Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಜಾಭಾರತ'ಕ್ಕೆ ಬಂದ್ರು ಹೊಸ ಆಂಕರ್, ನಿಮಗೆಲ್ಲಾ ಪರಿಚಯದವರೇ.!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರ್ತಿದ್ದ ಜನಪ್ರಿಯ ಕಾರ್ಯಕ್ರಮ 'ಮಜಾಭಾರತ' ಶೋ ಮತ್ತೆ ಬರ್ತಿದೆ. ಈಗಾಗಲೇ ಎರಡು ಆವೃತ್ತಿ ಮುಗಿಸಿರುವ ಕಾಮಿಡಿ ಕಾರ್ಯಕ್ರಮ ಈಗ ಮೂರನೇ ಆವೃತ್ತಿ ಆರಂಭಿಸಿದೆ.
ಹೊಸ ಆವೃತ್ತಿಯಲ್ಲಿ ಹೊಸ ಸರ್ಪ್ರೈಸ್ ಗಳನ್ನ ಹೊತ್ತು ತರುತ್ತಿದೆ ಮಜಾಭಾರತ. ಹೌದು, ಮೊದಲನೇ ಸರ್ಪ್ರೈಸ್ ಎಂಬಂತೆ ಕಾರ್ಯಕ್ರಮದ ನಿರೂಪಕರೇ ಬದಲಾಗಿದ್ದಾರೆ.
ಮೊದಲೆರಡು ಆವೃತ್ತಿಯನ್ನ ನಿರೂಪಣೆ ಮಾಡಿದ್ದ ನಿರಂಜನ್ ದೇಶಪಾಂಡೆ ಈ ಶೋನಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಎಂಟ್ರಿಯಾಗಿದ್ದಾರೆ. ಕನ್ನಡ ಕೋಗಿಲೆ ಶೋ ಮೂಲಕ ಸ್ಟಾರ್ ಅಂಕರ್ ಆದ ಅನುಪಮಾ ಗೌಡ ಈಗ ಮಜಾಭಾರತದ ಸಾರಥಿಯಾಗಿದ್ದಾರೆ.
ಹೊಸ ರಿಯಾಲಿಟಿ ಶೋಗೆ ಆಂಕರ್ ಆದ 'ಬಿಗ್ ಬಾಸ್' ಅನುಪಮಾ
ಇನ್ನು ಎರಡನೇ ಸೀಸನ್ ನಲ್ಲಿ ತೀರ್ಪುಗಾರರಾಗಿದ್ದ ರಚಿತಾ ರಾಮ್ ಮತ್ತು ಗುರುಕಿರಣ್ ಮೂರನೇ ಆವೃತ್ತಿಯಲ್ಲೂ ಮುಂದುವರಿದಿದ್ದಾರೆ.
ನಟಿ ಅನುಪಮಾ ಗೌಡ ಮದುವೆ ಆಗಲ್ವಂತೆ.! ಸಿಂಗಲ್ ಆಗಿ ಇರ್ತಾರಂತೆ.!
ಅದಕ್ಕೂ ಮೊದಲು, ಒಂದನೇ ಆವೃತ್ತಿಲ್ಲಿ ಶೀತಲ್ ಶೆಟ್ಟಿ ಮತ್ತು ನಿರಂಜನ್ ದೇಶಪಾಂಡೆ ಮಜಾಭಾರತ ನಿರೂಪಣೆ ಮಾಡಿದ್ದರು. ಹಿರಿಯ ನಟಿ ಶ್ರುತಿ, ನಿರ್ದೇಶಕ ಎಸ್ ನಾರಾಯಣ್ ತೀರ್ಪುಗಾರರಾಗಿದ್ದರು.
ಇನ್ನುಳಿದಂತೆ ವಾರದಲ್ಲಿ ಐದು ದಿನ ಮಜಾಭಾರತ ಪ್ರಸಾರವಾಗುತ್ತಿದ್ದು, ಹೊಸ ಹೊಸ ಸ್ಪರ್ಧಿಗಳೊಂದಿಗೆ ವಾಪಸ್ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ಗಂಟೆಗೆ ಮಜಾಭಾರತ ಟೆಲಿಕಾಸ್ಟ್ ಆಗಲಿದೆ.