ಈಟಿವಿ ಕನ್ನಡ ಕಾರ್ಯಕ್ರಮಗಳಿಗೆ ಬಂದಿದೆ ಆನೆಬಲ

By ಶ್ರೀರಾಮ್ ಭಟ್
<ul id="pagination-digg"><li class="previous"><a href="/tv/kannada-entertainment-channels-heavy-competition-069047.html">« Previous</a>

Parameshwar
ಈ ಕಡೆ ಸುವರ್ಣ ವಾಹಿನಿ ಕೂಡ ರಾಘವೇಂದ್ರ ಅವರ ಜಾಗಕ್ಕೆ ಯಾರನ್ನೂ ನೇಮಕ ಮಾಡಿಲ್ಲ ಎನ್ನುವುದು ಕುತೂಹಲಕರ ಸಂಗತಿ. ಸದ್ಯಕ್ಕೆ 'ಕನ್ನಡದ ಕೋಟ್ಯಾಧಿಪತಿ' ಯಶಸ್ಸಿನ ಹ್ಯಾಂಗೋವರ್ ಹಾಗೂ ಸಾಕಷ್ಟು ರೀಮೇಕ್ ಧಾರಾವಾಹಿಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸುವರ್ಣ ವಾಹಿನಿಗೆ ಅದು ಅಗತ್ಯ ಎಂದು ಕೂಡ ಅನಿಸುತ್ತಿಲ್ಲ ಎನ್ನಬಹುದು. ಜೊತೆಯಲ್ಲಿ ಸುವರ್ಣ ಚಾನೆಲ್ಲಿಗೆ ದೊಡ್ಡ ದೊಡ್ಡ ಬ್ಯಾನರ್ ಸಿನಿಮಾಗಳ ಬೆಂಬಲವೂ ಇದೆ. ಆದರೂ ಮುಂದಿನ ನಡೆಯ ಬಗ್ಗೆ ಕಾರ್ಯತಂತ್ರ ರೂಪಿಸಿರುವ ಅದು ಸದ್ಯದಲ್ಲೇ ಹೊಸ ಹೆಜ್ಜೆ ಇಡುವ ಸೂಚನೆ ಕಂಡುಬಂದಿದೆ.

ಇನ್ನು ಈಟಿವಿ ಕನ್ನಡದ ಕಡೆ ಬಂದರೆ, ಕಲರ್ಸ್ ಚಾನೆಲ್ ಪ್ರಸಿದ್ಧಿ ಹಾಗೂ ಬೆಂಬಲ, ಪ್ರತಿಭಾನ್ವಿತ ಪರಮೇಶ್ವರ ಗುಂಡ್ಕಲ್ 'ಲೀಡರ್ ಶಿಪ್' ಜೊತೆಗೆ ಹೊಸ ಪ್ರತಿಭೆಗಳ ಆಗಮನದಿಂದ ಈಟೀವಿಯ ಕಾರ್ಯಕ್ರಮಗಳಲ್ಲಿ ಭಾರಿ ಬದಲಾವಣೆ ಬರುವುದು ಸಹಜ ಎನ್ನುತ್ತಿವೆ ಉದ್ಯಮದ ಮೂಲಗಳು. ಇದನ್ನೆಲ್ಲಾ ಈಗಾಗಲೇ ಊಹಿಸಿದಂತಿರುವ ಸುವರ್ಣ ವಾಹಿನಿ, ಪುನಃ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಜನವರಿ ಕೊನೆಯಲ್ಲಿ ಪ್ರಸಾರ ಮಾಡಲು ತೀರ್ಮಾನಿಸಿದೆ. ಈ ಮೊದಲಿನ ಕೋಟ್ಯಾಧಿಪತಿಗೆ ನಿರ್ದೇಶಕರಾಗಿದ್ದ ರಾಘವೇಂದ್ರ ಅವರಿಲ್ಲದೇ ಮುಂಬರುವ ಕೋಟ್ಯಾಧಿಪತಿ ಕಾರ್ಯಕ್ರಮ ಯಾವ ಮಟ್ಟಕ್ಕೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಇತ್ತ ಇನ್ನೊಂದು ಪ್ರಮುಖ ಸ್ಪರ್ಧಿಯಾಗಿರುವ ಜೀ ಕನ್ನಡ ವಾಹಿನಿ, 'ಮಮ್ಮಿ ನಂಬರ್ ಒನ್' ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದೆ. ಜೊತೆಯಲ್ಲಿ ಈ ವಾರ ಕವಿತಾ ಲಂಕೇಶ್ ನಿರ್ದೇಶನದ 'ನನ್ನ ಪ್ರೀತಿಯ ಶ್ರೀಮತಿ' ಧಾರಾವಾಹಿಯ ಪ್ರಸಾರ ಆರಂಭವಾಗಿದೆ. ಅಷ್ಟೇ ಅಲ್ಲದೇ, ಈಗಾಗಲೇ ಟಿಆರ್ ಪಿ ಹಾಗೂ ಜನಪ್ರಿಯತೆಯಲ್ಲಿ ಮುಂದಿರುವ 'ರಾಧಾ ಕಲ್ಯಾಣ', 'ಪಾರ್ವತಿ ಪರಮೇಶ್ವರ', 'ಪಾಂಡುರಂಗ ವಿಠಲ' ಹಾಗೂ 'ಕನಕ' ಮುಂತಾದ ಧಾರಾವಾಹಿಗಳು ಎಂದಿನಂತೆ ಪ್ರಸಾರ ಮುಂದುವರಿಸಲಿವೆ. ಮುಂದಿನ ಬದಲಾವಣೆಗೆ ಸಂಚಲನ ಸೃಷ್ಟಿಯಾಗಿದೆ.

