Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದೇಶದಲ್ಲಿ ಕುಣಿಯಲು ನಿತ್ಯಾನಂದನಿಗೆ ಕೋರ್ಟ್ ವೀಸಾ
ರಾಸಲೀಲೆ ಪ್ರಕರಣದಲ್ಲಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಗೆ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದು ಮಾಡಿ ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಕೆಎನ್ ಕೇಶವನಾರಾಯಣ ಮಾನ್ಯ ಮಾಡಿಲ್ಲ.
ಹೀಗೆ, ನಿತ್ಯಾನಂದ ಸ್ವಾಮಿಗಳು ಇನ್ನು ಮುಕ್ತ ಮುಕ್ತ ಮುಕ್ತ ಎಂದು ಕೋರ್ಟ್ ಮೂರು ಬಾರಿ ಆರ್ಡರ್ ಮಾಡಿದೆ. ಅತ್ತ, ಅಮ್ಮ ಜಯಲಲಿತಾ 'ನನ್ನ ಪರಮ ವೈರಿ ಸನ್ ಟಿವಿಯ ವಿರುದ್ಧ ಎಷ್ಟು ಕೇಸಾದರೂ ಜಡಿ ಅದನ್ನೆಲ್ಲ ನಾನು ನೋಡ್ಕೋತೀನಿ' ಎಂದು ಅಭಯ ನೀಡಿದ್ದಾರೆ. ಇದು ಕೋತಿಗೆ ಕಳ್ಳು ಕುಡಿಸಿದಂತಾಗಿ ಅವಯ್ಯ ನಿತ್ಯಾನಂದ ಇನ್ಯಾವ ಕುಂಡಿ ಕುಣಿತಕ್ಕೆ ಥಕದಮಿ ಎನ್ನುತ್ತಾನೋ ಆ ಈಶ್ವರನೇ ಬಲ್ಲ.
ಜತೆಗೆ, ನಿತ್ಯಾನಂದ ಸ್ವಾಮಿಗಳು ವಿದೇಶಕ್ಕೆ ಹೋಗಲು ತಮ್ಮದೇನೂ ಅಭ್ಯಂತರವಿಲ್ಲ ಎಂದೂ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಮಹಾಸ್ವಾಮಿಗಳು ಈ ಬಾರಿ ಕುಂಡಲಿನೀ ಕುಣಿತವನ್ನು ಯಾವುದಾದರೂ ವಿದೇಶದಲ್ಲಿ ಆಯೋಜಿಸುವ ಅಪಾಯಗಳು ಹೆಚ್ಚಾಗಿವೆ. ಇಷ್ಟಕ್ಕೂ, ನಿತ್ಯಾನಂದ ಸ್ವಾಮಿ ಈಶ್ವರನ ಆರಾಧಕನೋ ಅಥವಾ ಕೃಷ್ಣನ ಅಪರಾವತಾರವೋ ತಿಳಿಯದಾಗಿದೆ ಎಂದು ಬಿಡದಿ ಜನ ತಲೆ ಚಚ್ಚಿಕೊಳ್ಳುತ್ತಿದ್ದಾರೆ.