Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೀದಿಗೆ ಬಿದ್ದ 'ಪಾಪ ಪಾಂಡು' ವಿಕ್ರಮ್ ಸೂರಿ ಸಂಸಾರ
ಇವರಿಬ್ಬರದು ಅನುರೂಪ ದಾಂಪತ್ಯ. ಕಳೆದ 28 ವರ್ಷಗಳಿಂದ ಸೂರಿ ತಮ್ಮ ಪೋಷಕರ ಜೊತೆ ಬಸವನಗುಡಿಯಲ್ಲಿ ವಾಸವಾಗಿದ್ದರು. ಇವರಿದ್ದ ಮನೆ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿತ್ತು ಎನ್ನಲಾಗಿದೆ.
"ನಮಗೆ ಯಾವುದೇ ನೋಟೀಸ್ ನೀಡದೆ ಮುಜರಾಯಿ ಇಲಾಖೆ ಏಕಾಏಕಿ ಮನೆಯನ್ನು ಧ್ವಂಸ ಮಾಡಿದೆ. ಈಗ ನಮ್ಮ ಸಂಸಾರ ಬೀದಿಪಾಲಾಗಿದೆ. ನಮಗೆ ಯಾವುದೇ ಮಾಹಿತಿ ನೀಡದೆ ಈ ರೀತಿ ಮಾಡಿರುವುದು ಯಾವ ನ್ಯಾಯ?" ಎಂದು ವಿಕ್ರಮ್ ಸೂರಿ ಹಾಗೂ ನಮಿತಾ ಮಾಧ್ಯಮಗಳ ಜೊತೆ ತಮ್ಮ ನೋವನ್ನು ತೋಡಿಕೊಂಡರು.
ಆದರೆ ಮುಜರಾಯಿ ಇಲಾಖೆ ಹೇಳುವುದೇನೆಂದರೆ, "ನ್ಯಾಯಾಲಯದ ಆದೇಶದ ಮೇರೆಗೆ ನಾವು ಶುಕ್ರವಾರ (ಅ.26) ವಿಕ್ರಮ್ ಸೂರಿ ದಂಪತಿಗಳು ವಾಸವಾಗಿದ್ದ ಮನೆಯನ್ನು ತೆರವುಗೊಳಿಸಿದ್ದೇವೆ. ಇವರು ಕಳೆದ 28 ವರ್ಷಗಳಿಂದ ಈ ಮನೆಗೆ ಯಾವುದೇ ಬಾಡಿಗೆ ಕಟ್ಟುತ್ತಿರಲಿಲ್ಲ" ಎಂದಿದೆ.
"ಈ ಮನೆಗೆ ನಾವು ತಿಂಗಳಿಗೆ ರು. 4 ಸಾವಿರ ಬಾಡಿಗೆ ಕಟ್ಟುತ್ತಿದ್ದೆವು. ನಮಗೆ ಮೊದಲೇ ನೋಟೀಸ್ ನೀಡಿದ್ದಿದ್ದರೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆದರೆ ಮುಜರಾಯಿ ಇಲಾಖೆ ಯಾವುದೇ ಸೂಚನೆ ನೀಡದೆ ನಮ್ಮ ಮನೆಯನ್ನು ತೆರವುಗೊಳಿಸಿರುವುದು ನಮಗೆ ತುಂಬಾ ನೋವುಂಟು ಮಾಡಿದೆ" ಎಂದಿದ್ದಾರೆ ವಿಕ್ರಮ್ ಸೂರಿ ಹಾಗೂ ನಮಿತಾ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, "ಮನೆ ತೆರವಿಗೆ ಕೋರ್ಟ್ ಆದೇಶ ನೀಡಿತ್ತು. ಆ ಮೇರೆಗೆ ನಾವು ಅತಿಕ್ರಮವಾಗಿದ್ದ ಇವರ ಮನೆಯನ್ನು ಧ್ವಂಸ ಮಾಡಿದ್ದೇವೆ. ನಾವು ಕಾನೂನು ಬದ್ಧವಾಗಿ ಮನೆಯನ್ನು ತೆರವುಗೊಳಿಸಿದ್ದೇವೆ. ಕಾನೂನು ಪ್ರಕಾರ ಏನೇನು ಕ್ರಮಕೈಗೊಳ್ಳಬೇಕೋ ಅದನ್ನು ನಾವು ಮಾಡಿದ್ದೇವೆ ಅಷ್ಟೇ" ಎಂದಿದ್ದಾರೆ.
ವಿಕ್ರಂ ಮೂಲತಃ ಕಲಾವಿದರ ಕುಟುಂಬದ ಹುಡುಗ. ಅವರ ತಂದೆ ಸಂಜಯ್ ಸೂರಿ ಪ್ರತಿಷ್ಠಿತ ಗುಬ್ಬಿ ಕಂಪನಿ ಕಲಾವಿದರಾಗಿದ್ದರು. ಪ್ರಕಾಶ್ ರೈ ಅಭಿನಯಿಸಿದ್ದ 'ಬಿಸಿರು ಕುದುರೆ' ಚಿತ್ರದಲ್ಲಿ ವಿಕ್ರಂ ಬಾಲ ಕಲಾವಿದನಾಗಿ ಅಭಿನಯಿಸಿದ್ದ. ಕೊಟ್ರೇಶಿ ಕನಸು, ಚಿನ್ನಾರಿ ಮುತ್ತ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಇನ್ನು ವಿಕ್ರಮ್ ಅವರ ಬಾಳ ಸಂಗಾತಿ ನಮಿತಾ ಅವರೂ ಅಷ್ಟೇ ಕಿರುತೆರೆಯಲ್ಲಿ ಚಿರಪರಿಚಿತರು. ಗೋಧೂಳಿ, ಬಿದಿಗೆ ಚಂದ್ರಮ ಧಾರಾವಾಹಿಗಳ ಮೂಲಕ ಪರಿಚಿತರು. 'ಸಿಲ್ಲಿ ಲಲ್ಲಿ' ಪಾತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈಗ ಇವರಿಬ್ಬರ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ.
ಈ ವಿವಾದಿತ ಸ್ಥಳದಲ್ಲಿ ಸಂಜಯ್ ಸೂರಿ ಸ್ಥಾಪಿಸಿದ ಸೂರ್ಯ ಕಲಾವಿದರು ಸಂಸ್ಥೆಯ ಸದಸ್ಯರು ಅನೇಕ ವರ್ಷಗಳಿಂದ ರಂಗ ತಾಲೀಮು ನಡೆಸಿಕೊಂಡು ಬಂದಿದ್ದಾರೆ. ಸೂರ್ಯ ಕಲಾವಿದರು ತಂಡ ನೃತ್ಯ ರೂಪಕಗಳನ್ನು ಪ್ರದರ್ಶಿಸುವುದರಲ್ಲಿ ಜನಪ್ರಿಯತೆ ಗಳಿಸಿದೆ. (ಏಜೆನ್ಸೀಸ್)