Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಜಾಭಾರತ'ಕ್ಕೆ ಬಂದ್ರು ಹೊಸ ಆಂಕರ್, ನಿಮಗೆಲ್ಲಾ ಪರಿಚಯದವರೇ.!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರ್ತಿದ್ದ ಜನಪ್ರಿಯ ಕಾರ್ಯಕ್ರಮ 'ಮಜಾಭಾರತ' ಶೋ ಮತ್ತೆ ಬರ್ತಿದೆ. ಈಗಾಗಲೇ ಎರಡು ಆವೃತ್ತಿ ಮುಗಿಸಿರುವ ಕಾಮಿಡಿ ಕಾರ್ಯಕ್ರಮ ಈಗ ಮೂರನೇ ಆವೃತ್ತಿ ಆರಂಭಿಸಿದೆ.
ಹೊಸ ಆವೃತ್ತಿಯಲ್ಲಿ ಹೊಸ ಸರ್ಪ್ರೈಸ್ ಗಳನ್ನ ಹೊತ್ತು ತರುತ್ತಿದೆ ಮಜಾಭಾರತ. ಹೌದು, ಮೊದಲನೇ ಸರ್ಪ್ರೈಸ್ ಎಂಬಂತೆ ಕಾರ್ಯಕ್ರಮದ ನಿರೂಪಕರೇ ಬದಲಾಗಿದ್ದಾರೆ.
ಮೊದಲೆರಡು ಆವೃತ್ತಿಯನ್ನ ನಿರೂಪಣೆ ಮಾಡಿದ್ದ ನಿರಂಜನ್ ದೇಶಪಾಂಡೆ ಈ ಶೋನಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಎಂಟ್ರಿಯಾಗಿದ್ದಾರೆ. ಕನ್ನಡ ಕೋಗಿಲೆ ಶೋ ಮೂಲಕ ಸ್ಟಾರ್ ಅಂಕರ್ ಆದ ಅನುಪಮಾ ಗೌಡ ಈಗ ಮಜಾಭಾರತದ ಸಾರಥಿಯಾಗಿದ್ದಾರೆ.
ಹೊಸ ರಿಯಾಲಿಟಿ ಶೋಗೆ ಆಂಕರ್ ಆದ 'ಬಿಗ್ ಬಾಸ್' ಅನುಪಮಾ
ಇನ್ನು ಎರಡನೇ ಸೀಸನ್ ನಲ್ಲಿ ತೀರ್ಪುಗಾರರಾಗಿದ್ದ ರಚಿತಾ ರಾಮ್ ಮತ್ತು ಗುರುಕಿರಣ್ ಮೂರನೇ ಆವೃತ್ತಿಯಲ್ಲೂ ಮುಂದುವರಿದಿದ್ದಾರೆ.
ನಟಿ ಅನುಪಮಾ ಗೌಡ ಮದುವೆ ಆಗಲ್ವಂತೆ.! ಸಿಂಗಲ್ ಆಗಿ ಇರ್ತಾರಂತೆ.!
ಅದಕ್ಕೂ ಮೊದಲು, ಒಂದನೇ ಆವೃತ್ತಿಲ್ಲಿ ಶೀತಲ್ ಶೆಟ್ಟಿ ಮತ್ತು ನಿರಂಜನ್ ದೇಶಪಾಂಡೆ ಮಜಾಭಾರತ ನಿರೂಪಣೆ ಮಾಡಿದ್ದರು. ಹಿರಿಯ ನಟಿ ಶ್ರುತಿ, ನಿರ್ದೇಶಕ ಎಸ್ ನಾರಾಯಣ್ ತೀರ್ಪುಗಾರರಾಗಿದ್ದರು.
ಇನ್ನುಳಿದಂತೆ ವಾರದಲ್ಲಿ ಐದು ದಿನ ಮಜಾಭಾರತ ಪ್ರಸಾರವಾಗುತ್ತಿದ್ದು, ಹೊಸ ಹೊಸ ಸ್ಪರ್ಧಿಗಳೊಂದಿಗೆ ವಾಪಸ್ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ಗಂಟೆಗೆ ಮಜಾಭಾರತ ಟೆಲಿಕಾಸ್ಟ್ ಆಗಲಿದೆ.