Don't Miss!
- News Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಕನ್ನಡ ಮನೋರಂಜನಾ ವಾಹಿನಿ ಸುವರ್ಣ ಪ್ಲಸ್
ಕನ್ನಡ ಕಿರುತೆರೆಯಲ್ಲಿ ಸುವರ್ಣವಾಹಿನಿಯ ಮೂಲಕ ಪ್ರಾಧಾನ್ಯತೆಯನ್ನು ಮೆರೆದ ಸ್ಟಾರ್ ನೆಟ್ ವರ್ಕ್ ಅವರ ಮತ್ತೊಂದು ಹೊಸ ಕನ್ನಡ ಮನೋರಂಜನಾ ವಾಹಿನಿ "ಸುವರ್ಣ ಪ್ಲಸ್" ಆರಂಭಿಸುವುದನ್ನು ಘೋಷಿಸಿದೆ. "ಸುವರ್ಣ ಪ್ಲಸ್" ಇದೇ ಭಾನುವಾರ ಜುಲೈ 14 ರಂದು ಆರಂಭವಾಗಲಿದೆ.
"ಸುವರ್ಣ ಪ್ಲಸ್" ಈ ವಿನೂತನ ಕನ್ನಡ ಮನರಂಜನಾ ವಾಹಿನಿಯು ಕಾಮಿಡಿ, ನಾನ್ ಫಿಕ್ಷನ್, ಚಲನಚಿತ್ರಗಳು ಮತ್ತು ಸಂಗೀತ ಮೊದಲಾದ ರೀತಿಯ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಕುಟುಂಬ ಸಮೇತರಾಗಿ ಕುಳಿತು ವಾಹಿನಿಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
"ಸುವರ್ಣ ಪ್ಲಸ್" ಈ ವಿನೂತನ ವಾಹಿನಿಯ ಕಾರ್ಯಕ್ರಮಗಳು ಇಂದಿನ ಹರಿಬರಿ ಜೀವನದ ಒತ್ತಡಗಳನ್ನು ನೀಗಿಸಿ ಒಂದಷ್ಟು ನಕ್ಕುನಗಿಸುವ ಸ್ಟ್ರೆಸ್ಬಸ್ಟರ್ಗಳಾಗಿರಬೇಕು ಎನ್ನುವ ಕಲ್ಪನೆಯನ್ನಾಧರಿಸಿರುತ್ತವೆ. ಇಲ್ಲಿ ಸಿನೆಮಾಗಳು, ರಿಯಾಲಿಟಿ ಶೋ, ನಗಿಸುವ ಕಾಮಿಡಿ ಶೋ, ಮಾತುಕತೆ, ಸಂಗೀತ, ಸಿನೆಮಾ ಆಧಾರಿತ ಕಾರ್ಯಕ್ರಮಗಳು ಹಾಗೂ ಯುವಕರಿಗಾಗಿ ಕ್ಯಾಂಪಸ್ಕನೆಕ್ಟ್ನಂತಹ ಕಾರ್ಯಕ್ರಮಗಳು ಕೂಡಾ ಮೂಡಿಬರಲಿವೆ.
"ಮಸ್ತಿ ಸ್ವಲ್ಪ ಜಾಸ್ತಿ" ಎಂಬ ಟ್ಯಾಗ್ ಲೈನ್ ಸುವರ್ಣ ಪ್ಲಸ್ ವಾಹಿನಿಯದು. ಮನೋರಂಜನಾ ವಿಷಯದಲ್ಲಿ ಮನುಷ್ಯನ ಸಹಜವಾದ ಇನ್ನೂ ಸ್ವಲ್ಪ, ಏನಾದರೂ ಹೆಚ್ಚಿಗೆ ಬೇಕು ಎಂಬ ಮನೋಭಾವನೆಗಳನ್ನು ಗ್ರಹಿಸಿ ಅದಕ್ಕೆ ತಕ್ಕ ಮತ್ತಷ್ಟು, ಮಗದಷ್ಟು ಮನೋರಂಜನೆಯನ್ನು ನೀಡುವಂತಹ ವಾಹಿನಿ ಇದಾಗಿದೆ.
