Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ನಿರೂಪಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ ನಾಗಾರ್ಜುನ?
ನಟ ನಾಗಾರ್ಜುನ ಬಿಗ್ಬಾಸ್ 4 ತೆಲುಗು ರಿಯಾಲಿಟಿ ಶೋ ನ ನಿರೂಪಣೆ ಮಾಡುತ್ತಿದ್ದಾರೆ. ಅವರ ನಿರೂಪಣಾ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ ತೆಲುಗು ಪ್ರೇಕ್ಷಕರು.
ಆದರೆ ಬಿಗ್ಬಾಸ್ ಶೋ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ನಾಗಾರ್ಜುನ ಶೋ ಆಯೋಜಕರ ಮೇಲೆ ಸಿಟ್ಟಾಗಿದ್ದಾರೆ. ಅವರ ಸಿಟ್ಟಿಗೆ ಸಕಾರಣವೇ ಇದೆ.
ತೆಲುಗು ಬಿಗ್ಬಾಸ್-4 ಆರಂಭ: ಇಲ್ಲಿದೆ ಸ್ಪರ್ಧಿಗಳ ವಿವರ
ತೆಲುಗು ಬಿಗ್ಬಾಸ್ ಶೋ ಆರಂಭದ ಕೆಲವು ವಾರಗಳಲ್ಲಿ ಒಳ್ಳೆಯ ಟಿಆರ್ಪಿ ಗಳಿಸಿತ್ತು. ಆದರೆ ಶೋ ಮುಂದುವರೆದಂತೆ ಟಿಆರ್ಪಿಯಲ್ಲಿ ಕುಸಿತವಾಗುತ್ತಿದೆ, ಇದು ನಾಗಾರ್ಜುನ ಗೆ ಅಸಮಾಧಾನ ಉಂಟುಮಾಡಿದೆ.
ಯಾವ ದಿನ ಯಾವ ಸ್ಪರ್ಧಿ ಎಲಿಮಿನೇಶನ್ ಆಗುತ್ತಿದ್ದಾರೆ ಎಂಬ ಮಾಹಿತಿ ಬಿಗ್ಬಾಸ್ ತಂತ್ರಜ್ಞರ ತಂಡದಿಂದ ಸೋರಿಕೆ ಆಗುತ್ತಿದೆ, ಎಲಿಮಿನೇಶನ್ ರೌಂಡ್ನ ಎಲಿಸೋಡ್ ಪ್ರಸಾರವಾಗುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ, ನ್ಯೂಸ್ ವೆಬ್ಸೈಟ್ಗಳಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ಹಾಗಾಗಿ ಪ್ರೇಕ್ಷಕರಿಗೆ ಕುತೂಹಲ ಇಲ್ಲದಾಗುತ್ತಿದೆ, ಟಿಆರ್ಪಿ ಕುಸಿತಕ್ಕೆ ಇದೇ ಕಾರಣ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ನಾಗಾರ್ಜುನ ಬಿಗ್ಬಾಸ್ ಆಯೋಜಕರ ಮೇಲೆ ಅಸಮಾಧಾನಗೊಂಡಿರುವುದು.
ನಾಗಾರ್ಜುನ ತಮ್ಮ 'ವೈಲ್ಡ್ ಡಾಗ್' ಸಿನಿಮಾದ ಚಿತ್ರೀಕರಣಕ್ಕೆಂದು ಬಿಗ್ಬಾಸ್ ಶೋ ನಿಂದ ಬಿಡುವು ಸಹ ಪಡೆದಿದ್ದರು. ಆಗ ನಾಗಾರ್ಜುನ ಸೊಸೆ, ನಟಿ ಸಮಂತಾ ಶೋ ಅನ್ನು ನಡೆಸಿಕೊಟ್ಟಿದ್ದರು. ಎರಡು ಎಪಿಸೋಡ್ಗಳನ್ನು ಸಮಂತಾ ನಡೆಸಿಕೊಟ್ಟಿದ್ದರು, ನಂತರ ನಾಗಾರ್ಜುನ ಶೋ ನಿರೂಪಣೆ ಮುಂದುವರೆಸಿದರು.
Recommended Video
ಸೆಪ್ಟೆಂಬರ್ 6 ರಂದು ಆರಂಭಗೊಂಡ ತೆಲುಗು ಬಿಗ್ಬಾಸ್ 4 ರಿಯಾಲಿಟಿ ಶೋ ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಅಭಿಷೇಕ್ ಗೆಲ್ಲುವ ಹಾಟ್ ಫೇವರೇಟ್ ಆಗಿದ್ದಾರೆ.