Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸೃಜನ್ ನಿರ್ಮಾಣದ ಧಾರಾವಾಹಿಗೆ ಬಿಗ್ ಬಾಸ್' ಸ್ಪರ್ಧಿ ಮೇಘಶ್ರೀ ನಾಯಕಿ
ನಟ ಸಂಚಾರಿ ವಿಜಯ್ ಅಂಧನಾಗಿ ಅಭಿನಯ ಮಾಡಿದ್ದ ಸಿನಿಮಾ 'ಕೃಷ್ಣ ತುಳಸಿ'. ಈ ಸಿನಿಮಾದ ನಾಯಕಿ ಆಗಿದ್ದು ಮೇಘಶ್ರೀ. ಚೂಡಿದಾರ್ ಹಾಕಿಕೊಂಡು ಹೋಮ್ಲಿ ಹುಡುಗಿಯಾಗಿ ಈಕೆ ಇಲ್ಲಿ ಕಾಣಿಸಿಕೊಂಡಿದ್ದರು.
ಸಿನಿಮಾ ಮಾಡುತ್ತಿದ್ದ ಮೇಘಶ್ರೀ ಈಗ ಕಿರುತೆರೆಗೆ ಬಂದಿದ್ದಾರೆ. 'ಕಲರ್ಸ್ ಕನ್ನಡ' ವಾಹಿನಿಯ ಹೊಸ ಧಾರಾವಾಹಿಗೆ ಈಕೆಯೆ ನಾಯಕಿಯಾಗಿದ್ದಾರೆ. ವಿಶೇಷ ಅಂದರೆ, ಈ ಧಾರಾವಾಹಿಯನ್ನು ನಟ ಸೃಜನ್ ಲೋಕೇಶ್ ನಿರ್ಮಾಣ ಮಾಡುತ್ತಿದ್ದಾರೆ.
ಸೂಪರ್ ಎಕ್ಸ್ ಕ್ಲೂಸಿವ್: ಇಂದು 'ಬಿಗ್ ಬಾಸ್'ಗೆ ಮೆಗಾ ಎಂಟ್ರಿ ನೀಡಲಿರುವ ಸುಂದರಿ ಈಕೆಯೇ.!
ಕಲರ್ಸ್ ವಾಹಿನಿಯ 'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ ರಂಜಿಸುತ್ತಿರುವ ಸೃಜನ್ ಹೊಸ ಧಾರಾವಾಹಿಯ ತಯಾರಿಯಲ್ಲಿ ಇದ್ದಾರೆ. ಈ ಸೀರಿಯಲ್ ಗೆ 'ಇವಳು ಸುಜಾತಾ' ಎನ್ನುವ ಹೆಸರನ್ನು ಇಡಲಾಗಿದೆ. ಸುಜಾತಾ ಪಾತ್ರದಲ್ಲಿ ಮೇಘಶ್ರೀ ನಟಿಸುತ್ತಿದ್ದಾರೆ.
ಹಿರಿತೆರೆಗೂ ಕಿರುತೆರೆಗೂ ಹೆಚ್ಚು ವ್ಯತ್ಯಾಸ ಇಲ್ಲ. ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರೇ ಈಗ ಧಾರಾವಾಹಿ ಮಾಡುತ್ತಿದ್ದು, ತಾನು ಕೂಡ ಸಿನಿಮಾದಿಂದ ಸೀರಿಯಲ್ ಗೆ ಬಂದಿದ್ದೇನೆ ಎನ್ನುತ್ತಾರೆ ನಟಿ ಮೇಘಶ್ರೀ.
ಮೇಘಶ್ರೀ ಸಿನಿಮಾದ ಜೊತೆಗೆ ಬಿಗ್ ಬಾಸ್ ಸೀಸನ್ 6 ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು. ಜೊತೆಗೆ ನಾಗಕನ್ನಿಕೆ ಸೀರಿಯಲ್ ನಲ್ಲಿಯೂ ನಟಿಸಿದ್ದರು.
'ಇವಳು ಸುಜಾತಾ' ಧಾರಾವಾಹಿ ಸುಜಾತಾ ಎಂಬ ಸಾಮಾನ್ಯ ವರ್ಗದ ಹುಡುಗಿಯ ಜೀವನವನ್ನು ಕುರಿತಾಗಿದೆಯಂತೆ. ಭಾವನಾತ್ಮಕ ಕಥೆ ಇಲ್ಲಿ ಇದ್ದು, ವೀಕ್ಷಕರನ್ನು ರಂಜಿಸುವ ಪ್ರಯತ್ನದಲ್ಲಿ ಇಡೀ ತಂಡ ಇದೆ.
ಅಂದಹಾಗೆ, 'ಇವಳು ಸುಜಾತಾ' ಧಾರಾವಾಹಿಯ ಪ್ರಸಾರದ ದಿನಾಂಕ, ಇತರ ಕಲಾವಿದರ ಮಾಹಿತಿ ಸದ್ಯದಲ್ಲಿಯೇ ಹೊರ ಬರಲಿದೆ.