Don't Miss!
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದೇಶದಲ್ಲಿ ಕುಣಿಯಲು ನಿತ್ಯಾನಂದನಿಗೆ ಕೋರ್ಟ್ ವೀಸಾ
ರಾಸಲೀಲೆ ಪ್ರಕರಣದಲ್ಲಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಗೆ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದು ಮಾಡಿ ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಕೆಎನ್ ಕೇಶವನಾರಾಯಣ ಮಾನ್ಯ ಮಾಡಿಲ್ಲ.
ಹೀಗೆ, ನಿತ್ಯಾನಂದ ಸ್ವಾಮಿಗಳು ಇನ್ನು ಮುಕ್ತ ಮುಕ್ತ ಮುಕ್ತ ಎಂದು ಕೋರ್ಟ್ ಮೂರು ಬಾರಿ ಆರ್ಡರ್ ಮಾಡಿದೆ. ಅತ್ತ, ಅಮ್ಮ ಜಯಲಲಿತಾ 'ನನ್ನ ಪರಮ ವೈರಿ ಸನ್ ಟಿವಿಯ ವಿರುದ್ಧ ಎಷ್ಟು ಕೇಸಾದರೂ ಜಡಿ ಅದನ್ನೆಲ್ಲ ನಾನು ನೋಡ್ಕೋತೀನಿ' ಎಂದು ಅಭಯ ನೀಡಿದ್ದಾರೆ. ಇದು ಕೋತಿಗೆ ಕಳ್ಳು ಕುಡಿಸಿದಂತಾಗಿ ಅವಯ್ಯ ನಿತ್ಯಾನಂದ ಇನ್ಯಾವ ಕುಂಡಿ ಕುಣಿತಕ್ಕೆ ಥಕದಮಿ ಎನ್ನುತ್ತಾನೋ ಆ ಈಶ್ವರನೇ ಬಲ್ಲ.
ಜತೆಗೆ, ನಿತ್ಯಾನಂದ ಸ್ವಾಮಿಗಳು ವಿದೇಶಕ್ಕೆ ಹೋಗಲು ತಮ್ಮದೇನೂ ಅಭ್ಯಂತರವಿಲ್ಲ ಎಂದೂ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಮಹಾಸ್ವಾಮಿಗಳು ಈ ಬಾರಿ ಕುಂಡಲಿನೀ ಕುಣಿತವನ್ನು ಯಾವುದಾದರೂ ವಿದೇಶದಲ್ಲಿ ಆಯೋಜಿಸುವ ಅಪಾಯಗಳು ಹೆಚ್ಚಾಗಿವೆ. ಇಷ್ಟಕ್ಕೂ, ನಿತ್ಯಾನಂದ ಸ್ವಾಮಿ ಈಶ್ವರನ ಆರಾಧಕನೋ ಅಥವಾ ಕೃಷ್ಣನ ಅಪರಾವತಾರವೋ ತಿಳಿಯದಾಗಿದೆ ಎಂದು ಬಿಡದಿ ಜನ ತಲೆ ಚಚ್ಚಿಕೊಳ್ಳುತ್ತಿದ್ದಾರೆ.