Don't Miss!
- News ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಕೋಟಿ ಒಡೆಯ: ಒಟ್ಟು ಆಸ್ತಿ ಎಷ್ಟು ಗೊತ್ತಾ?
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಡೀ ದೇಶ ಕೇಳುತ್ತಿದೆ, ಬಿಟಿವಿ ನಿರೂಪಕ ಚಂದನ್ ಶರ್ಮಾ ಎಲ್ಲಿ?
ಕನ್ನಡ ಸುದ್ದಿ ವಾಹಿನಿಗಳನ್ನ ತಪ್ಪದೇ ನೋಡುವವರಿಗೆ ನಿರೂಪಕ ಚಂದನ್ ಶರ್ಮಾ ಪರಿಚಿತ. ಬಿಟಿವಿ ವಾಹಿನಿಯಲ್ಲಿ ನ್ಯೂಸ್ ಆಂಕರ್ ಆಗಿ ಗುರುತಿಸಿಕೊಂಡಿರುವ ಚಂದನ್ ಶರ್ಮಾ, ಕಳೆದ ಕೆಲ ದಿನಗಳಿಂದ ಟಿವಿ ಪರದೆ ಮೇಲೆ ಪತ್ತೆ ಆಗಿಲ್ಲ.
ಹೇಗಿದ್ರೂ 'ಬಿಗ್ ಬಾಸ್ ಕನ್ನಡ-4' ಶುರು ಆಗ್ತಿದ್ಯಲ್ಲಾ...ಕಳೆದ ವರ್ಷ ಟಿವಿ9 ವಾಹಿನಿಯಿಂದ ರೆಹಮಾನ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟ ಹಾಗೆ, ಈ ಬಾರಿ ಪ್ರಾಬಬ್ಲಿ, ಚಂದನ್ ಶರ್ಮಾ ದೊಡ್ಮನೆಗೆ ಎಂಟ್ರಿಕೊಡ್ಬಹುದು ಅಂತ ಕೆಲವರು ಊಹಿಸಿದ್ರೇನೋ...ಆದ್ರೆ ವಾಸ್ತವ ಅದಲ್ಲ.
ನಿರೂಪಕ ಚಂದನ್ ಶರ್ಮಾ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಭಿನ್ನ, ಗಟ್ಟಿ ಕಥೆಯುಳ್ಳ ಕನ್ನಡ ಚಿತ್ರದ ಮೂಲಕ 'ಹೀರೋ' ಆಗಲು ನಿರ್ಧರಿಸಿದ್ದಾರೆ. [ಸಿನಿಮಾ ವರದಿಗಾರರೇ 'ಸಿನಿಮಾ' ಹೀರೋಗಳಾಗವ್ರೆ.!]
ಈ ಕುರಿತು ಚಂದನ್ ಶರ್ಮಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರೂ, ಅವರು ಅಭಿನಯಿಸುತ್ತಿರುವ ಚಿತ್ರದ ಬಗ್ಗೆ 'ಗುಟ್ಟು' ಬಿಟ್ಟುಕೊಟ್ಟಿಲ್ಲ. [ವಿಶೇಷ ವರದಿ: ನ್ಯೂಸ್ ಚಾನೆಲ್ ವರದಿಗಾರರ ಗೋಳು ಕೇಳೋರು ಯಾರು.?]
ಒಂದ್ ಸಲಿ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ರೆ, ಹಳೇ ಕೆಲಸಕ್ಕೆ ಮರಳುವುದು ಡೌಟೇ. ಆದರೂ, 'ಪತ್ರಿಕೋದ್ಯಮ ನನ್ನ ಉಸಿರು. ಬಿಟಿವಿಯಿಂದ ಹೊರ ಹೋಗುವ ಪ್ರಶ್ನೆಯೇ ಇಲ್ಲ' ಎಂಬುದನ್ನೂ ಚಂದನ್ ಶರ್ಮಾ ಕ್ಲಿಯರ್ ಮಾಡಿದ್ದಾರೆ.