ನಿಕಿತಾ ಬಾಯಲ್ಲಿ ಕನ್ನಡ ಪದಗಳ ಹಾಫ್ ಮರ್ಡರ್
ಒಂದು ಸಲ ಎಂದು ಹೇಳಲು ಹೋಗಿ ಒಕ್ಕ ಸಾರಿ ಎಂದು ಹೇಳಿ ನಗೆಪಾಟಲಿಗೆ ಗುರಿಯಾದರು. ಅವರ ತೆಲುಗನ್ನಡ ಪದಗಳನ್ನು ಕೇಳುತ್ತಿರುವ ಮನೆಯ ಸದಸ್ಯರ ಕಿವಿಗಳೇ ಧನ್ಯ. ಈ ಬಗ್ಗೆ ಮೊದಲು ಮೌನ ಮುರಿದಿದ್ದೇ ಅರುಣ್ ಸಾಗರ್.
ನಿಕಿತಾಗೆ ಮನೆಗೆ ಬಂದು 70 ದಿನ ಆಗುತ್ತಿದೆ. ಆದರೆ ಅವರು ಇನ್ನೂ ಸರಿಯಾಗಿ ಕನ್ನಡ ಕಲಿತಿಲ್ಲ. ನೀರಿನಲ್ಲಿ, ಹಿಟ್ಟಿನಲ್ಲಿ ಕನ್ನಡ ಕಲಿಯಲು ಸಹಕರಿಸಿದೆ. ಆದರೂ ನಿಕಿತಾಗೆ ಇನ್ನೂ ಸರಿಯಾಗಿ ಕನ್ನಡ ಬರುತ್ತಿಲ್ಲ ಎಂದು ನರೇಂದ್ರ ಬಾಬು ಶರ್ಮಾ ಬಳಿ ಚರ್ಚಿಸಿದರು.
ಕಡೆಗೆ ಇದೇ ವಿಚಾರವನ್ನು ಸ್ವತಃ ನಿಕಿತಾ ಬಳಿಯೂ ಚರ್ಚಿಸಿದರು. ಇಷ್ಟು ದಿನ ಆಯ್ತು ಬಂದು ಇನ್ನೂ ಕನ್ನಡ ಕಲಿಯಲಿಲ್ಲ. ಕನ್ನಡಿಗರಿಗೇ ಅವಮಾನ ಎಂದ ಅರುಣ್ ನೇರವಾಗಿ ಪ್ರಶ್ನಿಸಿದ. ಇದಕ್ಕೆ ಹಾವು ತುಳಿದಂತಾದ ನಿಕಿತಾ ಸಿಕ್ಕಾಪಟ್ಟೆ ರಾಂಗ್ ಆದರು.

ಅರೆಬರೆ ಕನ್ನಡದಲ್ಲಿ ಅರುಣ್ ಅವರಿಗೆ ಮೇಲೆ ಎಗರಿ ಬಿದ್ದರು. ನಿನ್ನ ಕನ್ನಡ ನನಗೇನು ಅರ್ಥವಾಗುತ್ತಿಲ್ಲ ತಾಯಿ ಎಂದು ಅರುಣ್ ಕೈಮುಗಿದರು. ನಮ್ಮ ದಯೆಯಿಂದ ತಾವು ಇಷ್ಟು ದಿನ ಮನೆಯಲ್ಲಿ ಉಳಿದಿದ್ದೀರಿ ಎಂದು ಅರುಣ್ ಹೇಳಿದ್ದಕ್ಕೆ, ನಿಮ್ಮಿಂದ ನಾನು ಮನೆಯಲ್ಲಿ ಉಳಿದಿಲ್ಲ. ನನ್ನನ್ನು ಉಳಿಸಿದವರು ವೀಕ್ಷಕರು ಎಂದು ನಿಕಿತಾ ಉತ್ತರ ಕೊಟ್ಟರು.
ನಾವೆಲ್ಲಾ ಇಷ್ಟು ದಿನ ರೆಸ್ಪೆಕ್ಟ್ ಕೊಟ್ಟಿದ್ದಕ್ಕೆ ಇಷ್ಟು ದಿನ ಉಳಿದಿದ್ದೀಯ. ಮೊದಲು ರೆಸ್ಪೆಕ್ಟ್ ಕೊಟ್ಟು ಮಾತನಾಡಿ ಎಂದರು ಅರುಣ್. ಇದಕ್ಕೆ ಇನ್ನಷ್ಟು ಕೆಂಡಾಮಂಡಲವಾದ ನಿಕಿತಾ, ಈ ಮನೆಯಿಂದ ಹೊರಹೋಗಬೇಕೋ ಬೇಡವೋ ಎಂದು ಡಿಸೈಡ್ ಮಾಡುವವರು ಬಿಗ್ ಬಾಸ್. ನೀವ್ಯಾರು ಎಂದು ಇಂಗ್ಲಿಷ್ ನಲ್ಲಿ ಹೇಳೀದರು.


Click it and Unblock the Notifications











