Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ಹೊಸ ಭವಿಷ್ಯವಾಣಿ 'ಮಹರ್ಷಿವಾಣಿ'
ಜಗತ್ತು ಅವಸರದ ಗೂಡು. ಈ ಅವಸರವೇ ಆಧುನಿಕತೆ ಇರಬಹುದು. ಆಧುನಿಕತೆ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದೇ ರೀತಿ ಸಾವಧಾನ, ಸಮಾಧಾನಗಳನ್ನೂ ನಮ್ಮಿಂದ ದೂರ ಮಾಡುತ್ತಿದೆ. ಬೆಳಗ್ಗೆ ಏಳುವ ಗೃಹಿಣಿಯ ಧಾರ್ಮಿಕ ಸಮಸ್ಯೆಗಳಿಗೆ ಸಾಂತ್ವನ ಬೇಕಿದೆ. ಇಹ ಜೀವನದಲ್ಲಿ ನೊಂದವರಿಗೆ ನೆಮ್ಮದಿ ಬೇಕಿದೆ. ಆಫೀಸಿನ ಗಡಿಬಿಡಿಯಲ್ಲಿರುವ ಗಂಡನಿಗೆ, ಓದುವ ಮಕ್ಕಳಿಗೆ, ವಯಸ್ಸಾದವರ ಧಾರ್ಮಿಕ ಜಿಜ್ಞಾಸೆಗೆ ಪರಿಹಾರ ಬೇಕಿದೆ.
ಟಿ.ವಿ ಮಾಧ್ಯಮದ ಮೂಲಕ ಸರಳ ಉಪದೇಶಗಳಿಗೆ ಮೊರೆ ಹೋಗಿರುವ ಕಾಲವಿದು. ಸಾಂತ್ವನಕ್ಕಾಗಿ ಹಪಹಪಿಸುತ್ತಿರುವ, ಒತ್ತಡಗಳಿಗೆ ಸಿಲುಕಿರುವ ಸಂದರ್ಭಗಳಿವು. ಆಪ್ತ ಸಲಹೆ, ವಿಶ್ವಾಸ ತುಂಬಿದ ಮಾರ್ಗದರ್ಶನ ಪ್ರತೀ ಸಾಮಾನ್ಯನಿಗೂ ಬೇಕಿದೆ. ಜೀ ಕನ್ನಡ ಇದೀಗ ಇಂತಹ ಸಾಮಾನ್ಯರ ಸಮಸ್ಯೆಗಳಿಗೆ ಆಪ್ತ ಧ್ವನಿಯಾಗುತ್ತಿದೆ. [ವೃಷಭದಿಂದ ಕರ್ಕ ರಾಶಿಯವರಿಗೆ 2014ರ ಸಂಕ್ರಮಣ ಫಲ]
ಶ್ರೀ ಮಹರ್ಷಿಗಳು ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲೆಂದೇ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಇದುವರೆಗಿನ ಅನುಭವವನ್ನು ಜೀ ಕನ್ನಡ ಹೊಸಬಗೆಯಲ್ಲಿ ಜನತೆಗೆ ಸದುಪಯೋಗವಾಗುವಂತೆ ಶ್ರಮಿಸಲಿದೆ.
ಫೋನ್ ಮುಖೇನವಲ್ಲದೆ-ಗಂಭೀರ ಸಮಸ್ಯೆ ಇರುವವರಿಗೆ ಮುಖಾಮುಖಿ ಭೇಟಿ ಏರ್ಪಡಿಸಲಾಗುತ್ತದೆ. ಸಾಂತ್ವನದ ಮಹಾ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಹರ್ಷಿಗಳಿಗೆ ಗೊತ್ತಿರುವ ಹಸ್ತ ಸಾಮುದ್ರಿಕೆ, ದರ್ಪಣಾಂಜನ, ಚಕ್ಷುರ್ಮತಿ ಜ್ಞಾನ, ಯೋಗಸಿದ್ಧಿ ಮೊದಲಾದ ಮಹಾನ್ ಧಾರ್ಮಿಕ ವಿಜ್ಞಾನವನ್ನು ಜನಾಧರಣೀಯವಾಗಿ ಜೀ ಕನ್ನಡ ಪ್ರಸ್ತುತಪಡಿಸಲಿದೆ.
"ಒಂದು ವಿಶ್ವಸನೀಯ, ಒಂದು ಪ್ರಾಮಾಣಿಕ ಆಪ್ತ ಧ್ವನಿಯೇ-ಮಹರ್ಷಿ ವಾಣಿ. ಮಹರ್ಷಿಯ ಮಹಾ ಸಂದೇಶಗಳಿಗೆ ಮಹರ್ಷಿ ವಾಣಿ ವಿನೂತನ ವೇದಿಕೆಯಾಗಲಿದೆ"- ಎಂದು ಜೀ ಕನ್ನಡದ ಬಿಸಿನೆಸ್ ಹೆಡ್ ಸೀಜು ಪ್ರಭಾಕರನ್ ಅಭಿಪ್ರಾಯಪಡುತ್ತಾರೆ.
ಮಹರ್ಷಿಗಳು ಸಾಮಾನ್ಯರ ನಾಡಿ ಮಿಡಿತ ಬಲ್ಲವರು. ಸಮಸ್ಯೆಗಳಿಗೆ ಸರಳ ಪರಿಹಾರ ಕೊಡಬಲ್ಲವರು-ಮಹರ್ಷಿಗಳ ಈ ಶಕ್ತಿಯನ್ನು ಪ್ರತೀ ಸಾಮಾನ್ಯ ವ್ಯಕ್ತಿಗೆ ತಲುಪಿಸುವ ವಿನಮ್ರ ಕೆಲಸ ನಮ್ಮದೆಂದು-ಜೀ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರ್ ಅಭಿಪ್ರಾಯಪಡುತ್ತಾರೆ.ಮಹರ್ಷಿ ವಾಣಿ-ಇದೇ ಜೂನ್ 16 ರಿಂದ ಪ್ರತಿ ಸೋಮವಾರದಿಂದ ಶನಿವಾರ ಬೆಳಗ್ಗೆ 8 ಗಂಟೆಗೆ ಪ್ರಸಾರವಾಗಲಿದೆ. (ಒನ್ಇಂಡಿಯಾ ಕನ್ನಡ)