ಈಟಿವಿ ಹಾಗೂ ಸುವರ್ಣ ಚಾನೆಲ್ಲುಗಳಲ್ಲಾಗಿರುವ ಬೆಳವಣಿಗೆಯಿಂದ ಬಹಳಷ್ಟು ಆತಂಕಗೊಂಡಿರುವ ಉದಯ ಟೀವಿ ಹೊಸ ಪ್ರೋಗ್ರಾಮಿಂಗ್ ಹೆಡ್ ಹುಡುಕಾಟದಲ್ಲಿದೆ. ಅಷ್ಟೇ ಅಲ್ಲ, ಇತ್ತೀಚಿಗೆ ಉದಯ ಟಿವಿಯಲ್ಲಿ ಬರುತ್ತಿರುವ ಧಾರಾವಾಹಿಗಳ ಗುಣಮಟ್ಟ ಕುಸಿಯುತ್ತಿದೆ, ಅದಕ್ಕಾಗಿ ಕಿರುತೆರೆ ವೀಕ್ಷಕರು ಈಟಿವಿ, ಜೀಕನ್ನಡ ಹಾಗೂ ಸುವರ್ಣ ವಾಹಿನಿಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಸಾರ್ವಜನಿಕರ ಅನಿಸಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿರುವ ಉದಯ ಟಿವಿ ಈಗ ಮಹತ್ವದ ಹೆಜ್ಜೆಯಿಡಲು ಸಜ್ಜಾಗುತ್ತಿದೆ.

ಮತ್ತೊಂದೆಡೆ, ಕಸ್ತೂರಿ ವಾಹಿನಿಯ ಅನಿತಾ ಕುಮಾರಸ್ವಾಮಿಯವರು ಇನ್ನೊಂದು ಸಲ ಕಸ್ತೂರಿಯನ್ನು ರೀಲಾಂಚ್ ಮಾಡಿ ಹೊಸ ಐದು ಹೊಸ ಧಾರಾವಾಹಿಗಳನ್ನು ಪ್ರಾರಂಭಿಸಿ ಯಶಸ್ವಿ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಸದ್ಯಕ್ಕೆ ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳ ತಳಮಟ್ಟದಲ್ಲಿರುವ ಟಿಆರ್ ಪಿಯನ್ನು ಹೆಚ್ಚಿಸಿ ಯಶಸ್ಸು ಪಡೆದು ಟಿಆರ್ ಪಿ ಪಟ್ಟಿಯಲ್ಲಿ ಭಡ್ತಿ ಹೊಂದುವ ಪ್ರಯತ್ನದಲ್ಲಿದ್ದಾರೆ ಅನಿತಾ ಕುಮಾರಸ್ವಾಮಿ.

ಒಟ್ಟಿನಲ್ಲಿ ಕನ್ನಡದ ಮನರಂಜನೆ ವಾಹಿನಿಗಳಲ್ಲಿ ಇದೀಗ ಆರಂಭವಾಗಿರುವ ಸ್ಪರ್ಧೆಯಿಂದ ಪ್ರೇಕ್ಷಕರು ಕನ್ನಡದ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹೊಸತನವನ್ನಂತೂ ಖಂಡಿತಾ ನಿರೀಕ್ಷೆ ಮಾಡಬಹುದು. ಜೊತೆಗೆ ವಾಹಿನಿಗಳ ಟಿಆರ್ ಪಿ ರೇಟಿಂಗ್ ನಲ್ಲೂ ಸ್ಥಾನಪಲ್ಲಟ ಗ್ಯಾರಂಟಿ ಎನ್ನುತ್ತಿವೆ ಕಿರುತೆರೆ ಮೂಲಗಳು. ಸದ್ಯದಲ್ಲೇ ಆಗಲಿರುವ ಈ ಬದಲಾವಣೆಗಳ ಕ್ಷಣಕ್ಕೆ ಕಾಯಲಾಗುತ್ತಿದೆ ಅಷ್ಟೇ!... (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/tv/kannada-entertainment-channels-heavy-competition-069047.html">« Previous</a>

More from Filmibeat

English summary
Kannada Entertainment Channels are in Heavy Competition now. This Started When Parameshwar Gudkal appointed as the Programming Head in Etv Kannada and Raghavendra Hunsur as Non-Fiction Head who are working earlier in Zee Kannada and Suvarna respectively. Have to wait and see the result in future. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X