Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಶಂಕಿತರ ಸುಳಿವು ಕೊಟ್ಟರೆ ₹20 ಲಕ್ಷ ಬಹುಮಾನ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಸ್ವರ್ಧಿಗಳು, ಈಗ 'ಮಜಾ ಭಾರತ'ದ ಸಾರಥಿಗಳು!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಮುಗಿದ ನಂತರ ಕಲರ್ಸ್ ಕುಟುಂಬದಿಂದ ಮತ್ತೊಂದು ರಿಯಾಲಿಟಿ ಶೋ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದ ಹೆಸರು 'ಮಜಾ ಭಾರತ'. ಇದೊಂದು ಪಕ್ಕಾ ಕಾಮಿಡಿ ರಿಯಾಲಿಟಿ ಶೋ.
ವಾರಾಂತ್ಯದಲ್ಲಿ ಕನ್ನಡ ಮನರಂಜನ ವಾಹಿನಿಗಳು ವಿವಿಧ ಬಗ್ಗೆಯ ಕಾರ್ಯಕ್ರಮಗಳ ಮೂಲಕ ವೀಕ್ಷರನ್ನ ರಂಜಿಸುತ್ತವೆ. ಆದ್ರೆ, ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಲಿರುವ 'ಮಜಾ ಭಾರತ' ವಾರದ ಪ್ರಾರಂಭದಲ್ಲಿ ವೀಕ್ಷಕರನ್ನ ರಂಜಿಸಲು ಬರುತ್ತಿದೆ.['ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!]
24 ಹಾಸ್ಯ ಕಲಾವಿದರು, 6 ತಂಡಗಳು.....ಇಬ್ಬರು ಸೂಪರ್ ಆಂಕರ್ ಗಳ ಜೊತೆ, ಇಬ್ಬರು ಮಾಸ್ಟರ್ ಗಳು 'ಮಜಾ ಭಾರತ' ನಲ್ಲಿದ್ದಾರೆ. ಮುಂದೆ ಓದಿ...
'ಕಲರ್ಸ್ ಸೂಪರ್'ನಲ್ಲಿ ಕಾಮಿಡಿ ಶೋ!
'ಬಿಗ್ ಬಾಸ್ ಕನ್ನಡ 4' ಕಾರ್ಯಕ್ರಮವನ್ನ ಕೊನೆ ಎರಡು ವಾರ ಯಶಸ್ವಿಯಾಗಿ ಪ್ರಸಾರ ಮಾಡಿದ 'ಕಲರ್ಸ್ ಸೂಪರ್ ವಾಹಿನಿ ಈಗ 'ಮಜಾ ಭಾರತ್' ಎಂಬ ಕಾಮಿಡಿ ಕಾರ್ಯಕ್ರಮವನ್ನ ಹೊತ್ತು ತಂದಿದೆ. 24 ಕಲಾವಿದರ, 6 ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.
ಶೀತಲ್ ಶೆಟ್ಟಿ-ನಿರಂಜನ್ ನಿರೂಪಣೆ
ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಕಾಮಿಡಿ ಕಾರ್ಯಕ್ರಮ 'ಮಜಾ ಭಾರತ್' ನಲ್ಲಿ ಕರಾವಳಿ ಚೆಲುವೆ ಶೀತಲ್ ಶೆಟ್ಟಿ ಹಾಗೂ ಮಾತಿನ ಮಾಂತ್ರಿಕ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಲಿದ್ದಾರೆ.
ಶ್ರುತಿ-ಎಸ್.ನಾರಾಯಣ್ ತೀರ್ಪುಗಾರರು
ಅಂದ್ಹಾಗೆ, ಈ ರಿಯಾಲಿಟಿ ಶೋ ಗೆ ಕನ್ನಡದ ಖ್ಯಾತ ನಟಿ ಶ್ರುತಿ ಹಾಗೂ ಕನ್ನಡದ ಖ್ಯಾತ ನಟ-ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ವಾರದಿಂದ ಶುರು!
ಇದೇ ಫೆಬ್ರವರಿ 6 ರಿಂದ 'ಕಲರ್ಸ್ ಸೂಪರ್ ವಾಹಿನಿ'ಯಲ್ಲಿ 'ಮಜಾ ಭಾರತ' ಶುರುವಾಗಲಿದ್ದು, ಸೋಮವಾರ, ಮಂಗಳವಾರ, ಬುಧವಾರ ಮೂರು ದಿನಗಳು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.