Don't Miss!
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆ.10ರಿಂದ ಉದಯ ಟಿವಿಯಲ್ಲಿ ಮಹಾಭಾರತ
ಈಗ ಈ ಸಂಸ್ಥೆ ನಿರ್ಮಿಸಿರುವ 'ಮಹಾಭಾರತ' ಧಾರಾವಾಹಿ ಇದೇ ಸೆಪ್ಟೆಂಬರ್ 10ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ರಿಂದ 6.30ರವರೆಗೂ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಜನಪ್ರಿಯ ಗಾಯಕ ಶಂಕರ್ ಮಹದೇವನ್ ಅವರು ಹಾಡಿದ್ದು ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಿನಿವಿಸ್ತಾಸ್ ಸಂಸ್ಥೆಯ ಸುನಿಲ್ ಮೆಹ್ತಾ ಹಾಗೂ ಪ್ರೇಮ್ ಕಿಶನ್ ಈ ಧಾರಾವಾಹಿ ನಿರ್ಮಾಪಕರು. ನಿರ್ದೇಶನ ಕಿಶನ್ ಸೇಥಿ. ಸಾವಂತ್ ಹಾಗೂ ಶರವಣ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಜೆ.ಎಂ. ಪ್ರಹ್ಲಾದ್ ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದು, ರುದ್ರಮೂರ್ತಿ ಶಾಸ್ತ್ರಿ ಅವರು ಸಂಭಾಷಣೆಗಳನ್ನು ರಚಿಸಿದ್ದಾರೆ.
ಅದ್ಭುತವಾದ ಅರಮನೆ, ಕೋಟೆ, ಯುದ್ಧ ಪ್ರಾಂಗಣ ಸೆಟ್ ಗಳನ್ನು ವಸಂತಕುಲಕರ್ಣಿ ಮಾಡಿಕೊಟ್ಟಿದ್ದಾರೆ. ಸಿನಿವಿಸ್ತಾಸ್ ಸಂಸ್ಥೆ ಹಲವಾರು ಮೆಗಾ ಧಾರಾವಾಹಿಗಳನ್ನು ನಿರ್ಮಿಸಿದ್ದು ಕಿರುತೆರೆ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ. ಈಗ ಕನ್ನಡದಲ್ಲಿ ಇಂಥಹದ್ದೊಂದು ಪ್ರಯೋಗವನ್ನು ಮಾಡಿರುವುದು ನಿಜಕ್ಕೂ ಅಭಿನಂದನೀಯ.
ಕೃಷ್ಣನಾಗಿ ವಲ್ಲಭ ವೈಎಸ್, ಭೀಷ್ಮ ಅನಂತವೇಲು, ಧೃತರಾಷ್ಟ್ರ ಜಯಕುಮಾರ್, ವಿಧುರ ಎಚ್ಎಂಟಿ ನಂದ, ದ್ರೋಣ ಚೇತನ್ ರಾಜ್, ಕೃಪಾಚಾರ್ಯ ಎಂ ಗುರುರಾಜ್, ಅಶ್ವತ್ಥಾಮ ಇಪಿ ಅಕ್ಷಯ್, ಕುಂತಿ ಅರ್ಚನಾ ಅನಂತವೇಲು...
ಗಾಂಧಾರಿ ಸುಜಾತಾ ಕುರಹಟ್ಟಿ, ಯುಧಿಷ್ಟಿರ ರವಿ ಭಟ್, ಭೀಮ ಪ್ರವೀಣ್ ಕುಮಾರ್ ಡಿ, ಅರ್ಜುನ ಅಂಬರೀಶ್ ಸಾರಂಗ್, ನಕುಲ ಚಿರಾಗ್, ಸಹದೇವ ನಂದೀಶ್, ದುರ್ಯೋಧನ ಚೆಲುವರಾಜ್, ಕರ್ಣ ಪ್ರಕಾಶ್ ಕುಮಾರ್ ಸಿಎನ್, ದುಶ್ಯಾಸನ ರಾಜೇಶ್, ಶಕುನಿ ರಮೇಶ್ ಪಂಡಿತ್...
ದುಪ್ರದ ಗಣೇಶ್ ರಾವ್, ಶಂತನು ಅಮಿತ್ ಭಾರ್ಗವ್, ಯುವ ಭೀಷ್ಮ ಲೋಕೇಶ್, ಗಂಗಾ ರಶ್ಮಿ, ಸತ್ಯವತಿ ಮಾನ್ಸಿ, ಅಂಬೆ ನಿಶಿತಾ ಗೌಡ, ಅಂಬಿಕೆ ಅರ್ಚನಾ ಗಾಯಕ್ವಾಡ್, ಅಂಬಾಲಿಕೆ ಮಾಧವಿ. (ಒನ್ ಇಂಡಿಯಾ ಕನ್ನಡ)