Don't Miss!
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ 'ಪದ್ಮಾವತಿ'ಯ ತುಳಸಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪದ್ಮಾವತಿ' ಧಾರಾವಾಹಿಯಲ್ಲಿ ನಾಯಕಿ ತುಳಸಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಚೆಂದುಳ್ಳಿ ಚೆಲುವೆಯ ಹೆಸರು ದೀಪ್ತಿ ಮನ್ನೆ.
ಬೆಳ್ಳಿತೆರೆಯ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟು 'ಪದ್ಮಾವತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಜಿಗಿದ ಈಕೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಮೋಡಿ ಮಾಡಿದ ಬೆಡಗಿ. ಸದ್ಯ ತೆಲುಗಿನ 'ರಾಧಮ್ಮ ಕುತುರು' ಧಾರಾವಾಹಿಯಲ್ಲಿ ನಾಯಕಿ ಅಕ್ಷರಾ ಆಗಿ ಅಭಿನಯಿಸುತ್ತಿರುವ ದಾವಣಗೆರೆಯ ಬೆಡಗಿ ಕಲಿತದ್ದು ಫ್ಯಾಷನ್ ಡಿಸೈನ್.
ಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಕಾಮತ್
ಫ್ಯಾಷನ್ ಡಿಸೈನಿಂಗ್ನಲ್ಲಿ ಪದವಿ
ಬೆಂಗಳೂರಿನ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸೇರಿದ ದೀಪ್ತಿ ಮನ್ನೆ ಫ್ಯಾಷನ್ ಡಿಸೈನಿಂಗ್ನಲ್ಲಿ ಪದವಿಯನ್ನು ಪಡೆದುಕೊಂಡರು. ಪದವಿಯ ಸಮಯದಲ್ಲಿ ದೀಪ್ತಿಯನ್ನು ನೋಡುತ್ತಿದ್ದ ಅನೇಕ ಸ್ನೇಹಿತರು ನೀನು ಯಾಕೆ ನಟಿಸಬಾರದು? ಯಾಕೆ ಬಣ್ಣದ ಲೋಕಕ್ಕೆ ಕಾಲಿಡಬಾರದು ಎಂದು ಪ್ರಶ್ನಿಸುತ್ತಿದ್ದಾರೆ. ಆ ಒಂದು ಪ್ರಶ್ನೆ ತನ್ನ ಜೀವನದ ದಿಕ್ಕನ್ನೇ ಬದಲಿಸುತ್ತದೆ ಎಂದು ಸ್ವತಃ ದೀಪ್ತಿ ಮನ್ನೆ ಅವರೇ ಅಂದಕೊಂಡಿರಲಿಲ್ಲ.
ಪದವಿಯ ಬಳಿಕ ನಟನೆಯಲ್ಲಿ ಒಲವು
ಸ್ನೇಹಿತರ ಪ್ರಶ್ನೆಯನ್ನು ಗಂಭೀರವಾಗಿ ಸ್ವೀಕರಿಸಿದ ದೀಪ್ತಿ ಮನ್ನೆ ಪದವಿಯ ನಂತರ ನಟನಾ ಕ್ಷೇತ್ರಕ್ಕೆ ಕಾಲಿಡುವ ನಿರ್ಧಾರ ತೆಗೆದುಕೊಂಡರು. ನಟಿಯಾಗಬೇಕು ಅಂದುಕೊಂಡಿದ್ದೇ ತಡ, ಇದ್ದ ಆಡಿಶನ್ಗಳನ್ನೆಲ್ಲಾ ಕೊಡಲು ಆರಂಭಿಸಿದ್ದರು.
ತಮಿಳಿನಲ್ಲಿ ಮೊದಲ ಸಿನಿಮಾ
ಒಂದಷ್ಟು ಆಡಿಶನ್ ಗಳಿಗೆ ಹೋದ ಮತ್ತೆ 'ಎವನ್' ಎನ್ನುವ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡರು ದೀಪ್ತಿ ಮನ್ನೆ. ನಂತರ ತಮಿಳು ಮಾತ್ರವಲ್ಲದೇ ತೆಲುಗು, ಕನ್ನಡ ಸಿನಿಮಾಗಳಿಂದ ಅವಕಾಶಗಳನ್ನು ಪಡೆದರು. 'ನಮ್ಮೂರ ಹೈಕ್ಳು' ಕನ್ನಡ ಸಿನಿಮಾದ ಜೊತೆಗೆ ತೆಲುಗಿನ 'ಇಕ್ ಸೇ ಲವ್ ' ಹಾಗೂ ತಮಿಳಿನ 'ದೇವದಾಸ್ ಬ್ರದರ್ಸ್' ಸಿನಿಮಾದಲ್ಲಿ ಅಭಿನಯಿಸಿದರು.
ಪರಭಾಷೆ ಕಿರುತೆರೆಯಲ್ಲಿ ನಟನೆ
ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲಿ ಮಿಂಚಿದ ದೀಪ್ತಿ ಮನ್ನೆ ನಂತರ ಕಾಲಿಟಿದ್ದು ಕಿರುತೆರೆಗೆ. 'ಪದ್ಮಾವತಿ' ಧಾರಾವಾಹಿಯ ತುಳಸಿಯಾಗಿ ಬದಲಾದ ದೀಪ್ತಿ ನಟಿಸಿದ್ದು ಒಂದೇ ಧಾರಾವಾಹಿ ಆದರೂ ಈಗಲೂ ಆ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿದ್ದಾರೆ. ಇಂದಿಗೂ ಪದ್ಮಾವತಿಯ ತುಳಸಿ ಆಗಿಯೇ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ದೀಪ್ತಿ ಇದೀಗ 'ರಾಧಮ್ಮ ಕುತುರ'ವಿನ ಅಕ್ಷರಾ ಆಗಿ ಪರಭಾಷೆಯ ವೀಕ್ಷಕರನ್ನು ರಂಜಿಸುತ್ತಿದ್ದಾರೆ.