Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿವೇದಿತಾ ಗೌಡ ವಿರುದ್ಧ ನೆಟ್ಟಿಗರು ಗರಂ: ಕಾಮಿಡಿ ಶೋಗೆ ಛೀಮಾರಿ
Recommended Video
ಬಿಗ್ ಬಾಸ್ ಶೋ ಮುಗಿಸಿ ಸ್ವಲ್ಪ ಸೈಲೆಂಟ್ ಆಗಿದ್ದ ನಿವೇದಿತಾ ಗೌಡ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೆ ಕನ್ನಡದ ಕೋಟ್ಯಧಿಪತಿಯಲ್ಲೂ ಭಾಗಿಯಾಗಿದ್ದ ನಿವೇದಿತಾ ಗೌಡ ಈಗ ಕಲರ್ಸ್ ಕನ್ನಡದ ಕಾರ್ಯಕ್ರಮವೊಂದರಲ್ಲಿ ಫುಲ್ ಟೈಂ ತೀರ್ಪುಗಾರ್ತಿಯಾಗಿದ್ದಾರೆ.
ನಿವೇದಿತಾ ಗೌಡ ಅವರು ತೀರ್ಪುಗಾರ್ತಿ ಆಗಿರುವುದಕ್ಕೆ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಕಾಮಿಡಿ ಕಾರ್ಯಕ್ರಮಕ್ಕೆ ನಿವೇದಿತಾ ಅವರನ್ನ ಆಯ್ಕೆ ಮಾಡಿರುವುದಕ್ಕೆ ವಾಹಿನಿ ಮತ್ತು ಆ ಶೋ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಟ್ಯಧಿಪತಿಯಲ್ಲಿ ನಿವೇದಿತಾ ಗೌಡ ಕಮಾಲ್: ಎಷ್ಟು ಹಣ ಗೆದ್ದರು?
ಅಷ್ಟಕ್ಕೂ, ಆ ಕಾರ್ಯಕ್ರಮ ಯಾವುದು? ನಿವೇದಿತಾ ಬಿಟ್ಟರೇ ಬೇರೆ ಯಾರು ಆ ಶೋನಲ್ಲಿ ಇದ್ದಾರೆ? ನೆಟ್ಟಿಗರ ಅಭಿಪ್ರಾಯವೇನು? ಮುಂದೆ ಓದಿ....
ಕಾಮಿಡಿ ಕಂಪನಿಯಲ್ಲಿ ನಿವೇದಿತಾ ಜಡ್ಜ್
ಅಕುಲ್ ಬಾಲಾಜಿ ನಿರೂಪಣೆ ಮಾಡ್ತಿರುವ ಕಾಮಿಡಿ ಕಂಪನಿ ಎಂಬ ಹೊಸ ಕಾಮಿಡಿ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಶೋ ಮೂಡಿಬರ್ತಿದ್ದು, ನಟ ಕಾರ್ತಿಕ್ ಜಯರಾಂ (ಜೆಕೆ) ಮತ್ತು ನಟಿ ಕೃಷಿ ತಾಪಂಡ ತೀರ್ಪುಗಾರರಾಗಿದ್ದಾರೆ. ಇವರಿಬ್ಬರಿಗಿಂತ ಮುಖ್ಯವಾಗಿ ನಿವೇದಿತಾ ಗೌಡ ಮುಖ್ಯ ತೀರ್ಪುಗಾರ್ತಿಯಾಗಿ ಕೂರಿಸಿದ್ದಾರೆ.
ನಿವೇದಿತಾ ಸಾಧನೆ ಏನು?
''ನಿವೇದಿತಾ ಗೌಡ ಏನ್ ಸಾಧನೆ ಮಾಡಿದ್ದಾಳೆ ಅಂತಾ ನೀವ್ ಪ್ರೋಗ್ರಾಮ್ ಅವ್ರು ಅವಳನ್ನ ಜಡ್ಜ್ ಮಾಡಿದ್ದೀರಾ ಬೇರೆ ಯಾರು ಕಣ್ಣಿಗೆ ಕಾಣಿಸ್ಲಿಲ್ವ ಅಥವಾ ಸಿಗ್ಲೇ ಇಲ್ವಾ'' ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಹಿರಿಯರು ಕಾಣಿಸಿಲ್ವಾ?