ಸುವರ್ಣ ಮತ್ತು ಸುವರ್ಣ ಪ್ಲಸ್ ಎರಡು ವಾಹಿನಿಗಳು ಒಂದೇ ಮಾರ್ಕೆಟ್ ನಲ್ಲಿ ಚಾಲನೆಯಲ್ಲಿರುತ್ತವೆ. ಅಂದರೆ ಅದೇ ಮಾರ್ಕೆಟ್, ಅದೇ ವೀಕ್ಷಕರನ್ನು ಹೊಂದಿದ್ದು ಆದರೆ ಅವುಗಳ ಸ್ಥಾನಗಳು ಮಾತ್ರ ಭಿನ್ನವಾಗಿದ್ದು ವಿಭಿನ್ನವಾದ ರಂಜನೆಯನ್ನು ನೀಡಬಲ್ಲವು.
ಸುವರ್ಣ ವಾಹಿನಿಯಲ್ಲಿ ಧಾರಾವಾಹಿಗಳು ಪ್ರಧಾನವಾಗಿದ್ದು ವೀಕ್ಷಕರೊಂದಿಗೆ ಉತ್ತಮ ಒಡನಾಟ ಪಡೆದಿದೆ. ಸುವರ್ಣ ಪ್ಲಸ್ 'ಸ್ಟ್ರೇಸ್ಬಸ್ಟರ್' ಆಗಿ ಸಂಪೂರ್ಣ ಮನೋರಂಜನೆಯಿಂದ ತುಂಬಿರುತ್ತದೆ. ಏಷ್ಯಾನೆಟ್ ಕಮ್ಯುನಿಕೇಷನ್ಸ್ ಲಿ.ನ ಎಂ.ಡಿ. ಕೆ.ಮಾಧವನ್ ಅವರು ಹೇಳುವಂತೆ, "ಕರ್ನಾಟಕ ನಮಗೆ ಒಂದು ಪ್ರಮುಖವಾದ ಮಾರುಕಟ್ಟೆಯಾಗಿದೆ. ಕನ್ನಡ ಟೆಲಿವಿಷನ್ ಸ್ಪೇಸ್ ನಲ್ಲಿಯೇ ಸಾಕಷ್ಟು ಅಭಿವೃದ್ಧಿಯನ್ನು ಕಾಣುವ ಆಶಾವಾದಿಗಳಾಗಿದ್ದೇವೆ...
ಸುವರ್ಣವಾಹಿನಿಯು ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಕಾರ್ಯಕ್ರಮಗಳನ್ನು ಉಣಬಡಿಸುತ್ತಿದ್ದು ಪ್ರೈಮ್ ಟೈಮ್ ನಲ್ಲಿ ಲೀಡರ್ ಆಗಿದೆ. ಮನೋರಂಜನೆಗೆ ವಿಭಿನ್ನವಾದ ದೃಷ್ಟಿಕೋನವನ್ನು ಸೃಷ್ಟಿಸುವ ಈ ವಿನೂತನ ವಾಹಿನಿ ನಮ್ಮ "ಸುವರ್ಣ ಪ್ಲಸ್" ಆಗಿದೆ. ಈ ಎರಡು ವಾಹಿನಿಗಳು ಭಿನ್ನ ಭಿನ್ನವಾದ ಕಾರ್ಯಕ್ರಮಗಳನ್ನು ಉಣಬಡಿಸಲಿವೆ. ಸುವರ್ಣ ಪ್ಲಸ್ ಆರಂಭಿಸುವುದರ ಮೂಲಕ ಕನ್ನಡ ಜಿ.ಇ.ಸಿ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಹೆಚ್ಚಿಸಿಕೊಂಡು ಪ್ರಬುದ್ಧತೆಯನ್ನು ಸಾಧಿಸಲಿದ್ದೇವೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. (ಒನ್ಇಂಡಿಯಾ ಕನ್ನಡ)