ ಚಂದು ಭಾರ್ಗಿ ಮದುವೆ ಮಾಡಿಸುತ್ತಿಲ್ಲ. ಆನಂದ್ ಬೆಳಗೂರು ಮೇಲೆ ಸುಳ್ಳು ಆಪಾದನೆ ಬರುವ ಹಾಗೆ ನೋಡಿಕೊಂಡು ನಿರಂಜನ್ ಧಾವಳಿಗೆ ಐಎಎಸ್ ಅಧಿಕಾರಿಯಂತೆ ನಾಟಕ ಆಡಲು ಸೂಚಿಸಿ ಮದುವೆ ಪ್ಲಾನ್ ಮಾಡಿದ್ದಾರೆ ಚಂದು ಭಾರ್ಗಿ.
ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಮೋಸದ ಮದುವೆ ಮುರಿದು ಬೀಳುತ್ತಾ.?
ಜಾನಕಿಗೆ ಆನಂದ್ ಬೆಳಗೂರು ಮೇಲೆ ಮನಸ್ಸು. ನಿರಂಜನ್ ಕಂಡ್ರೆ ದೂರ ಸರಿಯುವ ಜಾನಕಿ ಕಂಡ್ರೆ ನಿರಂಜನ್ ಗೂ ಇರುಸು ಮುರಿಸು. ಸಾಲದಕ್ಕೆ, ಐಎಎಸ್ ನಾಟಕ ಬೇರೆ ಆಡ್ತಿರೋದ್ರಿಂದ, ಮುಂದೆ ಇದು ಕಂಟಕ ಆಗಬಹುದು ಎಂಬ ಕಾರಣಕ್ಕೆ ಮದುವೆಯಿಂದ ಹಿಂದೆ ಸರಿಯಲು ನಿರಂಜನ್ ಧಾವಳಿ ಮನಸ್ಸು ಮಾಡಿದ್ದಾರೆ.
'ಮಗಳು ಜಾನಕಿ': ಮರಳುಗಾಡಿನಲ್ಲಿ ವೀಕ್ಷಕರಿಗೆ ಒಯಾಸಿಸ್ ಸಿಕ್ಕ ಹಾಗಿದೆ.!
''ನನಗೆ ಈ ಮದುವೆ ಶಿಕ್ಷೆ ಬೇಡ'' ಎಂದು ಚಂದು ಭಾರ್ಗಿ ಮುಂದೆ ನಿಂತು ನಿರಂಜನ್ ಧಾವಳಿ ಕಣ್ಣೀರು ಸುರಿಸಿದ್ದಾರೆ. ಮೋಸದ ಮದುವೆಗೆ ಸಾಥ್ ಕೊಡದೆ ನಿರಂಜನ್ ದೂರ ಸರಿಯುತ್ತಾರಾ.? ಜಾನಕಿ-ಆನಂದ್ ಮದುವೆ ಆಗ್ತಾರಾ.? ಇಂದಿನ ಸಂಚಿಕೆ ನೋಡಿ...