twitter
    For Quick Alerts
    ALLOW NOTIFICATIONS  
    For Daily Alerts

    ನಿರಂಜನ್ ದೇಶಪಾಂಡೆ ಪ್ರಕಾರ ನಟ ನೀನಾಸಂ ಸತೀಶ್ 'ಸ್ವಾರ್ಥಿ'ಯಂತೆ.!

    By Harshitha
    |

    'ಲೂಸಿಯಾ', 'ಲವ್ ಇನ್ ಮಂಡ್ಯ', 'ರಾಕೆಟ್', 'ಬ್ಯೂಟಿಫುಲ್ ಮನಸ್ಸುಗಳು' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ನೀನಾಸಂ ಸತೀಶ್ 'ಸ್ವಾರ್ಥಿ'ಯಂತೆ.!

    ಹಾಗಂತ ಹೇಳಿರುವುದು 'ಬಿಗ್ ಬಾಸ್' ಮನೆಗೆ ಹೋಗಿ ಬಂದಿದ್ದ ನಟ, ಆರ್.ಜೆ ಹಾಗೂ ನಿರೂಪಕ ಆಗಿರುವ ನಿರಂಜನ್ ದೇಶಪಾಂಡೆ.

    Niranjan Deshpande calls Ninasam Sathish 'Selfish'

    ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್, ಶಾಲಿನಿ ಜೊತೆ ಅತಿಥಿಯಾಗಿ ಭಾಗವಹಿಸಿದ ನಿರಂಜನ್ ದೇಶಪಾಂಡೆ, ನೀನಾಸಂ ಸತೀಶ್ ರವರನ್ನ 'ಸ್ವಾರ್ಥಿ' ಅಂತ ಕರೆದರು.

    'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'ದಿಢೀರ್ ಬೆಂಕಿ' ಸುತ್ತಿನಲ್ಲಿ, ''ಈ ಮಾತುಗಳನ್ನು ಕೇಳಿದಾಗ ನಿಮಗೆ ಯಾರು ನೆನಪಾಗುತ್ತಾರೆ'' ಎನ್ನುತ್ತಾ 'ಸ್ವಾರ್ಥಿ' ಎಂಬ ಪದವನ್ನ ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂದಿಟ್ಟರು.

    ಆಗ ಹಿಂದು-ಮುಂದು ಯೋಚನೆ ಮಾಡದೆ 'ನೀನಾಸಂ ಸತೀಶ್' ಎಂದುಬಿಟ್ಟರು ನಿರಂಜನ್ ದೇಶಪಾಂಡೆ. ಅದು 'ದಿಢೀರ್ ಬೆಂಕಿ' ಸುತ್ತು ಆಗಿದ್ರಿಂದ, 'ಸ್ವಾರ್ಥಿ' ಎಂದು ಹೇಳಿದ್ಯಾಕೆ ಎಂಬುದಕ್ಕೆ ನಿರಂಜನ್ ವಿವರಣೆ ಕೊಡಲಿಲ್ಲ. ನಿರೂಪಕ ಅಕುಲ್ ಕೂಡ ವಿವರಣೆ ಕೇಳಲಿಲ್ಲ.

    English summary
    Niranjan Deshpande calls Ninasam Sathish 'Selfish'
    Sunday, October 15, 2017, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X