Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಾ ಗುರು ಹಂಸಲೇಖ ಬಳಿ ಕೆಲಸ ಮಾಡಿದ್ದರು ಎ ಆರ್ ರೆಹಮಾನ್
ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಂಗೀತ ನಿರ್ದೇಶಕ. ಸಾವಿರಾರು ಸೂಪರ್ ಹಿಟ್ ಹಾಡುಗಳು, ನೂರಾರೂ ದೊಡ್ಡ ದೊಡ್ಡ ಪ್ರಶಸ್ತಿ ಎಲ್ಲವನ್ನು ಅವರು ಪಡೆದಿದ್ದಾರೆ. ವಿಶೇಷ ಅಂದರೆ, ರೆಹಮಾನ್ ನಾದಬ್ರಹ್ಮ ಹಂಸಲೇಖ ಅವರ ಜೊತೆಗೆ ಕೆಲ ಕಾಲ ಕೆಲಸ ಮಾಡಿದ್ದರಂತೆ.
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಂಸಲೇಖ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಒಂದು ಸಂದರ್ಭದಲ್ಲಿ ಮಾತನಾಡುವ ವೇಳೆ ಹಂಸಲೇಖ ರೆಹಮಾನ್ ಬಗ್ಗೆ ಯಾರಿಗೂ ತಿಳಿಯದ ವಿಷಯವನ್ನು ಹೇಳಿಕೊಂಡಿದ್ದಾರೆ.
'ಬ್ರೇಕಿಂಗ್ ನ್ಯೂಸ್' ವಿರುದ್ಧ ಹಂಸಲೇಖ ಬೇಸರ: 'ವಾಹಿನಿ ಅಂದರೆ ಮೋಹಿನಿ' ಎಂದ ಮನೋಹರ್!
''6-8 ತಾಳಕ್ಕೆ ತಮಿಳು ನಾಡಿನ ನಟರು ಕೊಡುವ ಬಾಡಿ ಗ್ರೇಸ್ ಬೇರೆ ಯಾರು ಕೊಡಲು ಆಗುವುದಿಲ್ಲ ಎಂಬ ದೊಡ್ಡ ಮಾತು ಇದೆ. ರೆಹಮಾನ್ ಇಪ್ಪತೈದು ವರ್ಷಗಳ ಹಿಂದೆ ನನ್ನ ಆರ್ಕೆಸ್ಟ್ರಾದಲ್ಲಿ ಕೆಲವು ಕಾಲ ನೂಡಿಸಿದ್ದ. ಆತ ತುಂಬ ಚುರುಕಾಗಿ ನುಡಿಸುತ್ತಿದ್ದನ್ನು ನೋಡಿ ನಾನು ಅವನ ಜೊತೆಗೆ ಮಾತನಾಡುತ್ತಿದೆ. ಒಮ್ಮೆ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ..' ಹಾಡನ್ನು ಡಿಫರೆಂಟ್ ಆಗಿ ಪ್ರೊಗ್ರಾಮ್ ಮಾಡಿದ್ದ. ಆಗ ನಾನು ನಿನಗೆ ಇಷ್ಟೊಂದು ಟ್ಯಾಲೆಂಟ್ ಇದೆ. ನೀನು ಮ್ಯೂಸಿಕ್ ಡೈರೆಕ್ಟರ್ ಆದ್ರೆ ಏನ್ ಮಾಡ್ತಿಯಾ ? ಅಂತ ಕೇಳಿದೆ. ಆಗ ಅವನು ಸರ್ ನಾನು 6-8 ತಾಳದಲ್ಲಿ ಮಾತ್ರ ಸಾಂಗ್ ಮಾಡಲ್ಲ ಅಂದಿದ್ದ. ಇದುವರೆಗೆ ರೆಹಮಾನ್ 6-8 ತಾಳದಲ್ಲಿ ಹಾಡು ಮಾಡಿಲ್ಲ.'' ಎಂದು ಹಳೆಯ ನೆನಪನ್ನು ಹಂಸಲೇಖ ಹಂಚಿಕೊಂಡರು.
''ರೆಹಮಾನ್ ಚಿಕ್ಕ ವಯಸ್ಸಿನಲ್ಲಿಯೇ ಗುರಿ ಇಟ್ಟುಕೊಂಡಿದ್ದ ಮ್ಯೂಸಿಕ್ ಡೈರೆಕ್ಟರ್.'' ಎಂದು ಹೇಳಿದ ಹಂಸಲೇಖ ರೆಹಮಾನ್ ಪ್ರತಿಭೆಯನ್ನು ಹೊಗಳಿದರು.