Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರಂಜನ್ ದೇಶಪಾಂಡೆ ಪ್ರಕಾರ ನಟ ನೀನಾಸಂ ಸತೀಶ್ 'ಸ್ವಾರ್ಥಿ'ಯಂತೆ.!
'ಲೂಸಿಯಾ', 'ಲವ್ ಇನ್ ಮಂಡ್ಯ', 'ರಾಕೆಟ್', 'ಬ್ಯೂಟಿಫುಲ್ ಮನಸ್ಸುಗಳು' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ನೀನಾಸಂ ಸತೀಶ್ 'ಸ್ವಾರ್ಥಿ'ಯಂತೆ.!
ಹಾಗಂತ ಹೇಳಿರುವುದು 'ಬಿಗ್ ಬಾಸ್' ಮನೆಗೆ ಹೋಗಿ ಬಂದಿದ್ದ ನಟ, ಆರ್.ಜೆ ಹಾಗೂ ನಿರೂಪಕ ಆಗಿರುವ ನಿರಂಜನ್ ದೇಶಪಾಂಡೆ.
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್, ಶಾಲಿನಿ ಜೊತೆ ಅತಿಥಿಯಾಗಿ ಭಾಗವಹಿಸಿದ ನಿರಂಜನ್ ದೇಶಪಾಂಡೆ, ನೀನಾಸಂ ಸತೀಶ್ ರವರನ್ನ 'ಸ್ವಾರ್ಥಿ' ಅಂತ ಕರೆದರು.
'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'ದಿಢೀರ್ ಬೆಂಕಿ' ಸುತ್ತಿನಲ್ಲಿ, ''ಈ ಮಾತುಗಳನ್ನು ಕೇಳಿದಾಗ ನಿಮಗೆ ಯಾರು ನೆನಪಾಗುತ್ತಾರೆ'' ಎನ್ನುತ್ತಾ 'ಸ್ವಾರ್ಥಿ' ಎಂಬ ಪದವನ್ನ ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂದಿಟ್ಟರು.
ಆಗ ಹಿಂದು-ಮುಂದು ಯೋಚನೆ ಮಾಡದೆ 'ನೀನಾಸಂ ಸತೀಶ್' ಎಂದುಬಿಟ್ಟರು ನಿರಂಜನ್ ದೇಶಪಾಂಡೆ. ಅದು 'ದಿಢೀರ್ ಬೆಂಕಿ' ಸುತ್ತು ಆಗಿದ್ರಿಂದ, 'ಸ್ವಾರ್ಥಿ' ಎಂದು ಹೇಳಿದ್ಯಾಕೆ ಎಂಬುದಕ್ಕೆ ನಿರಂಜನ್ ವಿವರಣೆ ಕೊಡಲಿಲ್ಲ. ನಿರೂಪಕ ಅಕುಲ್ ಕೂಡ ವಿವರಣೆ ಕೇಳಲಿಲ್ಲ.