Don't Miss!
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾತನಾಡಿದ ಖುಷಿ: 'ಅಗ್ನಿಸಾಕ್ಷಿ'ಯಲ್ಲಿ ಇಂದು ಏನಾಗುತ್ತೋ ಏನೋ.!
'ಅಗ್ನಿಸಾಕ್ಷಿ' ಧಾರಾವಾಹಿ ಸದ್ಯ ದಿನೇ ದಿನೇ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಅದರಲ್ಲೂ ಇಂದಿನ ಸಂಚಿಕೆ ವೀಕ್ಷಕರಲ್ಲಿ ದೊಡ್ಡ ನಿರೀಕ್ಷೆಯನ್ನು ಉಂಟು ಮಾಡಿದೆ.
'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!
ಅವಳಿ ಮಕ್ಕಳಾದ ಆಯುಷಿ ಮತ್ತು ಖುಷಿ ಬದಲಾದ ನಂತರ 'ಅಗ್ನಿಸಾಕ್ಷಿ' ಧಾರಾವಾಹಿಯ ದಿಕ್ಕು ಬದಲಾಗಿದೆ. ಸದ್ಯ ಸನ್ನಿಧಿ ಹತ್ತಿರ ಇರುವ ಖುಷಿ ಮಾತು ಬಾರದ ಆಯುಷಿಯಂತೆ ಅಭಿನಯಿಸುತ್ತಿದ್ದಾಳೆ. ಮನೆಗೆ ಬಂದು ಇಷ್ಟು ದಿನ ಆದರೂ ಯಾರಿಗೂ ತಿಳಿಯದ ರೀತಿ ಇದ್ದ ಖುಷಿ ಈಗ ಮಿಸ್ ಆಗಿ ಮಾತನಾಡಿದ್ದಾಳೆ.
ನಿನ್ನೆಯ ಸಂಚಿಕೆಯಲ್ಲಿ ಸಿದ್ಧಾರ್ಥ್ ಜೊತೆ ಇದ್ದ ಸಂದರ್ಭದಲ್ಲಿ ಬಾಯಿ ತಪ್ಪಿ ಖುಷಿ ಮಾತನಾಡಿದ್ದಾಳೆ. ತಮ್ಮ ತಂದೆಯ ಫೋಟೋವನ್ನು ನೋಡಿದ ಖುಷಿ ಆಶ್ಚರ್ಯವಾಗಿ ಅಪ್ಪ.. ಎಂದು ಕರೆದುಬಿಟ್ಟಳು. ಅಲ್ಲದೆ ಅದನ್ನು ಸಿದ್ಧಾರ್ಥ್ ಕೂಡ ಗಮನಿಸಿದರು.
ಚಂದ್ರಿಕಾಗೆ ಈ ಹುಡುಗಿ ಆಯುಷಿಯೋ... ಖುಷಿಯೋ.. ಎನ್ನುವ ಅನುಮಾನ ಇತ್ತು. ಆದರೆ ಆಕೆಯಿಂದ ಬಚಾವ್ ಆಗಿದ್ದ ಖುಷಿ ತಾನೇ ಸಿಕ್ಕಿಬಿದ್ದಿದ್ದಾಳೆ. ಈ ಕಾರಣದಿಂದ ಇಂದಿನ ಸಂಚಿಕೆ ಹೆಚ್ಚು ಕುತೂಹಲಕಾರಿ ಆಗಿದೆ.