''ಕನ್ನಡದಲ್ಲಿ ಹಾಸ್ಯ ಕಲಾವಿದರು ಏನು ಕಮ್ಮಿ ಇಲ್ಲ. ಟೆನ್ನಿಸ್ ಕೃಷ್ಣ, ಜನಾರ್ಧನ್, ಬುಲೆಟ್ ಪ್ರಕಾಶ್, ಉಮೇಶ್, ಬಿರಾದರ್, ರಂಗಾಯಣ ರಘು, ಚಿಕ್ಕಣ್ಣ, ಇನ್ನು ಬಹಳಷ್ಟು ಜನ ಇದ್ದಾರೆ ಅವರಿಗೆ ತಗೋರಿ. ಇಲ್ಲಾಂದ್ರೆ ಜನರು ಛಿ ಮರಿ ಹಾಕ್ತಾರೆ'' ಎಂದು ಜನ ಟೀಕಿಸುತ್ತಿದ್ದಾರೆ.
ಬರ್ತಿರೋ ಆಫರ್ ಗಳನ್ನೆಲ್ಲ ನಿವೇದಿತಾ ಯಾಕೆ ರಿಜೆಕ್ಟ್ ಮಾಡ್ತಿದ್ದಾರೆ ಗೊತ್ತಾ.?
ನಿಜವಾದ ಕಲಾವಿದರಿಗೆ ಪ್ರೋತ್ಸಾಹಿಸಿ
''ರಂಗಭೂಮಿಯಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಅನೇಕ ಹಿರಿಯ ರಂಗಭೂಮಿ ಕನ್ನಡ ಕಲಾವಿದರಿದ್ದಾರೆ. ದಯವಿಟ್ಟು ಅಂಥವರನ್ನು ಆಯ್ಕೆ ಮಾಡಿ ಆ ಸೀಟಲ್ಲಿ ಕೂರಸಿ. ಅವರಿಂದ ಅಲ್ಲಿನ ಕಂಟೆಂಸ್ಟೆಂಟ್ ಗಳು ಕಲಿಯಲು ಒಳ್ಳೆಯ ಅವಕಾಶ ಸಿಗುತ್ತೆ ಹಾಗೂ ನಿಮ್ ಚಾನೆಲಗೂ ಒಂದೊಳ್ಳೆ ಹೆಸರು ಬರುತ್ತೆ ....'' ಎಂದು ಸಂದೇಶ ರವಾನಿಸಿದ್ದಾರೆ.
ಕನ್ನಡದ ಮಾನ ಉಳಿಸಿ
''ಥೂ ನಿಮ್ ಜನ್ಮಕ್ಕೆ ಜಡ್ಜ ಮಾಡೋಕೆ ಒಂದು ಮಾನದಂಡ ಬ್ಯಾಡವಾ ಆ ವಮ್ಮಂಗೆ ಸರಿಯಾಗಿ ಕನ್ನಡನೇ ಮಾತಾಡಕ್ಕಾಗಲ್ಲ ......ಚಿತ್ರರಂಗದಲ್ಲಿ ಎಷ್ಟೋ ಜನ ಹಿರಿಯ ನಟರಿದ್ದು ಅವ್ರನ್ನ ಕರೆದು ಸ್ಥಾನಕೋಡಿ ಅದೇಲ್ಲ ಬಿಟ್ಟು ಟಿಆರ್ಪಿಗಾಗಿ ಡಬ್ಬ ಪ್ರೋಗ್ರಾಮ ಮಾಡೋದ್ ನಿಲ್ಲಿಸಿ ಕನ್ನಡದ ಮಾನ ಉಳಿಸಿ'' ಎಂದು ಛೀಮಾರಿ ಹಾಕುತ್ತಿದ್ದಾರೆ.
ಡ್ಯಾನ್ಸ್ ಶೋನಲ್ಲಿ ವಿನೋದ್ ರಾಜ್ ಇಲ್ಲ
ಕಾಮಿಡಿ ಶೋಗಳ ಕಥೆ ಇದಾದರೇ, ಮತ್ತೊಂದೆಡೆ ಡ್ಯಾನ್ಸ್ ಶೋಗಳ ಕಥೆಯೂ ಅದೇ ಆಗಿದೆ. ಡ್ಯಾನ್ಸ್ ಬಗ್ಗೆ ಏನೂ ಗೊತ್ತಿಲ್ಲದವರನ್ನ ಕರೆದುಕೊಂಡು ಜಡ್ಜ್ ಮಾಡಿರ್ತಾರೆ. ಹಾಗ್ನೋಡಿದ್ರೆ, ಡ್ಯಾನ್ಸ್ ಶೋಗಳಿಗೆ ವಿನೋದ್ ರಾಜ್ ಅವರನ್ನ ಪರಿಗಣಿಸಬೇಕು. ಆದರೆ, ಯಾರೊಬ್ಬರು ವಿನೋದ್ ರಾಜ್ ಅವರನ್ನ ಕರೆಸುವ ಆಸಕ್ತಿ ತೋರಿಸಿಲ್ಲ. ಇದು ಕೂಡ ಟಿವಿ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.