Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುದ್ದುಲಕ್ಷ್ಮಿಗೆ ಸಿಕ್ತು ಮೊದಲ ಗೆಲುವು
ಸೌಂದರ್ಯಕ್ಕೆ ಬೆಲೆ ಕೊಡುವ ಕಿರುತೆರೆ ಪಾತ್ರಗಳಿಗಿಂತ ಭಿನ್ನವಾಗಿ ನಿಲ್ಲುವ ಪಾತ್ರ ಸ್ಟಾರ್ ಸುವರ್ಣ ವಾಹಿನಿಯ ಮುದ್ದುಲಕ್ಷ್ಮಿ. ಕಪ್ಪಾಗಿದ್ದಾಳೆ ಎನ್ನುವ ಕಾರಣಕ್ಕಾಗಿ ಸಮಾಜದಿಂದ, ಮನೆಯವರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗುವ ಮುದ್ದುಲಕ್ಷ್ಮಿಗೆ ಈಗ ಮೊದಲ ಗೆಲುವಾಗಿದೆ.
ಮುದ್ದುಲಕ್ಷ್ಮಿ ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕ, ಅತ್ತೆ ಸೌಂದರ್ಯ ವರ್ತನೆಯಲ್ಲಿ ಬದಲಾವಣೆಗಳಾಗಿದೆ. ಇಷ್ಟು ದಿನ ಲಕ್ಷ್ಮಿಯನ್ನು ಹೆಸರಿಟ್ಟು ಕರೆಯದ ಸೌಂದರ್ಯ ಈಗ ಸೊಸೆಯನ್ನು ಕೈ ಹಿಡಿದು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಷ್ಟು ಬದಲಾಗಿದ್ದಾರೆ.
ಕಿರುತೆರೆಗೆ ಕಾಲಿಟ್ಟಿರುವ ಕಪ್ಪು ಸುಂದರಿ 'ಮುದ್ದುಲಕ್ಷ್ಮಿ' ಯಾರು ಗೊತ್ತಾ?
ಎಲ್ಲರೆದರು ಎಲ್ಲ ವಿಷಯಕ್ಕೂ ಲಕ್ಷ್ಮಿಯನ್ನು ಅಲ್ಲಗಳೆಯುತ್ತಿದ್ದ ಸೌಂದರ್ಯ ಈಗ ಲಕ್ಷ್ಮಿಯ ಸಮರ್ಥನೆಗೆ ನಿಲ್ಲುವಷ್ಟು ಪಾತ್ರದಲ್ಲಿ ಬದಲಾವಣೆಯಾಗಿದೆ. ಅತ್ತೆಯ ಮನಸ್ಸು ಗೆದ್ದಿರುವ ಮುದ್ದುಲಕ್ಷ್ಮಿಗೆ ಮನೆಯವರ ಪ್ರೀತಿ ಸಂಪಾದಿಸುವ ಹಾದಿಯಲ್ಲಿ ಇದು ಮೊದಲ ಗೆಲುವು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಮುದ್ದುಲಕ್ಷ್ಮಿ'
ಅಂದ್ಹಾಗೆ, 'ಮುದ್ದುಲಕ್ಷ್ಮಿ', ತಳಿರು ಪ್ರೊಡಕ್ಷನ್ಸ್ನ ಮೊದಲ ಕಾಣಿಕೆ. ಈ ಮುಂಚೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಪ್ರಖ್ಯಾತರಾದ ಹರೀಶ್ ಬಾಬು ಇದರ ನಿರ್ಮಾಪಕರು. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನೀಡಿದ ಧರಣಿ ಜಿ ರಮೇಶ್ ನಿರ್ದೇಶಕರಾಗಿದ್ದು, ಸಿ. ನಾಗರಾಜ್ ಅವರು ಛಾಯಾಗ್ರಹಕರಾಗಿ, ಅನಿ ಸಂಕಲನಕಾರರಾಗಿದ್ದಾರೆ. "ಮುಸ್ಸಂಜೆ ಮಾತು", "ಕೃಷ್ಣನ್ ಲವ್ ಸ್ಟೋರಿ", "ಕೃಷ್ಣ-ಲೀಲಾ" ಸಿನೆಮಾಗಳ ಬ್ಲಾಕ್ ಬಸ್ಟರ್ ಹಾಡುಗಳನ್ನು ನೀಡಿದ ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದರೆ.